ಟೀಕೆಗಳಿಗೆ ಉತ್ತರಿಸುತ್ತಾ ಕಾಲ ಹರಣ ಮಾಡಲ್ಲ- ಸುಮಲತಾ

Public TV
2 Min Read
MND SUMA

– ಎಂಪಿಯಾದ ಮೊದಲ ಬಾರಿಗೆ ಮಂಡ್ಯಕ್ಕೆ ಭೇಟಿ
– ಒಂದೇ ವೇದಿಕೆಯಲ್ಲಿ ಸುಮಲತಾ, ಜೆಡಿಎಸ್ ಮುಖಂಡ
– ಜನರ ಸಮಸ್ಯೆ ಆಲಿಸಲು ಮಂಡ್ಯದಲ್ಲಿ ಕಚೇರಿ
– ವಾರಕ್ಕೆ 3 ದಿನ ಮಂಡ್ಯದಲ್ಲೇ ವಾಸ್ತವ್ಯ

ಮಂಡ್ಯ: ಚುನಾವಣೆಯ ಸಂದರ್ಭದಲ್ಲಿ ನಾನು ಯಾರ ಬಗ್ಗೆ ಕೂಡ ಕೀಳಾಗಿ ಮಾತನಾಡಿಲ್ಲ. ಈಗಲೂ ಸಹ ನಾನು ಯಾರ ಬಗ್ಗೆಯೂ ಮಾತನಾಡಲ್ಲ. ನನಗೆ ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಸಂಸದೆಯಾದ ಬಳಿಕ ಮೊದಲ ಬಾರಿಗೆ ಮಂಡ್ಯದ ಕೀಲಾರ ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಛ ಮೇವ ಜಯತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬರ ಹಾಗೂ ನೀರಿನ ಸಮಸ್ಯೆ ಹೆಚ್ಚಿದೆ. ಅದನ್ನು ಬಗೆಹರಿಸುವತ್ತ ಗಮನ ಹರಿಸಬೇಕು. ರಾಜಕಾರಣ ಮಾಡೋ ಸಮಯ ಅಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡಲ್ಲ ಎಂದು ತಿಳಿಸಿದರು.

MND 3

ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಕೆಲಸವನ್ನ ಅವರು ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ಕೊಡುತ್ತೇನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದರು.

ನಾನು ಸಾಮಾನ್ಯರ ಫೋನ್ ಪಿಕ್ ಮಾಡಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಭೆಗಳು ಅಥವಾ ದೆಹಲಿಯಲ್ಲಿ ಇದ್ದಾಗ ಫೋನ್ ಪಿಕ್ ಮಾಡಿಲ್ಲ. ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಕ ಮಾಡುತ್ತೇನೆ ಎಂದ ಅವರು, ನಾನು ನಾನಾಗೇ ಇರ್ತೀನಿ. ಜನರ ಪರ ಇರ್ತೀನಿ ಎಂದು ಹೇಳುವ ಮೂಲಕ ಸುಮಲತಾ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಅನ್ನೋ ಊಹಾಪೋಹಗಳಿಗೆ ಖಡಕ್ ಉತ್ತರ ನೀಡಿದರು.

MND

ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ. ಸಂಸತ್ ಪ್ರಜಾಪ್ರಭುತ್ವದ ದೇವಾಲಯ. ಅಲ್ಲಿಗೆ ಹೋದಾಗ ಆತ ಸಂತಸದ ಕ್ಷಣ ಹೇಳಲು ಆಗುತ್ತಿಲ್ಲ ಎಂದು ಸಂಸದೆಯಾಗಿ ಮೊದಲು ಸಂಸತ್ ಪ್ರವೇಶ ಮಾಡಿದ ಅನುಭವವನ್ನು ಹಂಚಿಕೊಂಡರು.

ಇದಕ್ಕೂ ಮೊದಲು ಮಾತು ಆರಂಭಿಸಿದ ಸುಮಲತಾ, ನನ್ನನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ. ನಿಮಗೆಲ್ಲರಿಗೂ ವಂದನೆಗಳು. ಸಂಸದರಾಗಿ ಮೊದಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅದರಲ್ಲೂ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಇದು ನನಗೆ ಹತ್ತಿರದ ವಿಷಯ ಎಂದರು.

ಚುನಾವಣೆ ಸಮಯದಲ್ಲಿ ಹಾವು, ಮುಂಗುಸಿಯಂತಿಂದ್ದ ಸುಮಲತಾ ಮತ್ತು ಜೆಡಿಎಸ್ ಮುಖಂಡರು, ಇಂದು ಒಂದೇ ವೇದಿಕೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಮತ್ತು ಮಂಡ್ಯ ಕ್ಷೇತ್ರದ ಶಾಸಕ ಶ್ರೀನಿವಾಸ್ ಕಂಡುಬಂದರು. ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಒಂದೇ ವೇದಿಕೆಯಲ್ಲಿ ಕಾಣಿಸಿದ್ದಾರೆ.

MND 2

ಇದೇ ವೇಳೆ ಕೀಲಾರ ಕೆರೆ ಅಭಿವೃದ್ಧಿಗೆ ಸಹಾಯ ಮಾಡುವಂತೆ ಗ್ರಾಮದ ಮುಖಂಡ ಕೃಷ್ಣೇಗೌಡರು ಸಂಸದೆ ಸುಮಲತಾ ಅವರಿಗೆ ಮನವಿ ಮಾಡಿದರು. ಸುಮಲತಾ ಅವರಿಗೆ ಗ್ರಾಮದ ಮುಖಂಡ ಮನವಿ ಮಾಡುತ್ತಿದ್ದಂತೆ ಮಾತನಾಡಿದ ಶಾಸಕ ಶ್ರೀನಿವಾಸ್, ನಮ್ಮ ಸರ್ಕಾರದಿಂದ ಕೀಲಾರ ಕೆರೆ ಅಭಿವೃದ್ಧಿಗೆ ಐದೂವರೆ ಕೋಟಿ ಹಣ ನೀಡಲು ಈಗಾಗಲೇ ಘೋಷಣೆಯಾಗಿದೆ. ಸದ್ಯದಲ್ಲೇ ಕೆರೆ ಅಭಿವೃದ್ಧಿ ಕೆಲಸ ಆರಂಭಿಸುವುದಾಗಿ ವೇದಿಕೆಯಲ್ಲೇ ಘೋಷಿಸಿದರು. ಶಾಸಕರ ಮಾತಿಗೆ ಗ್ರಾಮದ ಮುಖಂಡ ಅಸಮಾಧಾನ ವ್ಯಕ್ತಪಡಿಸಿದ್ದು, ಕೆರೆ ಅಭಿವೃದ್ಧಿಗೆ ಐದೂವರೆ ಕೋಟಿ ಸಾಕಾಗಲ್ಲ. ಸಂಸದರೂ ಈ ಬಗ್ಗೆ ಸಹಾಯ ಮಾಡಲಿ ಎಂದು ಗ್ರಾಮಸ್ಥ ಸಲಹೆ ನೀಡಿದ ಪ್ರಸಂಗವೂ ನಡೆಯಿತು.

MND 1 1

Share This Article
Leave a Comment

Leave a Reply

Your email address will not be published. Required fields are marked *