ನವದೆಹಲಿ: ವಿಶ್ವಕಪ್ ಕ್ರಿಕೆಟ್ ತಂಡಕ್ಕೆ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವುದು ತನಗೆ ತೀವ್ರ ನೋವುಂಟು ಮಾಡಿದ್ದು, ನಾನು ಇಂತಹದ್ದೇ ನೋವನ್ನು ಅನುಭವಿಸಿದ್ದೇನೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಕಳೆದ ವರ್ಷ ರಾಯುಡು ಉತ್ತಮವಾಗಿ ಆಡಿದ್ದು, ನಾಯಕ ವಿರಾಟ್ ಕೊಹ್ಲಿ ಕೂಡ ರಾಯುಡು ಆಯ್ಕೆಯನ್ನು ಪರಿಗಣಿಸುವುದಾಗಿ ತಿಳಿಸಿದ್ದರು. ಆದರೆ ಅಚ್ಚರಿ ರೀತಿ ಎಂಬಂತೆ ರಾಯುಡರನ್ನ ಈ ಬಾರಿ ಕೈ ಬಿಡಲಾಗಿತ್ತು.
ಟೀಂ ಇಂಡಿಯಾಗೆ ಆಯ್ಕೆ ಆಗದ ದೆಹಲಿ ಆಟಗಾರ ಪಂತ್ ಅವರಿಗಿಂತಲೂ ರಾಯುಡು ಆಯ್ಕೆ ಆಗದಿರುವುದು ನೋವು ನೀಡಿದೆ. 33 ವರ್ಷದ ರಾಯುಡು 47ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ ಆಟಗಾರರನ್ನು ಕೈ ಬಿಡಲಾಗಿದೆ. ಆಯ್ಕೆ ಸಮಿತಿ ಮಾಡಿದ ಎಲ್ಲಾ ತೀರ್ಮಾನಗಳಿಗಿಂತ ಇದು ಹೆಚ್ಚು ನೋವು ನೀಡಿದೆ ಎಂದಿದ್ದಾರೆ. ಇದನ್ನು ಓದಿ: ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ
2007 ರಲ್ಲಿ ನನಗೂ ಇದೇ ರೀತಿ ನಡೆದಿತ್ತು. ವಿಶ್ವಕಪ್ ಆಡುವುದು ಪ್ರತಿ ಆಟಗಾರನ ಕನಸಾಗಿರುತ್ತದೆ. ಇಂತಹ ಕನಸು ನನಸು ಆಗದಿದ್ದರೆ ಎಷ್ಟು ನೋವಾಗುತ್ತದೆ ಎಂದು ನನಗೆ ತಿಳಿದಿದೆ. ಸದ್ಯ ಟೆಸ್ಟ್ ನಲ್ಲಿ ರಾಯುಡು ಆಡುತ್ತಿಲ್ಲ. ಆದರೆ ಆಯ್ಕೆ ಸಮಿತಿಯಲ್ಲಿ ರಿಷಬ್ ಪಂತ್ ಆಯ್ಕೆ ಮಾಡದಿರುವುದು ದೊಡ್ಡ ವಿಚಾರವಲ್ಲ. ಪಂತ್ ಯುವ ಆಟಗಾರರ ಆಗಿರುವುದರಿಂದ ಮತ್ತಷ್ಟು ಅವಕಾಶ ಪಡೆಯಬಹುದು. ಕಾರ್ತಿಕ್ ಆಯ್ಕೆ ಉತ್ತಮವಾದರೂ ಸಂಜು ಸ್ಯಾಮ್ಸನ್ ಆಯ್ಕೆ ಆಗಿದ್ದರೆ ಅತ್ಯುತ್ತಮ ಆಗುತಿತ್ತು ಎಂದು ತಿಳಿಸಿದ್ದಾರೆ.