ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿ ಅತ್ಯಾಚಾರ ಮಾಡುವುದಾಗಿ ಆನ್ಲೈನ್ನಲ್ಲಿ ಬೆದರಿಕೆ ಹಾಕಿದ್ದ ಆರೋಪದಡಿ ಹೈದರಾಬಾದ್ನಲ್ಲಿ ಇಂಜಿನಿಯರ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಾಮ್ನಾಗೇಶ್ ಶ್ರೀನಿವಾಸ ಅಕುಬಾಥಿನಿ (23) ಬಂಧಿತ ಆರೋಪಿ. ಮುಂಬೈ ಪೊಲೀಸ್ ವಿಶೇಷ ತಂಡ ಈತನನ್ನು ಬಂಧಿಸಿದೆ. ಆರೋಪಿಯು ತನ್ನ ಟ್ವಿಟರ್ ಖಾತೆ ಹೆಸರನ್ನು ಬದಲಾಯಿಸಿಕೊಂಡಿದ್ದ. ಅಲ್ಲದೇ ತಾನು ಪಾಕಿಸ್ತಾನಿ ಎನ್ನುವಂತೆ ಪೋಸ್ಟ್ಗಳನ್ನು ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: RR ಫ್ರಾಂಚೈಸಿ ಜೊತೆ ಮುನಿಸಿಕೊಂಡ ಸಂಜು ಸ್ಯಾಮ್ಸನ್?
ದುಬೈನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡ ಸಾಲು ಸಾಲು ಪಂದ್ಯಗಳಲ್ಲಿ ಸೋಲನುಭವಿಸಿತು. ಇದರಿಂದ ತಂಡದ ನಾಯಕ ವಿರಾಕ್ ಕೊಹ್ಲಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ವಿರಾಟ್ ಮತ್ತು ಅನುಷ್ಕಾ ಶರ್ಮ ಅವರ ಮಗುವಿನ ಮೇಲೆ ಅತ್ಯಾಚಾರದ ಬೆದರಿಕೆಗಳು ಕೇಳಿಬಂದಿದ್ದವು. ಇದನ್ನೂ ಓದಿ: ವಿವಾಹಗಳಲ್ಲಿ ಕೇಕ್ ಕತ್ತರಿಸುವಂತಿಲ್ಲ, ಶಾಂಪೇನ್ ಹಾರಿಸುವಂತಿಲ್ಲ: ಕೊಡವ ಸಮಾಜದಿಂದ ನಿಷೇಧ
ವಿರಾಟ್ ಕೊಹ್ಲಿ ಪುತ್ರಿ ವಿರುದ್ಧ ಅತ್ಯಾಚಾರ ಬೆದರಿಕೆ ಕೇಳಿಬಂದಿದ್ದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಪ್ರಿಯ ವಿರಾಟ್… ಈ ಜನರ ಮನಸ್ಥಿತಿ ದ್ವೇಷದಿಂದ ಕೂಡಿದೆ. ಏಕೆಂದರೆ ಅವರಿಗೆ ಯಾರೂ ಪ್ರೀತಿಯನ್ನು ನೀಡಿಲ್ಲ. ಅವರನ್ನು ಕ್ಷಮಿಸು… ತಂಡವನ್ನು ರಕ್ಷಿಸು ಎಂದು ಟ್ವೀಟ್ ಮಾಡಿದ್ದರು.