ಗಂಗಾಧರ ಚಡಚಣ ಹತ್ಯೆ ಪ್ರಕರಣ ಕುರಿತಂತೆ ನನಗೆ ಬೆದರಿಕೆ ಕರೆ ಬಂದಿದ್ದವು-ನಾಗಠಾಣ ಶಾಸಕ

Public TV
1 Min Read
vjp call

ವಿಜಯಪುರ: ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾವೂಕಾರ್ ರಿಂದ ನನಗೆ ಜೀವ ಬೆದರಿಕೆ ಕರೆ ಬಂದಿತ್ತು ಎಂದು ವಿಜಯಪುರದ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

ನನಗೆ ಚುನಾವಣಾ ಪೂರ್ವ ಹಾಗೂ ನಂತರ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. ಚಡಚಣ ಭಾಗದಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆ. ಅದೇ ಕಾರಣಕ್ಕೆ ನನಗೆ ಬೆದರಿಕೆ ಕರೆ ಬಂದಿತ್ತು ಎಂದು ಹೇಳಿದರು.

ಈ ಕುರಿತಂತೆ ಆಗಿನ ಎಸ್ಪಿ ಆಗಿದ್ದ ಕುಲದೀಪ್ ಕುಮಾರ್ ಜೈನ್ ಅವರಿಗೆ ಮಾಹಿತಿ ನೀಡಿದ್ದೆ. ಶಾಸಕನಾದ ಮೇಲೆ ಈಗಿನ ಎಸ್ಪಿ ಅವರಿಗೂ ಸೂಕ್ತ ಭದ್ರತೆ ಒದಗಿಸಲು ಮನವಿ ಮಾಡಿದ್ದೆ. ಆದರೆ ಇದುವರೆಗೂ ನನಗೆ ಸೂಕ್ತ ಭದ್ರತೆ ನೀಡಿಲ್ಲ ಎಂದು ದೂರಿದರು.

ಇನ್ನು ಧರ್ಮರಾಜ್ ಚಡಚಣ ಎನ್ ಕೌಂಟರ್ ಕೂಡ ನಕಲಿ ಇದೆ. ಧರ್ಮರಾಜ್ ಎನ್ ಕೌಂಟರ್ ಕುರಿತು ತನಿಖೆಗಾಗಿ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಚಡಚಣ ಭಾಗದಲ್ಲಿ ಹಿಂದೆ ನಡೆದ ನರಮೇಧಗಳ ಪ್ರಕರಣಗಳನ್ನು ಮತ್ತೆ ತನಿಖೆ ನಡೆಸಲು ಸಿಎಂ ಮತ್ತು ಡಿಸಿಎಂ ಗೆ ಮನವಿ ಮಾಡುವುದಾಗಿ ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *