ಹುಬ್ಬಳ್ಳಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಊರಿಗೆ ಆಗಮಿಸಿದ ಯೋಧರಿಗೆ ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಅವರನ್ನು ಸನ್ಮಾನಿಸಲಾಯಿತು.
ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಮಾರುತಿ ಬಂಡಿವಡ್ಡರ್ ಮತ್ತು ಯಲ್ಲಾಪುರ ತಾಲೂಕಿನ ಮುಂಡಗೋಡದ ಸೋಮಶೇಖರ್ ಅಗಡಿ 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದರು. ದೇಶದ ಜಮ್ಮು ಕಾಶ್ಮೀರ, ಸಿಯಾಚಿನ್, ಕೇರಳ, ಅಸ್ಸಾಂ ಮತ್ತು ದೇಶದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.
ಕರ್ತವ್ಯವನ್ನು ಮುಗಿಸಿ ನಿವೃತ್ತರಾಗಿ ತಮ್ಮ ತವರಿಗೆ ಬಂದಿದ್ದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮತ್ತು ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ರಾಜು ಜರತಾರಘರ್ ಇವರ ನೇತೃತ್ವದಲ್ಲಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೀಪಕ್ ಜಿತೂರಿ, ರಾಘು ಹಬೀಬ್, ಅಕ್ಷಯ ಬದ್ದಿ, ಬಸವರಾಜ ಇಚ್ಚಂಗಿ, ಹಿತೇಶ್ ಜೈನ್, ರಾಮಚಂದ್ರ ಕುಲಕರ್ಣಿ, ನೀಲಕಂಠಯ್ಯ ತಡಸದಮಠ, ಷಣ್ಮುಖಯ್ಯ ಪಂಚಾಂಗಮಠ, ಪ್ರಿನ್ಸ್ ಶರ್ಮಾ, ಜಗನ್ನಾಥ್ ಪವಾರ್, ಅಕ್ಷಯ್ ಖೋಡೆ, ಸುನೀತಾ ಜರತಾರಘರ್, ಸುರಜ ಮೆಹರವಾಡೆ, ದೀಪಕ್ ಭೋಚಗೇರಿ, ವಿನಾಯಕ ಅಥಣಿ, ವಿನಾಯಕ ಕಬಾಡೆ, ನಾರಾಯಣ ಬುರೆ ಮತ್ತು ಸೈನಿಕ ಕುಟುಂಬದ ಎಲ್ಲ ಪರಿವಾರದ ಸದಸ್ಯರು ಉಪಸ್ಥಿತರಿದ್ದರು.