ಬೆಂಗಳೂರು: ಪತ್ನಿ ನೋಡಲು ಸುಂದರವಾಗಿಲ್ಲ ಎಂದು ಪತಿ ವಿಚ್ಛೇದನ ನೀಡಲು ಮುಂದಾಗಿರೋ ಘಟನೆ ಬೆಂಗಳೂರಿನ ವಿಜಯನಗರದ ಮಾರೇನಹಳ್ಳಿಯಲ್ಲಿ ನಡೆದಿದೆ.
ಮಾರೇನಹಳ್ಳಿ ನಿವಾಸಿ ಶಶಿಕುಮಾರ್ ವಿಜಯಲಕ್ಷ್ಮೀ ಅವರನ್ನು ಮದುವೆ ಆಗಿದ್ದನು. ಪತಿ ಪತ್ನಿ ಇಬ್ಬರೂ 6 ತಿಂಗಳ ಕಾಲ ಚೆನ್ನಾಗಿಯೇ ಇದ್ದರು. ಆದರೆ 6 ತಿಂಗಳ ಬಳಿಕ ಶಶಿಕುಮಾರ್ ಗೆ ಅದೇನಾಯ್ತು ಗೊತ್ತಿಲ್ಲ ತನ್ನ ವರಸೆ ಬದಲಿಸಿದ್ದಾನೆ. ನೀನು ನೋಡೊದಕ್ಕೆ ಸೌಂದರ್ಯವತಿಯಲ್ಲ. ಹೀಗಾಗಿ ನನಗೆ ನಿನ್ನ ಜೊತೆ ಬಾಳೋದಕ್ಕೆ ಇಷ್ಟ ಇಲ್ಲ. ನಾನು ಬೇರೆ ವಿವಾಹವಾಗಬೇಕೆಂದು ಪತ್ನಿಗೆ ನಿತ್ಯ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.
ಇತ್ತ ವಿಜಯಲಕ್ಷ್ಮೀ ಪತಿ ಟಾರ್ಚರ್ ತಾಳಲಾರದೇ ತವರು ಮನೆಗೆ ಹೋಗಿ ಸೇರಿಕೊಂಡಿದ್ದಾರೆ. ಪತಿ, ಪತ್ನಿ ಇಬ್ಬರನ್ನ ಕುರಿಸಿ ವಿಜಯಲಕ್ಷ್ಮೀ ಪೋಷಕರು ರಾಜಿ ಸಂದಾನ ಮಾಡಿದ್ದಾರೆ. ಆದರೆ ಶಶಿಕುಮಾರ್ ಪತ್ನಿಗೆ ವಿಷಯ ತಿಳಿಯದಂತೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಲ್ಲದೆ ಬಲವಂತವಾಗಿ ಪತ್ನಿ ಬಳಿ ಸಹಿ ಹಾಕುವಂತೆ ಒತ್ತಾಯಿದ್ದಾನೆ. ಪತ್ನಿ ಸಹಿ ಮಾಡಲು ನಿರಾಕರಿಸಿದ್ದಕ್ಕೆ ಕಬ್ಬಿಣದ ರಾಡ್ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ನೀನು ಸತ್ತರೆ ನಾನು ಬೇರೆ ವಿವಾಹವಾಗಬಹುದು ಎಂದು ಶಶಿಕುಮಾರ್ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ಪತ್ನಿ ತೀವ್ರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಶಶಿಕುಮಾರ್ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.