Public TV - Latest Kannada News, Public TV Kannada Live, Public TV News
  • Home
  • State
  • Live
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Facebook Twitter Youtube
Aa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • Live
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Food
  • Videos
Search
  • Home
  • State
  • Live
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
Home » ನನ್ನನ್ನು ಟಗರು ಅಂತಾರೆ.. ಆದ್ರೆ ನಾನು ಎಲ್ಲಾ ಜಾತಿಯ ಬಡವರ ಪರ – ಸಿದ್ದರಾಮಯ್ಯ
Bellary

ನನ್ನನ್ನು ಟಗರು ಅಂತಾರೆ.. ಆದ್ರೆ ನಾನು ಎಲ್ಲಾ ಜಾತಿಯ ಬಡವರ ಪರ – ಸಿದ್ದರಾಮಯ್ಯ

Public TV
Last updated: 2023/02/05 at 8:03 PM
Public TV
Share
2 Min Read
SHARE

ವಿಜಯನಗರ: ನನ್ನನ್ನು ಟಗರು.. ಟಗರು ಅಂತಾರೆ. ಆದರೆ ನಾನು ಎಲ್ಲಾ ಜಾತಿಯವರ ಬಡವರ ಪರವಾಗಿದ್ದೇನೆ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು.

ವಿಜಯನಗರ (Vijayanagara) ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಯಾತ್ರಿ ನಿವಾಸ ಉದ್ಘಾಟನೆ ನಂತರ ಮಾತನಾಡಿದ ಅವರು, ಮಠ ಮಾಡಿದ್ದು ಕೇವಲ ಕುರುಬರಿಗಲ್ಲ. ಎಲ್ಲಾ ಹಿಂದುಳಿತ, ಶೋಷಿತ ಸಮಾಜಗಳಿಗೂ ಮಠ ಮಾಡಿದೆವು. ಟಿಪ್ಪು ಜಯಂತಿ, ಕನಕ ಜಯಂತಿ, ಎಲ್ಲಾ ಜಯಂತಿ ಮಾಡಿದ್ದು ನಾವು. ಕೆಂಗಲ್ ಹನುಮಂತಯ್ಯ ಅಲ್ಲಾ, ದೇವೇಗೌಡ ಅಲ್ಲ, ಯಡಿಯೂರಪ್ಪ ಅಲ್ಲ, ಕುಮಾರಸ್ವಾಮಿಯಲ್ಲ. ಎಲ್ಲಾ ಜಯಂತಿ ಮಾಡಿದ್ದು ನಾವು ಎಂದು ತಿಳಿಸಿದರು. ಇದನ್ನೂ ಓದಿ: ಸೋಮವಾರ ರಾಜ್ಯಕ್ಕೆ ಮೋದಿ ಆಗಮನ – ಎಲ್ಲೆಲ್ಲಿ ಏನೇನು ಕಾರ್ಯಕ್ರಮ?

ಅಕ್ಕಮಹಾದೇವಿ ಹೆಸರಲ್ಲಿ ವಿಜಯಪುರದಲ್ಲಿ ಅಕ್ಕಮಹದೇವಿ ಮಹಿಳಾ ವಿವಿ ಎಂದು ನಾಮಕರಣ ಮಾಡಿದೆವು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಹೆಸರಿಟ್ಟಿದ್ದು ನಾನು. ಆದರೆ ಇತ್ತೀಚೆಗೆ ನನ್ನ ಬಿಟ್ಟು ಎಲ್ಲಾ ಜಯಂತಿ ಮಾಡ್ತಾ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ಕಿ ಕೇವಲ ಕುರುಬರಿಗಷ್ಟೇ ಮಾಡಿದ್ವಾ? ಇಂದಿರಾ ಕ್ಯಾಂಟೀನ್ ಕೇವಲ ಕುರುಬ ಸಮಾಜಕ್ಕಷ್ಟೇ ಮಾಡಿರಲಿಲ್ಲ. ರಾಜಕೀಯ ಸ್ವಾತಂತ್ರ್ಯ ಬಂದರಷ್ಟೆ ಸಾಲದು, ಆರ್ಥಿಕ-ಸಾಮಾಜಿಕ ಶಕ್ತಿ ಪ್ರತಿಯೊಬ್ಬರಿಗೂ ಬರಬೇಕು. ಆಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದ ಹಾಗೆ ಅಂತಾ ಅಂಬೇಡ್ಕರ್ ಹೇಳಿದ್ದರು. ಧರ್ಮಕ್ಕೋಸ್ಕರ ನಾವಲ್ಲ, ಅದಕ್ಕಾಗಿಯೇ ಅದನ್ನು ʼವೇ ಆಪ್ ದಿ ಲೈಫ್‌ʼ ಅಂತಾರೆ. ಧರ್ಮದಲ್ಲಿ ಮನುಷ್ಯತ್ವ ಇರಬೇಕು. ಮನುಷ್ಯತ್ವ ಇರದ ಧರ್ಮವನ್ನು ತಿರಸ್ಕರಿಸಿ, ಅದನ್ನ ಅನುಸರಿಸಬೇಡಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಸಿದ್ದರಾಮಯ್ಯ ಏನು ಮಾಡಿದ್ರು ಅಂತಾ ಕೆಲವರು ಕೇಳ್ತಾರೆ. ಟೀಕೆ ಮಾಡೋರಿಗೆ ಹೆದರೋದಿಲ್ಲ. ನಾನು ಮಾಡೋ ಕೆಲಸ ನ್ಯಾಯಯುತವಾಗಿದ್ದರೆ, ಯಾರು ಹೇಳಿದರೂ ನಿಲ್ಲಸಲ್ಲ. ಅಧಿಕಾರ ಬರುತ್ತೆ, ಹೋಗುತ್ತೆ. 13 ಚುನಾವಣೆ ಎದುರಿಸಿದ್ದೇನೆ, 5 ಚುನಾವಣೆ ಸೋತಿದ್ದೇನೆ. ಸೋತು ಮನೆಯಲ್ಲಿ ಕುಳಿತಿರಲಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ್ದೇನೆ. ಯಾರಿಗೂ ಹೆದರೋ ಗಿರಾಕಿ ಅಲ್ಲ ನಾನು. ಸುಮ್ಮಸುಮ್ಮನೆ ಹೆದರಿಸೋಕೆ ಬಂದರ ತೊಡೆ ತಟ್ಟೋದು ನನಗೆ ಗೊತ್ತಿದೆ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಸಿದ್ದು ಆಡಳಿತದಲ್ಲಿ 18 ಹಿಂದೂಗಳ ಕೊಲೆಯಾಗಿದೆ: ಸುನಿಲ್ ಕುಮಾರ್

