ಕೊಪ್ಪಳ: ಒಂದು ತುತ್ತು ಅನ್ನಕ್ಕಾಗಿ ಅನೇಕರು ನಿತ್ಯವೂ ಹೋರಾಡುತ್ತಾರೆ. ಚಿಂದಿ ಆಯುವ ವ್ಯಕ್ತಿಯೊಬ್ಬ ಹಸಿವಿನಿಂದ ತಿಪ್ಪೆಯಲ್ಲಿ ಬಿದ್ದ ಆಹಾರವನ್ನು ತಿಂದ ಮನಕುಲುಕವ ಪ್ರಸಂಗ ಗಂಗಾವತಿ ನಗರದಲ್ಲಿ ನಡೆದಿದೆ.
ಗಂಗಾವತಿ ನಗರದ ಹೃದಯಭಾಗ ಬಸವಣ್ಣ ಸರ್ಕಲ್ ಬಳಿಯ ತಿಪ್ಪೆಯಲ್ಲಿ ಊಟದ ಎಲೆಗಳನ್ನು ಎಸೆಯಲಾಗಿತ್ತು. ಇದನ್ನು ನೋಡಿದ ಚಿಂದಿ ಆಯುವ ವೃದ್ಧನೊಬ್ಬ, ಅದರಲ್ಲಿ ಉಳಿದ ಆಹಾರವನ್ನ ತಿಂದಿದ್ದಾನೆ. ವ್ಯಕ್ತಿ ತಿಪ್ಪೆಯಲ್ಲಿ ಬಿದ್ದ ಆಹಾರ ತಿನ್ನೋದನ್ನು ನೋಡಿದ ಸ್ಥಳೀಯರು ಊಟ ಕೊಡಿಸುತ್ತೇವೆ ಎಂದು ಹೇಳಿದ್ರೂ ಆತ ಅಲ್ಲಿರೋದನ್ನ ತಿಂದಿದ್ದಾನೆ.
ವ್ಯಕ್ತಿ ನಗರದಲ್ಲಿ ಪ್ಲಾಸ್ಟಿಕ್ ಆಯುವ ಕೆಲಸ ಮಾಡಿಕೊಂಡಿದ್ದು, ಅಸ್ವಸ್ಥನಲ್ಲಿ ಎಂದು ತಿಳಿದು ಬಂದಿದೆ. ಯಾಕೆ ಆ ರೀತಿ ಎಂಜಲು ಎಲೆಗಳಲ್ಲಿಯ ಆಹಾರ ಸೇವಿಸಿದ ಎಂಬುವುದು ತಿಳಿದು ಬಂದಿಲ್ಲ. ಸ್ಥಳೀಯರ ಪ್ರಕಾರ, ತೀವ್ರ ಹಸಿವಿನಿಂದ ಈ ರೀತಿ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.