ಬೆಂಗಳೂರು: ಮನೆಗೆ ನುಗ್ಗಿ ಪತ್ನಿ ಎದುರೇ ಪತಿಯನ್ನು ಬರ್ಬರವಾಗಿ ಕೊಲೆಗೈದ ಬಳಿಕ ಮೂಟೆ ಕಟ್ಟಿ ಬಿಸಾಕಿದ ಘಟನೆ ನಗರದ ಕುರುಬರಹಳ್ಳಿಯಲ್ಲಿ ನಡೆದಿದೆ.
28 ವರ್ಷದ ನರಸಿಂಹ ಕೊಲೆಯಾದ ಮೃತ ದುರ್ದೈವಿ. ನರಸಿಂಹ ಕುರುಬರ ಹಳ್ಳಿಯಲ್ಲಿ ಪಾನಿ ಪುರಿ ಅಂಗಡಿ ನಡೆಸುತ್ತಿದ್ದ ನರಸಿಂಹ ಅವರ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಪತ್ನಿಯ ಎದುರೇ ಮುಖಕ್ಕೆ ಸ್ಪ್ರೇ ಹಾಕಿ, ಮಚ್ಚು-ಲಾಂಗ್ ಬೀಸಿ ಕೊಲೆ ಮಾಡಿ ಬಳಿಕ ಶವವನ್ನು ಮೂಟೆ ಕಟ್ಟಿ ಮನೆಯ ಬಾತ್ ರೂಮ್ ನಲ್ಲೇ ಎಸೆದು ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಡಾಗ್ ಸ್ಕ್ವಾಡ್ ಪಿಂಗರ್ ಪ್ರಿಂಟ್ ಅವರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.