ಬೆಂಗಳೂರು: ಕೆಲಸದ ವಿಚಾರವಾಗಿ ಜಗಳವಾಗಿ ಪತಿಯೇ (Husband) ಪತ್ನಿಯನ್ನು (Wife) ಹತ್ಯೆಗೈದಿರುವ ಘಟನೆ ಸಂಪಿಗೆಹಳ್ಳಿ (Sampigehalli) ಅಗ್ರಹಾರ ಲೇಔಟ್ನಲ್ಲಿ ನಡೆದಿದೆ.
ಆಯೇಷಾ ಸಿದ್ದಿಕಿ ಕೊಲೆಯಾದ ಪತ್ನಿ. ಸೈಯದ್ ಜಬಿ (47) ಕೊಲೆ ಮಾಡಿದ ಪತಿ. ಆಯೇಷಾ 3 ತಿಂಗಳ ಹಿಂದೆ ಸೈಯದ್ನನ್ನು ಮದುವೆಯಾಗಿದ್ದಳು. ಈ ಹಿಂದೆ ಮದುವೆಯಾಗಿ ಮೊದಲ ಗಂಡ ಮೃತಪಟ್ಟ ಬಳಿಕ ಆಯೇಷಾಗೆ 2ನೇ ಮದುವೆಯಾಗಿತ್ತು. 2ನೇ ಪತಿಗೂ ಡಿವೋರ್ಸ್ ನೀಡಿ ಸೈಯದ್ ಜೊತೆ ಆಯೇಷಾ ವಿವಾಹವಾಗಿತ್ತು. ಇದನ್ನೂ ಓದಿ: ರಸ್ತೆ ಬದಿ ನಮಾಜ್ ಮಾಡ್ತಿದ್ದ ಪ್ಯಾಲೆಸ್ತೀನ್ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆಸಿದ ಇಸ್ರೇಲಿ ಸೈನಿಕ
ಆಯೆಷಾ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಕೆಲಸ ಬಿಡುವಂತೆ ಪತಿ ಸೈಯದ್ ಒತ್ತಾಯಿಸಿದ್ದ. ಕೆಲಸದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಜಗಳ ವಿಕೋಪಕ್ಕೆ ತಿರುಗಿ ಸೈಯದ್ ಪತ್ನಿ ಆಯೇಷಾಳನ್ನು ಕೊಂದಿದ್ದಾನೆ. ಬಳಿಕ ತಾನೇ ಹೋಗಿ ಯಲಹಂಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Mysuru Blast| ಬಲೂನು ಮಾರಾಟಗಾರನಿಗಿತ್ತು 5 ಎಕ್ರೆ ಜಮೀನು!

