ವಿದ್ಯಾಭರಣ್ ಜೊತೆಗಿನ ನಿಶ್ಚಿತಾರ್ಥ ವಿಚಾರವಾಗಿ ನಟಿ ವೈಷ್ಣವಿ ಹಲವು ದಿನಗಳ ಕಾಲ ಕಾಣಿಸಿಕೊಂಡಿರಲಿಲ್ಲ. ಮಾಧ್ಯಮಗಳ ಜೊತೆ ಅವರ ತಾಯಿ ಮಾತನಾಡಿ, ‘ಮಗಳ ಮನಸ್ಸು ಸರಿಯಿಲ್ಲ. ಹಾಗಾಗಿ ಮಾಧ್ಯಮಗಳ ಮುಂದೆ ಆಕೆ ಕಾಣಿಸಿಕೊಳ್ಳುತ್ತಿಲ್ಲ’ ಎಂದಿದ್ದರು. ವೈಷ್ಣವಿ ಆಚೆ ಬಾರದೇ ಇರುವ ಕಾರಣಕ್ಕಾಗಿ ಅವರು ಡಿಪ್ರೆಷನ್ ಗೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಅದರಿಂದ ಆಚೆ ಬರಲು ಅವರು ಟ್ಯಾಟೋ ಹಾಕಿಸಿಕೊಂಡರು ಎಂದು ಚರ್ಚೆ ನಡೆದಿತ್ತು. ಈ ಕುರಿತು ವೈಷ್ಣವಿ ಮೊದಲ ಬಾರಿಗೆ ಸ್ಪಷ್ಟನೆ ನೀಡಿದ್ದಾರೆ.
ವಿದ್ಯಾಭರಣ್ ಕುರಿತಾದ ಆಡಿಯೋ ಬಹಿರಂಗವಾದಾಗ ಅವರ ಮನಸಿಗೆ ನೋವು ಆಗಿದ್ದು ನಿಜವಂತೆ. ಆದರೆ, ಯಾವುದೇ ಕಾರಣಕ್ಕೂ ಡಿಪ್ರೆಷನ್ ಗೆ ಹೋಗಿರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಕೆಲವರು ಈ ರೀತಿಯಲ್ಲಿ ಮಾತನಾಡಿದರು. ಅದರಿಂದ ಆಚೆ ಬರುವುದಕ್ಕಾಗಿ ಟ್ಯಾಟೋ ಹಾಕಿಸಿಕೊಂಡರು ಎಂದೆಲ್ಲ ಮಾತನಾಡಿದ್ದನ್ನು ಕೇಳಿದ್ದೇನೆ. ಆದರೆ, ನಾನು ತುಂಬಾ ಸ್ಟ್ರಾಂಗ್. ನನ್ನ ಬದುಕಿಗೆ ಬಗ್ಗೆ ನನಗೆ ಸ್ಪಷ್ಟತೆ ಇದೆ ಎಂದು ಅವರು ಹೇಳಿದ್ದಾರೆ.
ಸದ್ಯ ವೈಷ್ಣವಿ ಮತ್ತೊಂದು ಹೊಸ ಧಾರಾವಾಹಿಯನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಆ ಧಾರಾವಾಹಿಯ ಚಿತ್ರೀಕರಣದಲ್ಲೂ ಅವರು ತೊಡಗಿಕೊಳ್ಳಲಿದ್ದಾರೆ. ‘ನನ್ನ ಬದುಕಿನ ಬಗ್ಗೆ ಸ್ಪಷ್ಟತೆ ಇದೆ. ನಾನು ಗೆಲ್ಲುತ್ತೀನೋ ಅಥವಾ ಜೀವನ ಗೆಲ್ಲತ್ತೋ ನೋಡೇ ಬಿಡೋಣ’ ಎಂದೂ ಅವರು ಹೇಳಿಕೊಂಡಿದ್ದಾರೆ. ಮದುವೆಯ ಬಗ್ಗೆ ತಮಗಿರುವ ಕನಸುಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್
ವಿದ್ಯಾಭರಣ್ ಜೊತೆ ತಮಗೆ ನಿಶ್ಚಿತಾರ್ಥ ಆಗಿರಲಿಲ್ಲ. ಮದುವೆಗೂ ತಾವು ಒಪ್ಪಿರಲಿಲ್ಲ ಎಂದೂ ಹೇಳಿರುವ ವೈಷ್ಣವಿ ಆದ ಘಟನೆಯ ಬಗ್ಗೆ ವಿಷಾದವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಸದ್ಯ ಕೆರಿಯರ್ ಬಗ್ಗೆ ಫೋಕಸ್ ಮಾಡಿಕೊಂಡು, ಧಾರಾವಾಹಿಯನ್ನು ಅವರು ಒಪ್ಪಿಕೊಂಡಿದ್ದಾರೆ. ಈ ವಿಚಾರದಿಂದ ಮತ್ತೆ ಅವರು ದೂರ ಇರುವುದಾಗಿಯೂ ತಿಳಿಸಿದ್ದಾರೆ.