ಬೆಂಗಳೂರು: ನನಗೆ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada) ಉಸ್ತುವಾರಿ ಬೇಡವೆಂದು ಹೇಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನನ್ನ ವಿರುದ್ಧ ಸ್ಥಳೀಯ ಲಾಬಿ ಏನು ಇಲ್ಲ. ಕೆಲವರು ಏನೋ ಹೇಳಬಹುದು, ಮೃತನ ಮನೆಗೆ ಹೋಗಿದ್ದೆ, ಅವನು ಎಲ್ಲರ ಜೊತೆ ಚೆನ್ನಾಗಿದ್ದ. ಹಿಂದೂಗಳ ಜೊತೆಯು ಚೆನ್ನಾಗಿದ್ದ ಅವನನ್ನ ಸಾಯಿಸಿ ಬಿಟ್ರು ಎಂಬ ಮಾತುಗಳು ಕೇಳಿಬಂತು ಎಂದಿದ್ದಾರೆ.
ಉಸ್ತುವಾರಿ ಬದಲಾವಣೆ ಕೇಳಿಲ್ಲ, ಅವೆಲ್ಲ ಸುಮ್ಮನೆ ಎಲ್ಲಿಂದ ಬಂತೋ ಗೊತ್ತಿಲ್ಲ. ಜವಬ್ದಾರಿ ಇದ್ದಾಗ ಒಂದೊಂದು ಸಂದರ್ಭದಲ್ಲಿ ಎಲ್ಲಾ ಎದುರಿಸಬೇಕಾಗುತ್ತದೆ. ನಾನು ಅಷ್ಟೇ ಉತ್ಸಾಹದಲ್ಲಿ ಇದ್ದೇನೆ. ಜವಬ್ದಾರಿ ಇದ್ದಾಗ ಕೆಲವನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನೂ ನಿರ್ವಹಿಸಬೇಕಾಗುತ್ತದೆ. ನನ್ನ ಉಸ್ತುವಾರಿ ಭೇಟಿ ಬಗ್ಗೆ
ಎಲ್ಲರಿಗೂ ಗಮನದಲ್ಲಿ ಇದೆ. ಯಾರೋ ಒಬ್ಬರು ಇಬ್ರು ಹೇಳಿಕೆ ಕೊಟ್ಟಿರಬಹುದು. ವಿನಾಕಾರಣ ರಾಜಕಾರಣ ಮಾಡಬಹುದು. ನಿನ್ನೆ ಮೊನ್ನೆ ಅಲ್ಲೇ ಇದ್ದೆ. ಕೆಲವರು ರಾಜಕಾರಣ ಮಾಡಬಹುದು ಸ್ಥಳಿಯರು ಎಲ್ಲರೂ ಸಹಕಾರ ಕೊಟ್ಟಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಎಲ್ಲಾ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. ನಾನು ಸ್ಥಳಿಯ ಅಲ್ಲ ಹೊರಗಿನವನೇ, ಆದರೆ ಎಲ್ಲರೂ ಸಹಕಾರ ಕೊಟ್ಟಿದ್ದಾರೆ ಎಂದು ಹೇಳಿಕೊಂಡಿದ್ದಾರೆ.