ಭೋಪಾಲ್: ನನಗೆ ಮಂತ್ರಿ ಸ್ಥಾನ ಸಿಗದಿದ್ದರೂ ನಾನು ಕೆಲಸ ಮಾಡುತ್ತೇನೆ. ಆಡಳಿತದ ವಿಚಾರಕ್ಕೆ ಬಂದರೇ ನಾನು ಎಲ್ಲ ಸಚಿವರ ತಂದೆ, ನಾನೇ ಕಿಂಗ್ ಮೇಕರ್ ಎಂದು ಮಧ್ಯಪ್ರದೇಶದ ಬಹುಜನ್ ಸಮಾಜ ಪಕ್ಷ(ಬಿಎಸ್ಪಿ) ಶಾಸಕಿ ರಮಾಬಾಯಿ ಕಾಂಗ್ರೆಸ್ ಪಕ್ಷದ ಕಾಲೆಳೆದಿದ್ದಾರೆ.
ಪಥರಿಯಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಶಾಸಕಿ ರಮಾಬಾಯಿ ತನಗೆ ಮಂತ್ರಿ ಸ್ಥಾನ ಕೊಡದಿದ್ದರೂ ಜನಕ್ಕಾಗಿ ಒಳ್ಳೆ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವೆಯಾದರೆ ಜನರಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಮಂತ್ರಿಯಾಗದಿದ್ದರೂ ಸರಿಯಾಗಿ ಕೆಲಸ ಮಾಡುತ್ತೇನೆ. ನಾನು ಒಂದು ರೀತಿ ಮಂತ್ರಿಗಳಿಗೆ ತಂದೆ, ನಾನೇ ಸರ್ಕಾರವನ್ನು ರಚಿಸಿದ್ದು ಎಂದು ಹೇಳಿದ್ದಾರೆ.
#WATCH BSP MLA from Patharia (MP), Ramabai Singh who had demanded a ministerial berth earlier: Hum ban jaye (Minister) to achha kaam karenge, nahi baney to bhi sahi kaam karenge……. Hum mantriyo ke baap hain, humne hi sarkar banayi hai. (25-1-19) #MadhyaPradesh pic.twitter.com/eJaSIHFEbV
— ANI (@ANI) January 25, 2019
ಈ ಹಿಂದೆ ಜ. 23ರಂದು ಕರ್ನಾಟಕದಲ್ಲಿ ಆಗುತ್ತಿರುವ ರಾಜಕೀಯ ಡ್ರಾಮಾದಂತೆ ಮಧ್ಯಪ್ರದೇಶದಲ್ಲಿ ಆಗುವುದು ಬೇಡ. ನನಗೆ ಸಚಿವ ಸ್ಥಾನ ಕೊಡಿ ಆಗ ಸರ್ಕಾರ ಚೆನ್ನಾಗಿರುತ್ತೇ ಅಂತ ರಮಾಬಾಯಿ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಹಾಗೆಯೇ ಜ. 7ರಂದು ಸಂಜೀವ್ ಸಿಂಗ್ ಕುಶ್ವಾಹಗೆ ಹಾಗೂ ನನಗೆ ಸಚಿವ ಸ್ಥಾನ ಕೊಡಿ ಅಂತ ಸರ್ಕಾರವನ್ನು ಕೇಳಿದ್ದರು.
ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಚುನಾವಣೆ ನಡೆದಾಗ ಕಾಂಗ್ರೆಸ್ 114 ಸೀಟ್, ಬಿಜೆಪಿ 109 ಸೀಟ್, ಬಿಎಸ್ಪಿ 2, ಸಮಾಜವಾದಿ ಪಕ್ಷ 1 ಹಾಗೂ ಪಕ್ಷೇತರ ಪಕ್ಷಗಳು 4 ಸ್ಥಾನವನ್ನು ಗೆದ್ದಿತ್ತು. ಬಿಎಸ್ಪಿ ಬೆಂಬಲ ಪಡೆದ ಕಾಂಗ್ರೆಸ್ ಮಧ್ಯ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv