– ಬಿಗ್ಬಾಸ್ ಮನೆಗೂ ಆಫರ್ ಬಂದಿದೆ
ಬೆಂಗಳೂರು: ಮಾತೃ ವಿಯೋಗ ಮತ್ತು ಹಲವು ವೈಯಕ್ತಿಕ ಸಮಸ್ಯೆಗಳಿಂದ ನೊಂದಿದ್ದ ನಟಿ ವಿಜಯಲಕ್ಷ್ಮಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸುದ್ದಿಗೋಷ್ಠಿ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನನ್ನ ತಂದೆಯನ್ನ ಕಳೆದುಕೊಂಡ ಮೇಲೆ ಸಾಕಷ್ಟು ಕಷ್ಟಕ್ಕೆ ಸಿಲುಕಿದ್ದೆ. ಈ ವೇಳೆ ಜೀವನದಲ್ಲಿ ಹಲವು ಕೆಟ್ಟ ಘಟನೆಗಳನ್ನ ಅನುಭವಿಸಿದ್ದೇನೆ. ಈ ನಡುವೆ ನಾನು ನನ್ನ ತಾಯಿಯನ್ನ ಕಳೆದುಕೊಂಡೆ, ನನ್ನ ಅಕ್ಕನ ಆರೋಗ್ಯವು ಹಾಳಾಗಿತ್ತು. ಈ ಎಲ್ಲಾ ಕಷ್ಟಗಳಿಂದ ನಾನು ನೊಂದಿದ್ದೆ ಎಂದರು. ಇದನ್ನೂ ಓದಿ: ಕರ್ನಾಟಕದಲ್ಲಿ ನಾನು ಭಿಕ್ಷುಕಿನೇ: ನಟಿ ವಿಜಯಲಕ್ಷ್ಮಿ
ಈಗ ನನಗೆ ನನ್ನ ಕನ್ನಡ ಅಭಿಮಾನಿಗಳು ನನ್ನ ಕುಟುಂಬವಾಗಿ ನನಗೆ ಸಹಾಯ ಮಾಡಿದ್ದಾರೆ. ನಾನು ಅವರೆಲ್ಲರಿಗೂ ಚಿರ ಋಣಿ. ಮುಂದಿನ ದಿನಗಳಲ್ಲಿ ನಾನು ಮತ್ತೆ ಈ ಹಿಂದಿನ ವಿಜಯಲಕ್ಷ್ಮಿಯಂತೆ ಪರೆದೆ ಮೇಲೆ ನಿಮ್ಮೆಲ್ಲರ ಆಶೀರ್ವಾದದಿಂದ ಕಾಣಿಸಿಕೊಳ್ಳುತ್ತೇನೆ. ಜೊತೆಗೆ ಬಿಗ್ ಬಾಸ್ ಮನೆಗೂ ಸಹ ಆಫರ್ ಬಂದಿದೆ. ಅಲ್ಲದೆ ಈಗಾಗಲೇ ಹಲವು ಕಥೆಗಳು ಸಹ ನನ್ನನ್ನು ಹುಡುಕಿ ಬರುತ್ತಿವೆ. ನಾನು ಖಂಡಿತವಾಗಿಯೂ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಿದರು.