ಬೆಂಗಳೂರು: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ನಾನು ಸಚಿವ ಡಿ.ಕೆ.ಶಿವಕುಮಾರ್ ಜೊತೆ ಪ್ರಚಾರಕ್ಕೆ ಹೋಗಲ್ಲ. ಹೈಕಮಾಂಡ್ ಸೂಚಿಸಿದ್ರೆ ಅಲ್ಲಿಯೂ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತೇನೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಾಯಕರು ಆದೋರು ಕೇವಲ ಎದೆ ಉಬ್ಬಿಸಿಕೊಂಡು ಓಡಾಡೋದಲ್ಲ. ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತನು ಪ್ರಬಲ ಮುಖಂಡ. ಮಾಧ್ಯಮದ ಪೋಸ್ ಕೊಟ್ಟು ತಾನು ದೊಡ್ಡ ನಾಯಕ ಅಂತಾ ತೋರಿಸಿಕೊಳ್ಳುವುದು ಅಲ್ಲ. ಪಕ್ಷಕ್ಕಾಗಿ ಕೆಲಸ ಮಾಡುವ ಪ್ರತಿಯೊಬ್ಬ ಕಾರ್ಯಕರ್ತನು ಅತ್ಯಂತ ಮುಖ್ಯ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟರು.
ನಾಮಪತ್ರ ವಾಪಾಸ್ಸಾತಿ ಪ್ರಕ್ರಿಯೆ ಮುಗಿದ ನಂತರ, ಬಳ್ಳಾರಿ ಚುನಾವಣೆ ಪ್ರಚಾರಕ್ಕೆ ತೆರಳುತ್ತೇನೆ. ನಾವೆಲ್ಲ ಶಾಸಕ ನಾಗೇಂದ್ರ ಪ್ರಸಾದ್ ಸೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡಬೇಕು ಅಂತಾ ಇಚ್ಛೆಯನ್ನು ವ್ಯಕ್ತಪಡಿಸಿದ್ದೇವು. ಆದ್ರೆ ಹೈಕಮಾಂಡ್ ಉಗ್ರಪ್ಪರ ಹೆಸರನ್ನು ಅಂತಿಮಗೊಳಿಸಿದೆ. ಎಲ್ಲರನ್ನು ಮತ್ತು ಎಲ್ಲ ವಿಷಯವನ್ನು ಗಮನದಲ್ಲಿರಿಸಿ ಉಗ್ರಪ್ಪ ಅವರ ಹೆಸರನ್ನು ಅಂತಿಮ ಮಾಡಿದೆ. ಯಾಕೆ ಮಾಡಿದ್ದಾರೆ? ಪಕ್ಷದಲ್ಲಿ ಏನಾಯ್ತು ಎಂಬುದನ್ನು ಮಾಧ್ಯಮಗಳ ಮುಂದೆ ಹೇಳೋದಕ್ಕೆ ಸಾಧ್ಯವಿಲ್ಲ. ಹೈಕಮಾಂಡ್ ಸೂಚಿಸಿದ ಅಭ್ಯರ್ಥಿಗೆ ನಮ್ಮೆಲ್ಲರ ಸಹಮತವಿದೆ. ಚುನಾವಣೆಯಲ್ಲಿ ಉಗ್ರಪ್ಪನವರು ಗೆಲ್ಲೋದು ಖಂಡಿತ. ಉಪ ಚುನಾವಣೆಯ ಫಲಿತಾಂಶ ಏನೇ ಬಂದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿಯಾಗಿರುತ್ತದೆ ಅಂತಾ ತಿಳಿಸಿದರು.
ಡಿಕೆಶಿ ಜೈಲಿಗೆ ಹೋಗ್ತಾರೆ ಅಂತ ಶ್ರೀರಾಮುಲು ಹೇಳಿದ್ದು ತಪ್ಪು. ಅವರ ನಸೀಬು ಇದ್ದಂಗೆ ಆಗುತ್ತದೆ. ಈ ವಿಷಯದಲ್ಲಿ ನಾನು ಡಿಕೆಶಿ ಪರ ನಿಲ್ಲುತ್ತೇನೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನ್ನ ಅವರ ರಾಜಕೀಯ ವಿಷಯ, ವೈಯುಕ್ತಿಕ ಸ್ನೇಹ ಏನೇ ಇರಬಹುದು. ಈ ವಿಷಯದಲ್ಲಿ ನಾನು ಅವರ ಪರ ನಿಲ್ಲುತ್ತೇನೆ. ರಾಜಕೀಯ ವಿಚಾರ ಬಂದಾಗ ನಾನು ಅವರ ಪರ ಇರುತ್ತೇನೆ. ಸರ್ಕಾರ ಭದ್ರವಾಗಿದೆ ವೈಯಕ್ತಿಕ ವಿಚಾರಗಳಲ್ಲಿ ಅನೇಕ ಭಿನ್ನಭಿಪ್ರಾಯಗಳು ಇರಬಹುದು ಶ್ರೀರಾಮುಲು ಹಾಗೇ ಮಾತನಾಡೋದು ಸರಿಯಲ್ಲ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv