ಬೆಳಗಾವಿ: ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಂಧಾನ ಬಾಗಿಲು ಬಂದ್ ಆಗಿದೆ. ರಮೇಶ್ ಜಾರಕಿಹೊಳಿ ಇದ್ದರೆ ಇರಲಿ, ಹೋದರೆ ಹೋಗಲಿ. ಪಕ್ಷ ಬಿಟ್ಟು ಹೋಗಿ ಎಂದು ಯಾರೂ ಹೇಳಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಚಿವ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಗೆ ಗೈರಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಕೆಳ ಹಂತದ ಕಾರ್ಯಕರ್ತರವರೆಗೂ ಯಾರೂ ಬಿಟ್ಟು ಹೋಗಿ ಅಂತ ಹೇಳಿಲ್ಲ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ವಿಚಾರ ಮುಗಿದ ಹೋದ ಅಧ್ಯಾಯ. ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಏನೂ ಉಳಿದಿಲ್ಲ ಎಂದರು.
ಮಂತ್ರಿಯಾಗಿ ಅಧಿಕಾರಿಯಾಗಿ ಸ್ಥಾನ ನೀಡಿದ ಬಳಿಕ ಇಡೀ ಜಿಲ್ಲೆಯ ಜವಾಬ್ದಾರಿ ಅವರ ಮೇಲೆಯೇ ಇರುತ್ತದೆ. ಆದರೆ ಅವರು ಮಂತ್ರಿಯಾಗಿದ್ದಾಗಲೇ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆ. ಜಿಲ್ಲೆಯನ್ನ ಸಂಬಾಳಿಸಬೇಕಿದ್ದ ಇವರನ್ನೇ ಸಂಬಾಳಿಸಬೇಕಿದೆ. ಪಕ್ಷದಲ್ಲಿ ಇರುವುದು ಬಿಡುವುದು ಅವರ ವಿಚಾರಷ್ಟೇ ಸ್ಪಷ್ಟಪಡಿಸಿದರು.