ವಿಶ್ವನಾಥ್ ಮತ್ತೊಮ್ಮೆ ಗೆದ್ರೆ ತಾಲೂಕನ್ನೇ ಮಾರಿಬಿಡ್ತಾರೆ- ಕಾಂಗ್ರೆಸ್ ಅಭ್ಯರ್ಥಿ ಕಿಡಿ

Public TV
1 Min Read
manjunath

ಮೈಸೂರು: ಹುಣಸೂರಿನಲ್ಲಿ ಎಚ್. ವಿಶ್ವನಾಥ್ ಮತ್ತೊಮ್ಮೆ ಗೆದ್ದರೆ ಇಡೀ ತಾಲೂಕನ್ನೇ ಮಾರಿಬಿಟ್ಟು ಹೋಗೋ ಪ್ಲಾನ್ ಇದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ.ಮಂಜುನಾಥ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನಾಗಿ ಮಾಡಿದ್ದಕ್ಕೆ ಹುಣಸೂರಿಗೆ ಕಪ್ಪು ಮಸಿ ಬಳಿದಿದ್ದು ಸಾಕು. ಮಂತ್ರಿಯಾಗಿ ಜಿಲ್ಲೆ ಮಾರುವುದಕ್ಕೆ ರೆಡಿಯಾಗಿದ್ದಾರಾ? ಯೋಗೇಶ್ವರ್ ಹೆಸರಿನಲ್ಲಿ ಸಿಕ್ಕಿರುವ ಸೀರೆ ಹಿಂದೆ ವಿಶ್ವನಾಥ್ ಕೈವಾಡವಿದೆ ಎಂದು ಅವರು ಆರೋಪಿಸಿದರು.

MYS 1

ಯೋಗೇಶ್ವರ್ ಫೋಟೋ ಬದಲು ವಿಶ್ವನಾಥ್ ಫೋಟೋ ಅಂಟಿಸುವ ಸಾಧ್ಯತೆ ಇತ್ತು. ಇಂತಹ ನೂರಾರು ಅಕ್ರಮಗಳಿಗೆ ಹುಣಸೂರಿನಲ್ಲಿ ಸಿದ್ಧತೆಯಾಗಿದೆ. ಉಪಚುನಾವಣೆಗಳಲ್ಲಿ ಇಂತಹ ಅಕ್ರಮ ಎಲ್ಲೆ ಮೀರುತ್ತಿದೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಲಿ ಎಂದು ಮಂಜುನಾಥ್ ಒತ್ತಾಯಿಸಿದರು.

30 ಸಾವಿರ ಸೀರೆ ವಶ:
ಮೈಸೂರಿನ ವಿಜಯನಗರ ಬಡಾವಣೆಯ ಮನೆಯಲ್ಲಿ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮವಾಗಿ ಸಂಗ್ರಹಿಸಿದ್ದ ಸೀರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬರೋಬ್ಬರಿ 30 ಸಾವಿರ ಸೀರೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿ ಸೀರೆಯ ಜೊತೆ ಸಿ.ಪಿ ಯೋಗೇಶ್ವರ್‍ಗೆ ಮತ ನೀಡಿ ಎನ್ನುವ ಕರಪತ್ರಗಳಿದ್ದವು.

hsn cp yogeshwar saree 6

ಈ ಕುರಿತು ಸಿ.ಪಿ.ಯೋಗೇಶ್ವರ್ ಚುನಾವಣೆ ಮೊದಲೇ ಸಭೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಚೀಲಗಳಲ್ಲಿ ತುಂಬಿಸಿಡಲಾಗಿದ್ದ ಸೀರೆಗಳ ಜೊತೆಗೆ ಅಪಾರ ಪ್ರಮಾಣದ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *