ಬೆಂಗಳೂರು: ಗಂಡನಿಂದಲೇ ಹೆಂಡತಿ ಬರ್ಬರ ಕೊಲೆಯಾದ ಘಟನೆ ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.
45 ವರ್ಷದ ಮಂಜುಳಾ ಕೊಲೆಯಾಗಿದ್ದು, ಪತ್ನಿಯನ್ನ ಕೊಂದು ಆರೋಪಿ ಮೈಲಾರಯ್ಯ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ಮೈಲಾರಯ್ಯ ನಗರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದು, ವಿಚ್ಛೇದನ ಕೊಡುವಂತೆ ಪತ್ನಿ ಒತ್ತಡ ಹೇರಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಕೊಲೆಯಾದ ಮಂಜುಳಾ ಇಂದಿರಾ ನಗರ ಕ್ಲಬ್ ನಿಂದ ಮನೆಗೆ ತೆರಳಿದ್ದಳು. ಇದನ್ನ ಪ್ರಶ್ನಿಸಿದ ಪತಿ ಮಂಜುಳಾ ಜೊತೆ ಜಗಳವಾಡಿದ್ದ. ಆಗ ಮಕ್ಕಳು ಕೂಡ ತಾಯಿ ಸಪೋರ್ಟ್ಗೆ ಬಂದು ಅಪ್ಪನನ್ನೇ ಮನೆ ಬಿಟ್ಟು ಹೋಗು ಅಂದಿದ್ರು. ಇದ್ರಿಂದ ಕೆರಳಿದ ಮೈಲಾರಯ್ಯ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಇತ್ತ ಅಮ್ಮನನ್ನ ಕೊಂದ ಅಪ್ಪನಿಗೆ ಮಕ್ಕಳು ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಮಕ್ಕಳ ಕೈಯಿಂದ ತಪ್ಪಿಸಿಕೊಂಡು ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.