Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೀಟೂ ಪ್ರಕರಣವನ್ನು ದಿಕ್ಕು ತಪ್ಪಿಸಲು ನನ್ನ ವಿರುದ್ಧ ಆರೋಪ: ಚೇತನ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಮೀಟೂ ಪ್ರಕರಣವನ್ನು ದಿಕ್ಕು ತಪ್ಪಿಸಲು ನನ್ನ ವಿರುದ್ಧ ಆರೋಪ: ಚೇತನ್

Cinema

ಮೀಟೂ ಪ್ರಕರಣವನ್ನು ದಿಕ್ಕು ತಪ್ಪಿಸಲು ನನ್ನ ವಿರುದ್ಧ ಆರೋಪ: ಚೇತನ್

Public TV
Last updated: October 22, 2018 9:18 pm
Public TV
Share
2 Min Read
Chetan
SHARE

ಬೆಂಗಳೂರು: ನನಗೆ ಕೆಟ್ಟ ಹೆಸರು ತರಲು ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನಟ ಚೇತನ್ ಹೇಳಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಸೇಡು ತೀರಿಸಿಕೊಳ್ಳಲು ಶೃತಿ ಹರಿಹರನ್ ಪರವಾಗಿ ಚೇತನ್ ಮತಾನಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಕ್ಕಾಗಿ, ಸಮಾಜದ ಒಳಿತಿಗಾಗಿ ಮತ್ತು ಉತ್ತಮ ಚಿತ್ರರಂಗಕ್ಕಾಗಿ ಹೋರಾಡುವ ಚಳುವಳಿಯನ್ನು ನಿಲ್ಲಿಸುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. 10 ಲಕ್ಷ ರೂ. ಹಣವನ್ನ ಮುಂಗಡವಾಗಿ ಪಡೆದಿರುವ ವಿಚಾರವನ್ನ ಕೆಲವರು ಟ್ವಿಸ್ಟ್ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನು ಓದಿ: ಚೇತನ್ ಯಾರು – ಸಾರಾ ಗೋವಿಂದು ಗರಂ

CHETHAN

ಅರ್ಜುನ್ ಸರ್ಜಾ ಅವರು ನನಗೆ ಕೆಲ ವರ್ಷಗಳಿಂದ ಪರಿಚಯ. ಅವರ ಜೊತೆ ನಾನು ಪ್ರೇಮ ಬರಹ ಚಿತ್ರವನ್ನ ಮಾಡಲು ಒಪ್ಪಿಕೊಂಡಿದ್ದು ನಿಜ. ಈ ಚಿತ್ರದ ಸಂಬಂಧ ಫೋಟೋ ಸೆಶನ್, ಪ್ರೀ ಶೂಟ್ ಸಹ ನಡೆದಿತ್ತು. ಆದರೆ ಕಾರಣಾಂತರಗಳಿಂದ ಪ್ರೇಮ ಬರಹ ಸಿನಿಮಾವನ್ನ ನಾನು ಮಾಡಲಿಕ್ಕೆ ಆಗಲಿಲ್ಲ. ಅವತ್ತಿನಿಂದ ಇಲ್ಲಿಯವರೆಗೂ ಸರ್ಜಾ ಅವರ ಜೊತೆ ನಾನು ಸಂಪರ್ಕದಲ್ಲಿ ಇದ್ದೇನೆ. ಶೂಟಿಂಗ್ ಸಮಯದಲ್ಲಿ ಸರ್ಜಾ ಅವರು ಬಹಳ ಪ್ರೊಫೆಶನಲ್ ಆಗಿ ನಡೆದುಕೊಂಡಿದ್ದಾರೆ. ಅವರ ಕುಟುಂಬದವರು ಸಹ ನನ್ನ ಜೊತೆ ಒಳ್ಳೆಯ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿದರು. ಇದನ್ನು ಓದಿ:  ನನ್ನ ಜೊತೆ ಅರ್ಜುನ್ ಸರ್ಜಾ ಕೆಟ್ಟದಾಗಿ ನಡೆದುಕೊಂಡಿಲ್ಲ: ನಟಿ ತಾರಾ

ಅರ್ಜುನ್ ಸರ್ಜಾ ಅವರು ನನಗೆ ಯಾವತ್ತೂ ಹಣವನ್ನು ಹಿಂದಿರುಗಿಸುವಂತೆ ಇಲ್ಲಿಯವರೆಗೆ ಕೇಳಲಿಲ್ಲ. ಆದರೆ ಮುಂಬರುವ ಸಿನಿಮಾದಲ್ಲಿ ನಾವಿಬ್ಬರು ಕೆಲಸ ಮಾಡಲು ನಿರ್ಧರಿಸಿದ್ದೇವೆ. ಮುಂಗಡ ಹಣವನ್ನು ತೆಗೆದುಕೊಂಡ ತಕ್ಷಣವೇ ಯಾರು ಸಿನಿಮಾ ಮಾಡಲು ರೆಡಿಯಾಗಿರಲ್ಲ. ಕೆಲವೊಮ್ಮೆ ಹಣ ಪಡೆದು 6 ತಿಂಗಳ ಬಳಿಕವೂ ಕೆಲಸ ಮಾಡುತ್ತಾರೆ ಎಂದರು.

