ಮುಸ್ಲಿಮರು ಶಿಕ್ಷಣದಲ್ಲಿ ಹಿಂದುಳಿದರೆ ದೇಶಕ್ಕೇ ತೊಂದರೆ- ಆರಿಫ್ ಮೊಹಮ್ಮದ್ ಖಾನ್

Public TV
1 Min Read
Arif Mohammed Khan

ನವದೆಹಲಿ: ಮುಸ್ಲಿಮರು ಶಿಕ್ಷಣದಲ್ಲಿ (Muslim Education) ಹಿಂದುಳಿದರೆ ದೇಶಕ್ಕೇ ತೊಂದರೆಯಾಗುತ್ತದೆ ಎಂದು ಕೇರಳ (Kerala) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಎಚ್ಚರಿಸಿದ್ದಾರೆ.

ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮ ಹಿನ್ನಡೆಗೆ ನಾವೇ (ಮುಸ್ಲಿಮರೇ) ಕಾರಣ. ಏಕೆಂದರೆ ನಾವು ನಮ್ಮ ಮೇಲಿನ ಆರೋಪವನ್ನು ಮತ್ತೊಬ್ಬರ ಮೇಲೆ ಹೊರಿಸಲು ಪ್ರಯತ್ನಿಸುವುದಿಲ್ಲ. ಅದಕ್ಕಾಗಿ ಹಿಂದುಳಿದಿದ್ದೇವೆ. ಮುಸ್ಲಿಮರು ಶಿಕ್ಷಣದಲ್ಲಿ (Muslim Education) ಹಿಂದುಳಿದರೆ ಇಡೀ ದೇಶಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೋವಾ, ಆಟೋ ಡಿಕ್ಕಿ- ಬಾಲಕ ಸಾವು, 10ಕ್ಕೂ ಹೆಚ್ಚು ಮಂದಿಗೆ ಗಾಯ

ಆಧುನಿಕ ಶಿಕ್ಷಣ ಇಸ್ಲಾಂಗೆ ವಿರುದ್ಧವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಮುಸ್ಲಿಮರು ಶಿಕ್ಷಣ ಮುಂದುವರಿಸದೇ ನಿಷೇಧಿಸಲು ನಿರ್ಧರಿಸುತ್ತಿದ್ದಾರೆ. ಹೊರತಾಗಿ ಕಳಿಸಿದ್ರೆ ಅಂಥರವ ವಿರುದ್ಧ ಅವರೇ ಕ್ರಮ ತೆಗೆದುಕೊಳ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 16 ವರ್ಷಗಳ ಹಿಂದೆ ಪತಿ, ಈಗ ಪತ್ನಿ – ದಂಪತಿ ಜೀವನ ವಿಮಾನ ದುರಂತದಲ್ಲಿ ಅಂತ್ಯ

Quran

ಧಾರ್ಮಿಕ ಕಾರಣಗಳಿಗಾಗಿ `ಫತ್ವಾ’ಗಳನ್ನ ಎಂದಿಗೂ ಬಳಸಲಾಗುವುದಿಲ್ಲ. ಕುರಾನ್‌ನಲ್ಲಿ 200 ನಿದರ್ಶನಗಳಿವೆ. ಆ ಪ್ರಕಾರ ಯಾರು ಸರಿ, ಯಾರು ತಪ್ಪು ಎಂದು ಯಾರೊಬ್ಬರೂ ನಿರ್ಧಿರಿಸಲು ಸಾಧ್ಯವಿಲ್ಲ. ಆದ್ರೆ ಈಗ `ಫತ್ವಾ’ಗಳನ್ನ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *