ರಾಜಕೀಯ ಮ್ಯಾಥ್ಸ್ ಅಲ್ಲ ಅದು ಕೆಮೆಸ್ಟ್ರಿ, ಚುನಾವಣೆಯಲ್ಲಿ ನಾವು ಸೋತರೆ ಸರ್ಕಾರ ಇರುತ್ತಾ: ಸಿದ್ದರಾಮಯ್ಯ

Public TV
1 Min Read
Siddaramaiah

– ಚಾಮುಂಡೇಶ್ವರಿಯಲ್ಲಿ ಮತ್ತೆ ಚುನಾವಣೆಗೆ ನಿಲ್ಲಲ್ಲ
– 2+2=4 ಅಲ್ಲ, ಅದು 3 ಆಗಬಹುದು

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ನಾವು ಸೋತರೆ ಸರ್ಕಾರ ಇರುತ್ತಾ? ಹೀಗಾಗಿ ನಾವು ಒಗ್ಗಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಜಯಪುರದ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ಎನ್ನುವುದು ಮ್ಯಾಥ್‍ಮೆಟಿಕ್ಸ್ ಅಲ್ಲ ಅದು ಕೆಮೆಸ್ಟ್ರಿ. 2+2=4 ಅಲ್ಲ, ಅದು 3 ಆಗಬಹುದು, 5 ಕೂಡ ಆಗಬಹುದು. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ. ಇದು ಕೆಮಿಸ್ಟ್ರಿ, ಅರಿಥ್‍ಮೆಟಿಕ್ ಅಥವಾ ಮ್ಯಾಥಮೆಟಿಕ್ಸ್ ಅಲ್ಲ. ಇದನ್ನ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಲೋಕಸಭಾ ಚುನಾವಣೆಯಲ್ಲಿ ನಾವು ಸೋತರೆ ಸರ್ಕಾರ ಇರುತ್ತಾ ಎಂದು ಪ್ರಶ್ನಿಸಿದರು.

MND JDS CONGRESS

ನಾನು ಮಂತ್ರಿಯಾಗಿಲ್ಲ. ಮುಖ್ಯಮಂತ್ರಿ ಆಗಿರೋದು ಕುಮಾರಸ್ವಾಮಿ, ಮಂತ್ರಿ ಆಗಿರೋದು ಜಿಟಿಡಿ, ಸಾ.ರಾ.ಮಹೇಶ್. ಬಿಜೆಪಿ ಅಭ್ಯರ್ಥಿ ಗೆಲ್ಲಬಾರದು. ನಾವು ಗೆಲ್ಲಬೇಕು. ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎಂದು ಹೇಳಿದರು.

ನಾನು ಮತ್ತೆ ಚಾಮುಂಡೇಶ್ವರಿಯಲ್ಲಿ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಬಹಿರಂಗ ವೇದಿಕೆಯಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ ನೀವೆಲ್ಲಾ ಸೇರಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *