ಬೆಂಗಳೂರು: ನಾನು ಗೃಹ ಇಲಾಖೆ (Home Department) ಖಾತೆ ಬದಲಾವಣೆ ಮಾಡಿ ಎಂದು ಸಿಎಂ ಬಳಿ ಕೇಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಸುಳ್ಳು ಸುದ್ದಿ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಧ್ಯಮಗಳಿಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾರು ನಿಮಗೆ ಹೇಳಿದ್ರು ಹೇಳಿ. ನಿಮ್ಮ ಮೂಲ ಹೇಳಿ. ತಿಮ್ಮೇಗೌಡನೂ ಹೇಳೋದೆ ಬೊಮ್ಮೇಗೌಡನೂ ಹೇಳೋದೆ. ಯಾರು ಹೇಳಿದ್ರು ನಿಮಗೆ? ನಿಮಗೆ ಮಾಹಿತಿ ಬಂದರೆ ನನ್ನ ಬಳಿಯೇ ಕೇಳಬಹುದಿತ್ತು. ಮಾಧ್ಯಮಗಳಲ್ಲಿ ಹಾಕಿ ನಮ್ಮ ಕೊಲೆ ಮಾಡೋ ಬದಲು ನನ್ನನ್ನೇ ನೇರವಾಗಿ ಕೇಳಬಹುದಿತ್ತು ಅಲ್ಲವಾ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಅನೈತಿಕ ಸಂಬಂಧ ಆರೋಪ – ಓಯೋ ರೂಮಿನಲ್ಲಿ ಪ್ರಿಯತಮೆ ಹತ್ಯೆಗೈದ ಟೆಕ್ಕಿ
ಮಾಧ್ಯಮಗಳ ಬಳಿ ನಾನು 30 ವರ್ಷಗಳಿಂದ ಸಂಯಮದಿಂದ ನಡೆದುಕೊಂಡಿದ್ದೇನೆ. ಒಬ್ಬರ ವ್ಯಕ್ತಿತ್ವವನ್ನು ಕೊಲೆ ಮಾಡೋದು ನಿಮಗೆ ಸರಿ ಅನ್ನಿಸಲ್ಲ, ಶೋಭೆ ತರೋದಿಲ್ಲ. ನನ್ನ ಹೆಂಡತಿ ಬಳಿಯೇ ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ. ನೀವು ಆಪ್ತರು ಹತ್ರ ಹೇಳಿದ್ರು ಖಾತೆ ಬದಲಾವಣೆ ಮಾಡಿ ಅಂತ ಸಿಎಂಗೆ ಕೇಳಿದ್ರು, ಸಿಎಂ ಆಗಲ್ಲ ಅಂದರು ಅದೆಲ್ಲ ಸುಳ್ಳು. ಇದೆಲ್ಲ ಯಾರು ನಿಮಗೆ ಹೇಳಿದ್ದು? ಮಾಧ್ಯಮಗಳಲ್ಲಿ ವಿಷಯ ಹಾಕಿ ಅದ್ವಾನ ಮಾಡಿದ ಮೇಲೆ ಈಗ ಯಾಕೆ ಸ್ಪಷ್ಟನೆ ಕೇಳುತ್ತೀರಿ ಎಂದು ಗರಂ ಆದರು. ಇದನ್ನೂ ಓದಿ: ಕಾಲ್ತುಳಿತಕ್ಕೆ ಮನೋಜ್ ಬಲಿ – ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೊನೆಯುಸಿರು
ನಿಮ್ಮನ್ನ ಕೈ ಮುಗಿದು ಕೇಳಿಕೊಳ್ತೀನಿ, ಹೀಗೆ ಮಾಡಬೇಡಿ. ಜನ ನಮ್ಮನ್ನು ಫಾಲೋ ಮಾಡೋರು, ಮತದಾರರು ಇದ್ದಾರೆ. ಜನ ಏನು ಅಂದುಕೊಳ್ಳುತ್ತಾರೆ. ಮುಂದೆಯಾದರೂ ನನ್ನನ್ನು ಕೇಳಿ. ನಾನು ಯಾವತ್ತೂ ಸಿಎಂ ಅವರಿಗೆ ಇಂತಹ ಖಾತೆ ಬೇಕು ಅಂತ ಕೇಳಿಲ್ಲ. ಬೆಂಗಳೂರಿನಲ್ಲಿ ಘಟನೆ ಆಗಿದೆ, ಅದು ಆಗಬಾರದಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಇಂತಹ ಘಟನೆ ಆಗಬಾರದು. ನಾವು ನೋವು ತಿನ್ನುತ್ತಿದ್ದೇವೆ. ಈ ಸಮಯದಲ್ಲಿ ಖಾತೆ ಬದಲಾವಣೆ ಆಗಲಿ ಅಂತ ಕೇಳಿದ್ದೆ ಅನ್ನೋದು ಸರಿಯಲ್ಲ. ಇದು ಸವಾಲು, ಇದನ್ನ ಎದುರಿಸಬೇಕು. ಖಾತೆ ಬದಲಾವಣೆ ಕೇಳಿದ್ದೀನಿ ಅನ್ನೋದು ಸತ್ಯಕ್ಕೆ ದೂರವಾದ ಮಾತು. ಇದು ಸುಳ್ಳು ಎಂದರು. ಇದನ್ನೂ ಓದಿ: ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್