ನಾನೂ ಕೂಡ ಸಿಎಂ ಅಭ್ಯರ್ಥಿಯೆಂದು ಮನದಾಳದ ಆಸೆಯನ್ನು ಬಿಚ್ಚಿಟ್ಟ ಡಿಕೆಶಿ

Public TV
1 Min Read
DK SHIVAKUMAR

ಮಂಡ್ಯ: ನಾನೂ ಕೂಡ ಸಿಎಂ ಅಭ್ಯರ್ಥಿ ಎಂದು ಹೇಳುವ ಮೂಲಕ ಸಾವಿರಾರು ಜನ ಕಾರ್ಯಕರ್ತರೆದುರು ಇಂಧನ ಸಚಿವ ಡಿಕೆ.ಶಿವಕುಮಾರ್ ತಮ್ಮ ಮನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಮಂಡ್ಯದ ಮದ್ದೂರು ಕ್ಷೇತ್ರದ ಕಾಂಗ್ರೆಸ್ ಮಧುಮಾದೇಗೌಡ ಪರ ರೋಡ್ ಶೋ ನಡೆಸುತ್ತಾ ಮಾತನಾಡಿದ ಇಂಧನ ಸಚಿವ ಡಿಕೆ.ಶಿವಕುಮಾರ್, ಕುಮಾರಣ್ಣ ಮುಖ್ಯಮಂತ್ರಿ ಆಗ್ತಾರೆ ಓಟ್ ಹಾಕಿ ಅಂತಾರೆ. ಹಾಗಾದ್ರೆ ನಾನೇನಿಲ್ವಾ? ಎಂದು ಕಾರ್ಯಕರ್ತರನ್ನು ಪ್ರಶ್ನಿಸುವ ಮೂಲಕ ನಾನು ಕೂಡ ಸಿಎಂ ಅಭ್ಯರ್ಥಿ ಎಂಬ ಗುಟ್ಟು ರಟ್ಟು ಮಾಡಿದ್ದಾರೆ. ಡಿಕೆಶಿ ಮಾತಿಗೆ ಓ ಎಂದು ಕೂಗುವ ಮೂಲಕ ಕಾರ್ಯಕರ್ತರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.

DEEKESHI 1

ಇದೇ ವೇಳೆ ದೇವೇಗೌಡರು, ಕುಮಾರಸ್ವಾಮಿ ವಿರುದ್ಧ ವ್ಯಂಗ್ಯವಾಗಿ ಮಾತನಾಡಿದ ಡಿಕೆಶಿ, ಸಿಎಂ ಆಗಿದ್ದರು, ಪ್ರಧಾನಿ ಆಗಿದ್ರು. ಮಂಡ್ಯಕ್ಕೆ ಏನು ಮಾಡಿದ್ದಾರೆ ಹೇಳ್ಬೇಕಲ್ವಾ ಇದೇನು ಪಂಚಾಯಿತಿ ಕೆಟ್ಟೋಯ್ತಾ? ನಾನೇ ಮುಂದಿನ ಮುಖ್ಯಮಂತ್ರಿ ಅಂದ್ರೆ ಜನ ದಡ್ಡರ? ಇವೆಲ್ಲ ಆಗದಿರೋ ಕಥೆ. ತಮ್ಮಣ್ಣಂಗೆ ಈ ಬಾರಿ ರೆಸ್ಟ್ ಕೊಡಿ. ಮಧುನ ಈ ಬಾರಿ ಗೆಲ್ಸಿ ಎಂದು ಡಿಕೆಶಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ತಮ್ಮ ಮಗ ಮಧುಮಾದೇಗೌಡ ಪರ ಪ್ರಚಾರಕ್ಕೆ ಬಂದಿದ್ದ ಜಿ.ಮಾದೇಗೌಡ ಅವರ ಕಾಲನ್ನು ಮುಟ್ಟಿ ನಮಸ್ಕರಿಸಿ ಡಿಕೆ.ಶಿವಕುಮಾರ್ ಆಶೀರ್ವಾದ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *