ಮಾನವೀಯತೆ ಮೆರೆದ್ರು ಸುಭಾಷ್ ರಾಥೋಡ್

Public TV
1 Min Read
subhash 1

ಯಾದಗಿರಿ: ಚಿಂಚೋಳಿ ಮತ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಮಾನವೀಯತೆ ಮೆರೆದಿದ್ದಾರೆ.

ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಬೈಕ್ ಸವಾರನ ಜೀವ ಉಳಿಸುವ ಮೂಲಕ ಸುಭಾಷ್ ಮಾನವೀಯತೆಯ ಕೆಲಸವನ್ನು ಮಾಡಿದ್ದಾರೆ.

subha s1

ಸುಭಾಷ್ ಅವರು ಕನಕಪುರದಿಂದ ತಮ್ಮ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ಚಿಂಚೋಳಿ ಕಡೆಗೆ ಬರುತ್ತಿದ್ದರು. ಈ ವೇಳೆ ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡು ಬಿದ್ದಿದ್ದರು. ಇದನ್ನು ಗಮನಿಸಿದ ಸುಭಾಷ್ ರಾಥೋಡ್ ಹಾಗೂ ಬೆಂಬಲಿಗರು ತಮ್ಮ ಪ್ರಚಾರ ಗಾಡಿಯಲ್ಲಿ ಚಿಂಚೋಳಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಬೈಕ್ ಸವಾರನಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ.

subhas

ಸದ್ಯ ಬೈಕ್ ಸವಾರ ಮಲ್ಲಿಕಾರ್ಜುನ್ ಹೊಸಮನಿ ಪ್ರಾಣಾಪಾಯದಿಂದ ಪಾರಾಗಿದ್ದು, ಸುಭಾಷ್ ಅವರ ಕೆಲಸವನ್ನು ಜನ ಶ್ಲಾಘಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *