ಬೆಂಗಳೂರು: ನಾನು ಹಣವನ್ನ ಲೋನ್ (Loan) ಪಡೆದು ಕೊಟ್ಟಿದ್ದೇನೆ. ಪೂರ್ತಿ ದಾಖಲೆಯನ್ನು ಸಿಸಿಬಿಯವರಿಗೆ ಕೊಟ್ಟಿದ್ದೇನೆ ಎಂದು ಚೈತ್ರಾ ಕುಂದಾಪುರ (Chaitra Kundapura) ಅವರಿಂದ ವಂಚನೆಗೊಳಗಾದ ಉದ್ಯಮಿ ಗೋವಿಂದ ಬಾಬು ಪೂಜಾರಿ ಹೇಳಿದ್ದಾರೆ.
ಸಿಸಿಬಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಬಿಯವರು (CCB) ಏನೆಲ್ಲಾ ಕೇಳಿದ್ದಾರೆ ಅದನ್ನೆಲ್ಲಾ ಕೊಟ್ಟಿದ್ದೇನೆ. ಪೆನ್ ಡ್ರೈವ್ನಲ್ಲಿ ದಾಖಲೆಗಳನ್ನ ಕೊಟ್ಟಿದ್ದೇನೆ. ವಿಚಾರಣೆ ಹಂತದಲ್ಲಿದೆ ಹಾಗಾಗಿ ನಾನು ಹೇಳೊದಿಕ್ಕೆ ಬರಲ್ಲ ಎಂದರು.
- Advertisement
ಹಣ ವಾಪಸ್ ಕೊಡಲು ಟೈಂ ತಗೆದುಕೊಂಡಿದ್ದರು. ಹೀಗಾಗಿ ಆಗಲೇ ದೂರು ಕೊಟ್ಟಿಲ್ಲ. ಆದರೆ ಅವರು ಹಣ ಕೊಡದೆ ಸತಾಯಿಸಿ ಬೆದರಿಕೆ ಹಾಕಿದ್ರು. ಕೊನೆಗೆ ಸತ್ಯ ಹೊರಗೆ ಬರ್ಬೇಕು ಅಂತ ದೂರು ನೀಡಿದೆ. ನಾನು ಹಣವನ್ನ ಲೋನ್ ಪಡೆದು ಕೊಟ್ಟಿದ್ದೇನೆ. ಪೂರ್ತಿ ದಾಖಲೆಯನ್ನು ಸಿಸಿಬಿಯವರಿಗೆ ಕೊಟ್ಟಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಟ್ವಿಸ್ಟ್ – ಸಲೂನ್ ಮಾಲೀಕನಿಗೆ ಬೆದರಿಕೆ ಕರೆ
- Advertisement
ನಾನು ಉದ್ಯಮಿ ರಾಜಕೀಯ ನನಗೆ ಅಷ್ಟೊಂದು ಗೊತ್ತಿಲ್ಲ. ಸಂಪೂರ್ಣವಾಗಿ ನನಗೆ ಸಂಶಯವೇ ಬರದ ರೀತಿ ನಂಬಿಸಿದ್ದರು. ನನಗೆ ಮೋಸ ಆಗಿದೆ ನನಗೆ ಆಗಿದ ರೀತಿ ಬೇರೆ ಯಾರಿಗೂ ಆಗಬಾರದು. ನಾನು ಮನೆ ಮೇಲೆ ಲೋನ್ ತೆಗೆದುಕೊಂಡು ಹಣ ನೀಡಿದ್ದೇನೆ. ಆ ದಾಖಲೆ ಎಲ್ಲವೂ ನೀಡಿದ್ದೇನೆ. ನಾನು ಉದ್ಯಮಿ ಹಾಗಾಗಿ ರಾಜಕೀಯ ನಾಯಕರು ಪರಿಚಯವಿಲ್ಲ. ಮುಂದೆ ಎಲ್ಲ ಸತ್ಯ ಹೊರ ಬರುತ್ತೆ. ಎಲ್ಲವನ್ನು ನಿಮ್ಮ ಬಳಿ ಹೇಳ್ತೇನೆ ಎಂದರು.
ಇತ್ತ ಸಿಸಿಬಿ ಕಚೇರಿಯಿಂದ ಚೈತ್ರಾ ಕುಂದಾಪುರ ಅವರನ್ನು ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.
Web Stories