vlcsnap 2018 10 21 17h50m25s455

ಮೋದಿ ವಿರೋಧಿಗಳು ಮತ್ತು ಎಡಪಂಥೀಯರು ಸೇರಿ ಶೃತಿ ಹರಿಹರನ್ ಪರವಾಗಿ ಮಾತನಾಡುತ್ತಿದ್ದಾರೆ ಎನ್ನುವ ಆರೋಪಕ್ಕೆ, ನಾನು ಈ ವಿಚಾರದಲ್ಲಿ ರಾಜಕೀಯವಾಗಿ ಯಾವುದೇ ಕೆಲಸ ಮಾಡುತ್ತಿಲ್ಲ. ನಮ್ಮ ಸಂಘಟನೆಯಲ್ಲಿರುವ ವ್ಯಕ್ತಿಗಳೆಲ್ಲರಿಗೂ ಅವರದ್ದೇ ಆದ ಆಲೋಚನೆಗಳು ಮತ್ತು ಅಭಿಪ್ರಾಯಗಳು ಇರುತ್ತದೆ. ಆದರೆ ಎಲ್ಲರ ಗುರಿ ಸಮಾಜದಲ್ಲಿ ಉತ್ತಮ ಚಿತ್ರರಂಗವನ್ನು ಕಟ್ಟುವುದು ಮತ್ತು ಎಲ್ಲರ ಸಮಾನತೆಗಾಗಿ ಹೋರಾಟ ನಡೆಸುವುದು. ನಾವು ಕೇವಲ ಪುರುಷ ಪ್ರಧಾನ ವ್ಯವಸ್ಥೆ ವಿರುದ್ಧ, ಶೋಷಣೆಯ ವಿರುದ್ಧ ಮತ್ತು ನೊಂದವರ ಪರವಾಗಿ ಹೋರಾಟ ನಡೆಸುತ್ತೇವೆ. ಇದರಲ್ಲಿ ಸಮಸ್ಯೆ ಇದ್ದರೆ ನಮ್ಮ ಜೊತೆ ಚರ್ಚೆ ನಡೆಸಲಿ ಎಂದು ಚೇತನ್ ಹೇಳಿದರು.

shruthi hariharan collage 1 copy 1

ನಟಿ ಶೃತಿ ವಿಚಾರಕ್ಕೆ ಬಂದರೆ, ನಮ್ಮ ಫೈರ್ ಸಂಸ್ಥೆಯಿಂದ ಅವರಿಗೆ ನಾವು ಕಾನೂನುಬದ್ಧ ಬೆಂಬಲವನ್ನ ಕೊಟ್ಟಿದ್ದೇವೆ. ಆದರೆ ಈ ಸಂಬಂಧ ನಾವು ಯಾವುದೇ ವಿಚಾರಣೆಯನ್ನ ನಡೆಸುತ್ತಿಲ್ಲ. ಕೇಸ್ ದಾಖಲಿಸುವುದು ಬಿಡುವುದು ಅವರ ತೀರ್ಮಾನ ಎಂದರು. ಇದನ್ನು ಓದಿ:  ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?

sruthi hariharan

ನನ್ನ ವಿರುದ್ಧ ಫಿಲಂ ಚೇಂಬರ್ ನಲ್ಲಿ ದೂರು ದಾಖಲಾಗಿದೆ ಎನ್ನುವ ಸುದ್ದಿಯನ್ನು ನಾನು ಕೇಳಲ್ಪಟ್ಟೆ. ಆದರೆ ಇದೂವರೆಗೂ ನನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.  ಇದನ್ನು ಓದಿ:  ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://youtu.be/h6ZAuzr4cXg

https://youtu.be/nOoBTT1xkpE

TAGGED:Arjun SarjabengaluruChetancinemaPublic TVsandalwoodShrutiಅಜುರ್ನ್ ಸರ್ಜಾಆರೋಪಚೇತನ್ಪಬ್ಲಿಕ್ ಟಿವಿಮೀಟೂಶೃತಿ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

Mumbai Man Stabs 2 Security Guards After Asking Them To Recite The Kalma
Crime

ಮುಂಬೈನಲ್ಲಿ ‘ಪಹಲ್ಗಾಮ್’ ಮಾದರಿಯ ದಾಳಿ – ಕಲ್ಮಾ ಪಠಿಸದ ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

Public TV
By Public TV
11 minutes ago
watermelon 1
Food

ಊಟ ಮಾಡಿದ ತಕ್ಷಣ ಕಲ್ಲಂಗಡಿ ತಿನ್ನಬಾರದು ಯಾಕೆ?

Public TV
By Public TV
31 minutes ago
Mangaluru Blast Case The Shariq cooker bomb capable of blowing up the bus FSL Investigation report 1
Court

ಮಧ್ಯ ವಯಸ್ಸಲ್ಲಿ ಶಾರಿಕ್‌ ಹೊರಗೆ ಬಂದ್ರೆ ಅಪಾಯ – ಶಿಕ್ಷೆ ಪ್ರಮಾಣ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಲು NIA ಸಿದ್ಧತೆ

Public TV
By Public TV
42 minutes ago
Prostitution
Bengaluru City

ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ – ಬೆಂಗ್ಳೂರಲ್ಲಿ 6 ವಿದೇಶಿ ಮಹಿಳೆಯರು ವಶಕ್ಕೆ

Public TV
By Public TV
1 hour ago
KN Rajanna
Bengaluru City

ಪದತ್ಯಾಗಕ್ಕೂ ಸಿದ್ಧರಿದ್ದಾರೆ ಸಿದ್ದರಾಮಯ್ಯ – ಮುಂದೆ ದಲಿತರು ಸಿಎಂ ಆಗ್ಬೇಕು: ರಾಜಣ್ಣ ಸ್ಫೋಟಕ ಹೇಳಿಕೆ

Public TV
By Public TV
2 hours ago
Vachanananda Swamiji Managuli Sangabasava Swamiji
Davanagere

ನಾನು ಪಂಚಮಸಾಲಿ ಪೀಠಕ್ಕೆ ಬರೋದು ಭಕ್ತರಿಗೆ ಬಿಟ್ಟ ವಿಚಾರ: ಮನಗುಳಿ ಸಂಗನಬಸವ ಶ್ರೀ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?