ತುಮಕೂರು: ವ್ಯಕ್ತಿಯೊಬ್ಬ ಗಂಡು ಮಕ್ಕಳಾಗಿಲ್ಲ ಎಂದು ತನ್ನ ಇಬ್ಬರು ಮಕ್ಕಳೊಂದಿಗೆ ಪತ್ನಿಯನ್ನು ಮನೆಯಿಂದ ಹೊರ ಹಾಕಿರುವ ಘಟನೆ ಜಿಲ್ಲೆಯ ಕೊರಟಗೆರೆ ಕೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಡನಹಳ್ಳಿ ನಿವಾಸಿ ಶ್ರೀಧರ ತನ್ನ ಪತ್ನಿಗೆ ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ್ದಾನೆ. ಅಲ್ಲದೇ ಪ್ರತಿ ದಿನ ಗಂಡು ಮಕ್ಕಳನ್ನು ಹೆತ್ತಿಲ್ಲ, ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಸದಾ ಪೀಡಿಸುತ್ತಿದ್ದನು. ಅಷ್ಟೇ ಅಲ್ಲದೇ ಗಂಡು ಮಕ್ಕಳಾಗಬೇದಾರೆ ಸೆಕ್ಸ್ ಫಿಲಂ ನೋಡು. ಅದೇ ರೀತಿ ಸೆಕ್ಸ್ ಮಾಡಿದ್ರೆ ಮಾತ್ರ ಗಂಡು ಮಕ್ಕಳು ಆಗುತ್ತವೆ ಎಂದು ವಿಲಕ್ಷಣವಾಗಿ ವರ್ತಿಸುತಿದ್ದನಂತೆ.
ಕಳೆದ ಒಂದು ತಿಂಗಳಿನಿಂದ ಇಬ್ಬರು ಹೆಣ್ಣುಮಕ್ಕಳ ಸಮೇತ ಮನೆಯಿಂದ ಹೊರಹಾಕಿದ್ದಾನೆ. ಈ ಸಂಬಂಧ ಪತ್ನಿ ಶಿರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ರೆ ಪೊಲೀಸರು ಆರೋಪಿ ಶ್ರೀಧರನನ್ನು ಬಂಧಿಸದೇ ರಕ್ಷಣೆಗೆ ನಿಂತಿದ್ದಾರೆ. ಸ್ವತಃ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರೇ ಆರೋಪಿ ಶ್ರೀಧರನ ರಕ್ಷಣೆಗೆ ನಿಂತಿದ್ದಾರೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.
ಆರೋಪಿ ಶ್ರೀಧರ್ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಅವರ ಸಂಬಂಧಿಯಾಗಿದ್ದಾನೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಒತ್ತಡದ ಮೇರೆಗೆ ಗೃಹ ಸಚಿವರೂ ಆದ ಜಿ.ಪರಮೇಶ್ವರ್ ಆರೋಪಿ ಶ್ರೀಧರನ ಬಚಾವ್ ಮಾಡುತ್ತಿದ್ದಾರೆ ಎನ್ನಲಾಗಿದೆ.