– ಧರ್ಮಸ್ಥಳಕ್ಕೆ ಹೋಗಿ ಸಾರ್ವಜನಿಕವಾಗಿ ಕ್ಷಮೆ ಕೇಳ್ತೀನಿ
– ಕೋರ್ಟ್ ಜೈಲಿಗೆ ಹಾಕಿದ್ರೂ ಹೋಗ್ತೀನಿ ಎಂದ ಸುಜಾತ ಭಟ್
ಬೆಂಗಳೂರು: ನಾನು ಒಂದು ಸುಳ್ಳು ಹೇಳಿದ್ದು ಬಿಟ್ಟರೆ ಯಾವುದೇ ಅಪರಾಧ ಮಾಡಿಲ್ಲ ಎಂದು ಸುಜಾತ ಭಟ್ (Sujatha Bhat) ಹೇಳಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ (Dharmasthala Case) ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆದರೆ ಆಗಲಿ. ನಾನು ಒಂದು ಸುಳ್ಳು ಹೇಳಿದ್ದು ಬಿಟ್ಟರೆ ಯಾವುದೇ ಅಪರಾಧ ಮಾಡಿಲ್ಲ. ಕೋರ್ಟ್ ಅಲ್ಲಿ ವಿಚಾರಣೆಯಾಗಲಿ. ನಾನು ತಪ್ಪು ಮಾಡಿದ್ರೆ ಶಿಕ್ಷೆ ನೀಡಲಿ. ನನ್ನದು ತಪ್ಪು ಅಂದರೆ ಶಿಕ್ಷೆ ಅನುಭವಿಸುತ್ತೇನೆ. ನಾನು ಒಬ್ಬಂಟಿ, ಕೋರ್ಟ್ ಜೈಲಿಗೆ ಹಾಕಿದ್ರೂ ಹೋಗುತ್ತೇನೆ. ನಾನು ಎಲ್ಲಿದ್ರೂ ಒಂದೇ ಎಂದರು. ಇದನ್ನೂ ಓದಿ: ಸುವರ್ಣಸೌಧ ನವೀರಣಕ್ಕೆ ಕೇಳಿದ್ದು 11 ಕೋಟಿ, ಬಿಡುಗಡೆಯಾಗಿದ್ದು 1 ಕೋಟಿ
ಬುರುಡೆ ಪ್ರಕರಣದಲ್ಲಿ ನನ್ನನ್ನ ಬಲಿಪಶು ಮಾಡಿದರು. ಬುರುಡೆ ವಿಚಾರ ನನಗೆ ಗೊತ್ತೇ ಇರಲಿಲ್ಲ. ನನ್ನ ಸಮಸ್ಯೆ ಪರಿಹಾರ ಮಾಡುತ್ತೇವೆ ಅಂತ ನನ್ನ ಬಲಿಪಶು ಮಾಡಿದ್ರು. ನಾನು ಯಾರ ಋಣದಲ್ಲೂ ಇಲ್ಲ. ಎಸ್ಐಟಿ ಮುಂದೆ ನನ್ನ ಹೇಳಿಕೆ ನಾನು ಹೇಳಿದ್ದೇನೆ. ನಾನು ಕೊಟ್ಟ ದೂರಿನ ವಿಚಾರದಲ್ಲಿ ನನಗೆ ಹಿಂಬರಹ ಸಹ ಕೊಟ್ಟಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ನನ್ನ ಜೀವನ ನಡೆಸೋಕೂ ಆಗದಂತೆ ಮಾಡಿಬಿಟ್ಟರು ಎಂದು ಕಣ್ಣೀರು ಹಾಕಿದರು. ಇದನ್ನೂ ಓದಿ: ಹಾಸನ | ಮನೆಯಲ್ಲಿ ನಗ್ನವಾಗಿ ಒಂಟಿ ಮಹಿಳೆಯ ಶವ ಪತ್ತೆ – ಕೊಲೆ ಶಂಕೆ
ಚಾರ್ಜ್ ಶೀಟ್ ಸಲ್ಲಿಕೆಯಾಗಲಿ. ಕೋರ್ಟ್ಗೆ ವಿಚಾರಣೆಗೂ ಹಾಜರಾಗುತ್ತೇನೆ. ಲಕ್ಷಾಂತರ ಜನ ಕ್ಷೇತ್ರಕ್ಕೆ ಬರುತ್ತಾರೆ. ಕ್ಷೇತ್ರದಲ್ಲಿ ಆತ್ಮಹತ್ಯೆಗಳು ಆಗಿರುತ್ತವೆ. ಧರ್ಮಸ್ಥಳಕ್ಕೆ ಯಾರು ಬರ್ತಾರೆ, ಹೋಗ್ತಾರೆ ಅಂತ ನೋಡೋಕೆ ವಿರೇಂದ್ರ ಹೆಗ್ಗಡೆಯವರು ಏನಾದ್ರೂ ಗಾರ್ಡಾ? ನನಗೂ ಇದಕ್ಕೂ ಸಂಬಂಧವಿಲ್ಲ ಅಂತ ಎಸ್ಐಟಿ ಹಿಂಬರಹ ಕೊಟ್ಟಿದ್ದಾರೆ. ಆದ್ರೂ ಕೋರ್ಟ್ ನೋಟಿಸ್ ನೀಡಿದರೆ ವಿಚಾರಣೆಗೆ ಹೋಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: Gadag | ರೈತ ಸಂಘಟನೆಗಳಿಂದ ಲಕ್ಷ್ಮೇಶ್ವರ ಬಂದ್ ಆಚರಣೆ; ಶಾಲಾ-ಕಾಲೇಜಿಗೆ ರಜೆ

