ದೂರು ನೀಡಲು ಬಂದ ಮಹಿಳೆಯನ್ನೇ ಬಲೆಗೆ ಬೀಳಿಸಿಕೊಂಡ ಪಿಎಸ್‍ಐ

Public TV
1 Min Read
lovers

-ಪತ್ನಿ ಜೊತೆ ಸೇರಿ ವಿಷ ಕುಡಿಸಿ ಮಹಿಳೆಯ ಕೊಲೆಗೆ ಯತ್ನ

ದಾವಣಗೆರೆ: ಪತಿ -ಪತ್ನಿ ಜಗಳದ ಪ್ರಕರಣದಲ್ಲಿ ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆಯನ್ನೇ ಪಿಎಸ್‍ಐ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಅಲ್ಲದೆ ಈಗ ತನ್ನ ಪತ್ನಿಯ ಜೊತೆ ಸೇರಿ ಮಹಿಳೆಗೆ ವಿಷ ಕುಡಿಸಿ ಕೊಲೆ ಮಾಡಲು ಸಹ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ದಾವಣಗೆರೆಯ ಹದಡಿ ಠಾಣೆಯಲ್ಲಿ ಪಿಎಸ್‍ಐ ಆಗಿ ಕೆಲಸ ಮಾಡುತ್ತಿದ್ದ ರಾಜೇಂದ್ರ ನಾಯ್ಕ್ ಪ್ರಸ್ತುತ ಈಗ ಹಾವೇರಿ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮಹಿಳೆಗೆ ನ್ಯಾಯ ಕೊಡಿಸುವ ನೆಪದಲ್ಲಿ ಆಕೆಯ ಜೊತೆ ಸರಸ-ಸಲ್ಲಾಪ ಮಾಡಿದ್ದಲ್ಲದೇ ಹಣವನ್ನು ಪೀಕಿದ್ದಾನೆ ಎಂದು ದೂರು ದಾಖಲಾಗಿದೆ.

love 1

ಏನಿದು ಪ್ರಕರಣ?
ರಾಜೇಂದ್ರ ಹಿಂದೆ ಹದಡಿ ಪೊಲೀಸ್ ಠಾಣೆಯಲ್ಲಿ ಪಿಎಸ್‍ಐ ಆಗಿ ಕೆಲಸ ಮಾಡುತ್ತಿದ್ದಾಗ ಆ ಠಾಣೆಯ ವ್ಯಾಪ್ತಿಗೆ ಬರುವ ಗ್ರಾಮವೊಂದರಲ್ಲಿ ಪತಿ- ಪತ್ನಿಯ ಜಗಳ ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಆ ಕೇಸ್‍ನಲ್ಲಿ ಮಧ್ಯಸ್ಥಿಕೆ ವಹಿಸಿ ವಿವಾಹಿತ ಮಹಿಳೆಯನ್ನು ಬುಟ್ಟಿಗೆ ಹಾಕಿಕೊಂಡಿದ್ದಲ್ಲದೆ, ಆಕೆಗೆ ಮನೆ ಮಾಡಿಟ್ಟು ಕಣ್ಣಮುಚ್ಚಾಲೆ ಆಟವಾಡುತ್ತಿದ್ದನು. ರಾಜೇಂದ್ರಗೆ ಮದುವೆಯಾದರೂ ಸಹ ಪರ ಸ್ತ್ರೀಯರ ಸಂಗ ಬಿಡುತ್ತಿರಲಿಲ್ಲ.

couple

ಕೆಲ ದಿನಗಳ ನಂತರ ರಾಜೇಂದ್ರ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆಯ ಜೊತೆ ಜಗಳವಾಡಿದ್ದಾನೆ. ತನಗೆ ನ್ಯಾಯ ಕೊಡಿಸುವಂತೆ ಕೇಳಿದ್ದಕ್ಕೆ ಪಿಎಸ್‍ಐ ರಾಜೇಂದ್ರ ತನ್ನ ಪತ್ನಿ ಜೊತೆ ಸೇರಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಲ್ಲದೇ ವಿಷ ಕುಡಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ.

ನೊಂದ ಮಹಿಳೆಯಿಂದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ನೀಡಿದರೂ ಸಹ ಮೇಲಾಧಿಕಾರಿಗಳು ಆತನ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ. ಜನ ಸಾಮಾನ್ಯರಿಗೆ ಒಂದು ನ್ಯಾಯ, ಪೊಲೀಸ್ ಅಧಿಕಾರಿಗಳಿಗೆ ಒಂದು ನ್ಯಾಯ ಎಂದು ಮಹಿಳೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *