ಸಚಿವ ಸಂಪುಟದಲ್ಲಿ ಕುಮಟಳ್ಳಿ ಸೇರಿಸಿಕೊಂಡಿದ್ರೆ ಇನ್ನಷ್ಟು ಗೌರವ ಬರ್ತಿತ್ತು: ನೆಹರು ಓಲೇಕಾರ

Public TV
1 Min Read
nehru olekar

ಹಾವೇರಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಅವರನ್ನ ಸೇರಿಸಿಕೊಂಡಿದ್ದರೆ ಇನ್ನಷ್ಟು ಗೌರವ ಬರುತ್ತಿತ್ತು ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ಗುರುವಾರ ಸಚಿವ ಸಂಪುಟದ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಅವರನ್ನ ಸೇರಿಸಿಕೊಂಡಿದ್ದರೆ ಇನ್ನಷ್ಟು ಗೌರವ ಬರುತ್ತಿತ್ತು. ಅವರನ್ನ ಯಾಕೆ ಕೈಬಿಟ್ಟಿದ್ದಾರೋ ಗೊತ್ತಿಲ್ಲ. ಯಾರಿಂದ ಸರ್ಕಾರ ಬಂದಿದೆಯೋ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ಅದು ಒಳ್ಳೆಯದು. ಉತ್ತಮ ಕೆಲಸ ಮಾಡಲು ಹಾರೈಕೆ ಮಾಡಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡಿ. ಹತ್ತು ಜನ ಸಚಿವರಿಗೂ ಶುಭ ಹಾರೈಸಿದ್ದೇವೆ ಎಂದು ನೆಹರು ಓಲೇಕಾರ ಹೇಳಿದರು.

mahesh kumathalli

ನಾನು ಸಿಎಂ ಯಡಿಯೂರಪ್ಪ ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ನಾವು ಮನವಿ ಮಾಡಿದ್ದೇವೆ, ಅವರು ಮುಂದೆ ನಮಗೆ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ನಿಗಮ ಮಂಡಳಿ ಕೊಡುತ್ತಾರೋ ಅಥವಾ ಸಚಿವ ಸ್ಥಾನ ಕೊಡುತ್ತಾರೋ ಅದು ಸಿಎಂಗೆ ಬಿಟ್ಟಿದ್ದು ಎಂದರು.

Share This Article
Leave a Comment

Leave a Reply

Your email address will not be published. Required fields are marked *