ಕುರುಬರನ್ನು ಎಸ್‌ಟಿಗೆ ಸೇರಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಇದನ್ನು ಮಾಡೋರು ಇವರಲ್ಲ, ಕೇಂದ್ರ ಸರ್ಕಾರದವರು. ಡಬಲ್ ಇಂಜಿನ್ ಸರ್ಕಾರ ಅಂತಾರೆ. ಮಾಡ್ರಪ್ಪ, ಎಸ್‌ಟಿಗೆ ಸೇರಿಸಿ. ಇವರು ಮೂಗಿಗೆ ತುಪ್ಪ ಹಚ್ಚೋರಲ್ಲ, ಹಣೆಗೆ ತುಪ್ಪ ಹಚ್ಚೋರು. ನೀವೆಲ್ಲಾ ದನಿ ಎತ್ತಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ, ಮೇಲ್ಜಾತಿಯವರಿಗೆ ಮೀಸಲಾತಿ ಕೊಡಬೇಕು ಅಂತಾ ಸಂವಿಧಾನದಲ್ಲಿ ಎಲ್ಲಿದೆ ತೋರಿಸಿ? ಇದ್ದರೆ ಹೇಳಿ ಬಿಡಿ ನೋಡೋಣ? ನಾನು ರಾಜೀನಾಮೆ ಕೊಟ್ಟು ಬಿಡ್ತೀನಿ ರಾಜಕೀಯಕ್ಕೆ ಎಂದು ಸವಾಲು ಹಾಕಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED: congress, siddaramaiah, vijayanagara, ಕಾಂಗ್ರೆಸ್, ವಿಜಯನಗರ, ಸಿದ್ದರಾಮಯ್ಯ
Share this Article
Facebook Twitter Whatsapp Whatsapp Telegram
Share

Latest News

ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್
By Public TV
ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ: ರಾಗಾಗೆ ಸಾವರ್ಕರ್ ಮೊಮ್ಮಗ ಸವಾಲು
By Public TV
ಕೆ.ಆರ್.ಮಾರ್ಕೆಟ್ ನಲ್ಲಿ ಕಾಣಿಸಿಕೊಂಡ ದಿಯಾ ಬ್ಯೂಟಿ ಖುಷಿ
By Public TV
ಕೋಮಲ್ ನಟನೆಯ ‘ಯಲಾಕುನ್ನಿ’ ಚಿತ್ರಕ್ಕೆ ಚಾಲನೆ
By Public TV
ನರೇಗಾ ಬಿಲ್ ಪಾವತಿಗೆ ಗ್ರಾ.ಪಂ ಅಧಿಕಾರಿಯಿಂದ ಲಂಚಕ್ಕೆ ಬೇಡಿಕೆ- ಹಣವಿಲ್ಲದೆ ಎತ್ತುಗಳನ್ನು ನೀಡಲು ಮುಂದಾದ ರೈತ
By Public TV
ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ
By Public TV

You Might Also Like

Latest

ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್

Public TV By Public TV 5 mins ago
Latest

ಸಾವರ್ಕರ್ ಬ್ರಿಟಿಷರಲ್ಲಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ: ರಾಗಾಗೆ ಸಾವರ್ಕರ್ ಮೊಮ್ಮಗ ಸವಾಲು

Public TV By Public TV 18 mins ago
Cinema

ಕೆ.ಆರ್.ಮಾರ್ಕೆಟ್ ನಲ್ಲಿ ಕಾಣಿಸಿಕೊಂಡ ದಿಯಾ ಬ್ಯೂಟಿ ಖುಷಿ

Public TV By Public TV 19 mins ago
Cinema

ಕೋಮಲ್ ನಟನೆಯ ‘ಯಲಾಕುನ್ನಿ’ ಚಿತ್ರಕ್ಕೆ ಚಾಲನೆ

Public TV By Public TV 34 mins ago
Follow US
Go to mobile version
Welcome Back!

Sign in to your account

Lost your password?