ಬೆಂಗಳೂರು: ಸಚಿವ ರಾಜಣ್ಣ (KN Rajanna) ಹನಿಟ್ರ್ಯಾಪ್ ಕೇಸ್ (Honeytrap Case) ಬಗ್ಗೆ ನನಗೇನು ಗೊತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.
ಸಚಿವ ರಾಜಣ್ಣ ಹನಿಟ್ರ್ಯಾಪ್ ಕೇಸ್ ನಲ್ಲಿ ಸಾಕ್ಷಿ ಆಧಾರ ಕೊರತೆಯಿಂದ ಕೇಸ್ ಕ್ಲೋಸ್ ಆಗಿರೋ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು.
ರಾಜಣ್ಣ ಕೇಸ್ ಬಗ್ಗೆ ನನಗೇನು ಗೊತ್ತಿಲ್ಲ. ನಿಮ್ಮ ಬಾಯಿಂದನೇ ಇವೆಲ್ಲ ಕೇಳುತ್ತಿರೋದು. ನನಗೂ ಆ ಕೇಸ್ಗೂ ಏನು ಸಂಬಂಧವಿಲ್ಲ. ಯಾರು ದೂರು ಕೊಟ್ಟರು ಗೊತ್ತಿಲ್ಲ. ತನಿಖೆ ಆಗಿದ್ದು ನನಗೆ ಗೊತ್ತಿಲ್ಲ. ನನಗೇನು ಅದರ ಬಗ್ಗೆ ಗೊತ್ತಿಲ್ಲ ಎಂದರು.