ತುಮಕೂರು: ಬಜೆಟ್ ಅಧಿವೇಶನ (Budget Session) ನಂತರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ (S R Srinivas) ತಿಳಿಸಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಕೊಡಗೀಹಳ್ಳಿ ದೊಡ್ಡ ಕೆರೆ ಮತ್ತು ಗಳಗ ವಡ್ಡರಹಟ್ಟಿ ಕೆರೆ ಕೋಡಿ ಮತ್ತು ಏರಿ ಅಭಿವೃದ್ಧಿಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ರಾಜೀನಾಮೆ ಕೊಟ್ಟ ನಂತರವೇ ಬೇರೆ ಪಕ್ಷ ಸೇರುತ್ತೇನೆ. ಮತದಾರರ ಕೈಯಲ್ಲಿರುವ ರಾಜಕೀಯ ಭವಿಷ್ಯ ಯಾರೋ ಬಂದು ಬದಲಿಸಲು ಸಾಧ್ಯವಿಲ್ಲ. ಅಧಿಕಾರ ಕೊಡುವುದು, ಕಿತ್ತು ಕೊಳ್ಳುವುದು ಎರಡೂ ಜನರ ಕೈಯಲ್ಲಿದೆ ಎಂದರು. ಇದನ್ನೂ ಓದಿ: ಬಿಜೆಪಿಗೇ ಪ್ರಧಾನಿಯೇ ಬಂಡವಾಳ, ಮೋದಿ ತೋರಿಸಿ ಮತ ಕೇಳ್ತಿದ್ದಾರೆ: ಸಿದ್ದರಾಮಯ್ಯ ಕಿಡಿ
ಜನರ ಒಡನಾಟ ಇರುವವರು ಜನ ಒಪ್ಪುತ್ತಾರೆ. ಯಾರೋ ಬಂದು ಬದಲಿಸುವುದು ಚಟಕ್ಕೆ ಆಡುವ ಮಾತು ಅಷ್ಟೇ. ಯಾರು ಬೇಕಾದರೂ ಕ್ಷೇತ್ರಕ್ಕೆ ಬರಬಹುದು. ಇಲ್ಲಿಗೆ ಸ್ಟೇ ತಂದಿಲ್ಲ. ಮಾತು ಆಡಬಹುದು. ನಾನು ಪ್ರಧಾನಿ ಮೋದಿ (Narendra Modi) ಅವರನ್ನು ಸೋಲಿಸುವೆ ಎಂದು ಹೇಳಬಹುದು. ಆದರೆ ವಾಸ್ತವದಲ್ಲಿ ಸಾಧ್ಯವೇ. ಹಾಗೆಯೇ ಜನರೇ ಅಂತಿಮ ನಿರ್ಧಾರ ಸಂಪರ್ಕ ಇರುವವರು ಉಳಿಯುತ್ತಾರೆ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k