ಬುದ್ಧಿವಾದ ಹೇಳಿದ ಪತ್ನಿಯನ್ನೇ ಕೊಂದ ಪತಿ

Public TV
1 Min Read
ckd murder

ಚಿಕ್ಕೋಡಿ(ಬೆಳಗಾವಿ): ಜಗಳವಾಡುತ್ತಿದ್ದ ಪತಿಗೆ ಜಗಳವಾಡಬೇಡ ಎಂದು ಬುದ್ಧಿವಾದ ಹೇಳಿದಕ್ಕೆ ತಲೆ ಕೆಟ್ಟ ಪತಿ ತನ್ನ ಹೆಂಡತಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ಹುಲಗಬಾಳ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ಸಿದ್ದರಾಯ ಮೊಳೆ(48) ಕೊಲೆಯಾದ ದುರ್ದೈವಿ, ಸಿದ್ದರಾಯ ಮೊಳೆ(54) ಪತ್ನಿಯನ್ನು ಕೊಲೆ ಮಾಡಿದ ಪಾಪಿ.

Police Jeep 1

ಪತಿ ಸಿದ್ದರಾಯ ಸದಾ ಅವರಿವರೊಂದಿಗೆ ಜಗಳವಾಡಿಕೊಳ್ಳುತ್ತಿದ್ದ, ಇದನ್ನು ಕಂಡ ಲಕ್ಷ್ಮೀಬಾಯಿ ಜಗಳವಾಡಬೇಡ ಎಂದು ಬುದ್ಧಿವಾದ ಹೇಳುತ್ತಿದ್ದಳು. ನನಗೇ ಬುದ್ಧಿವಾದ ಹೇಳುತ್ತಿಯಾ ಎಂದು ಕೊಡಲಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ದುರುಳ. ಸ್ಥಳಕ್ಕೆ ಅಥಣಿ ಪೊಲೀಸರು ದೌಡಾಯಿಸಿ ಪಾಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ. ಕೊಲೆಗೆ ಅನೈತಿಕ ಸಂಬಂಧವೂ ಕಾರಣವಿರಬಹುದು ಎಂದು ಪೊಲೀಸರು ಮಾಹಿತಿ ಪಡೆದಿದ್ದಾರೆ, ತನಿಖೆ ಮುಂದುವರಿಸಿದ್ದಾರೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *