ಧಾರವಾಡ: ಮಂಡ್ಯದ ಹುತಾತ್ಮ ಯೋಧ ಗುರು ಕುಟುಂಬ ಧಾರವಾಡಕ್ಕೆ ಭೇಟಿ ನೀಡಿತು. ಈ ವೇಳೆ ಗುರು ಕುಟುಂಬದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಾರ್ಗಿಲ್ ಸ್ಥೂಪಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಗುರು ಪತ್ನಿ ಕಲಾವತಿ, ಸೈನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು. ಸೈನಿಕರಿಗೂ ಭದ್ರತೆ ಕೊಡಬೇಕು. ಭಾರತೀಯ ಸೈನಿಕರನ್ನು ಇಷ್ಟೆಲ್ಲ ಸಾಯಿಸಿದ್ರೂ ಪಾಕಿಸ್ತಾನವನ್ನು ಯಾಕೆ ಸುಮ್ಮನೆ ಬಿಡ್ತಾ ಇದ್ದಾರೆ ಗೊತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ ಇಷ್ಟು ಜನ ಸೈನಿಕರನ್ನು ನಾವು ಕಳೆದುಕೊಳ್ಳುತ್ತಲೇ ಇದ್ದೇವೆ ಎಂದು ದುಃಖ ತೊಡಿಕೊಂಡರು. ಪಾಕ್ನಲ್ಲಿ ಸೈನಿಕರನ್ನು ಕಳೆದುಕೊಳ್ಳುವ ಸ್ಥಿತಿ ಇಲ್ಲ, ಪಾಕ್ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಬೇಕು ಎಂದು ಕಲಾವತಿ ಆಗ್ರಹಿಸಿದ್ದಾರೆ.
ನಮ್ಮ ಎಷ್ಟು ಜನ ಸೈನಿಕರನ್ನು ಅವರು ಸಾಯಿಸಿದ್ದಾರೆಯೋ ಅದರ ಎರಡು ಪಟ್ಟು ಪಾಕ್ ಸೈನಿಕರನ್ನು ಸಾಯಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಈ ಕಾರ್ಯ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೇ ಗುರು ತಂದೆ ಮಾತನಾಡಿ, ನನ್ನ ಮಗ ಇಡೀ ಭಾರತಕ್ಕೆ ಮಗನಾಗಿ ಹೋದ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv