ಬೆಂಗಳೂರು: ರಾಜ್ಯಕ್ಕೆ ಅನುದಾನ ಕೊರತೆ ಆಗಿದ್ದರೆ ಜನತೆಯ ಪರವಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಿಗಳ ಜೊತೆ ಕೂತು ಚರ್ಚೆ ಮಾಡಲಿ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸಲಹೆ ನೀಡಿದ್ದಾರೆ.
ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುದಾನ ಅನ್ಯಾಯ ಆಗ್ತಿದೆ ಎಂಬ ಸಿಎಂ ಆರೋಪಕ್ಕೆ ಜೆ.ಪಿ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯಿಸಿದರು. ಈ ವೇಳೆ, ಸಿಎಂ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಲಾದರೂ ಕೇಂದ್ರದ ಸಭೆಗೆ ಹೋಗಿದ್ದಾರೆ. ಇಷ್ಟು ದಿನ ಕೇಂದ್ರದ ಸಭೆಗೆ ಹೋಗಿರಲಿಲ್ಲ. ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾಗಿ ಮಾತಾಡಿರಲಿಲ್ಲ. ಉತ್ತಮ ಬಾಂಧವ್ಯ ಬೆಳೆಸಿಕೊಂಡಿರಲಿಲ್ಲ. ಈಗ 16ನೇ ಹಣಕಾಸು ಆಯೋಗದ ಸಭೆಗೆ ಹೋಗಿದ್ದಾರೆ. ಅವರಿಗೆ ಹೃದಯ ತುಂಬಿ ಧನ್ಯವಾದ ಹೇಳ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಏರ್ಇಂಡಿಯಾ ವಿಮಾನ ದುರಂತ ತನಿಖೆಗೆ ಉನ್ನತ ಮಟ್ಟದ ಸಮಿತಿ – 3 ತಿಂಗಳ ಡೆಡ್ಲೈನ್: ಸಚಿವ ರಾಮಮೋಹನ್ ನಾಯ್ಡು
ಅನುದಾನ ಕೊರತೆ ಆಗಿದ್ದರೆ ರಾಜ್ಯದ ಜನರ ಪರವಾಗಿ ಪ್ರಧಾನಿ ಮೋದಿ ಅವರ ಜೊತೆ ಕೂತು ಚರ್ಚೆ ಮಾಡಲಿ. ಕುಮಾರಸ್ವಾಮಿ ಅವರು ಕೂಡಾ ಸಿಎಂ ಜೊತೆ ನಿಂತು ಅನುದಾನ ಕೊಡಿಸ್ತಾರೆ. ಅನುದಾನ ಕೊರತೆ ಇದ್ದರೆ ಕೂತು ಚರ್ಚೆ ಮಾಡಬೇಕು. ಸಿಎಂ, ಪ್ರಧಾನಿ ಸ್ಥಾನ ಅನ್ನೋದು ಉನ್ನತ ಸ್ಥಾನ. ಬಹಿರಂಗವಾಗಿ ನಮಗೆ ಸಿಕ್ತಿಲ್ಲ ಅಂತ ಮಾತಾಡೋದು ಬೇಡ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರದ ಮೇಲೆ ಗೂಬೆ ಕೂರಿಸುವ ಸಿಎಂ ಪ್ರಯತ್ನ, ಕುತಂತ್ರ, ಷಡ್ಯಂತ್ರ: ಬಿವೈವಿ
ಸೌಹಾರ್ದಯುತವಾಗಿ ಕೂತು ಮಾತುಕತೆ ಮಾಡಲಿ. ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಧಾನಿ ಅವರ ಬಳಿ ಮಾತಾಡಲಿ. ಪ್ರಧಾನಿಗಳು ಇದಕ್ಕೆ ಸ್ಪಂದನೆ ಮಾಡ್ತಾರೆ. ಇಲ್ಲಿವರೆಗೂ ಏನೆಲ್ಲ ಸಿಗಬೇಕಿತ್ತೋ ಅವೆಲ್ಲವೂ ಸಿಕ್ಕಿದೆ. ಮುಂದೆಯೂ ಸಿಗುತ್ತದೆ. ಕುಮಾರಸ್ವಾಮಿ ಅವರು ಕೇಂದ್ರದ ಸಚಿವರು. ಅವರು ಕೂಡಾ ಸಹಾಯ ಮಾಡ್ತಾರೆ ಎಂದಿದ್ದಾರೆ.