Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸತ್ಯ ಮುಚ್ಚಿ ಹಾಕುವ ಯತ್ನ ನಡೀತಿದೆ: ದಿಂಗಾಲೇಶ್ವರ ಸ್ವಾಮೀಜಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dharwad | ಸತ್ಯ ಮುಚ್ಚಿ ಹಾಕುವ ಯತ್ನ ನಡೀತಿದೆ: ದಿಂಗಾಲೇಶ್ವರ ಸ್ವಾಮೀಜಿ

Dharwad

ಸತ್ಯ ಮುಚ್ಚಿ ಹಾಕುವ ಯತ್ನ ನಡೀತಿದೆ: ದಿಂಗಾಲೇಶ್ವರ ಸ್ವಾಮೀಜಿ

Public TV
Last updated: February 23, 2020 11:07 pm
Public TV
Share
3 Min Read
Dingaleshwara Swamiji
SHARE

– ನಡು ರಸ್ತೆಯಲ್ಲೇ ಶ್ರೀಗಳ ಭಾಷಣ
– 45 ದಿನದ ಗಡವು ನೀಡಿದ ದಿಂಗಾಲೇಶ್ವರ ಶ್ರೀ

ಹುಬ್ಬಳ್ಳಿ: ಮೂರುಸಾವಿರ ಮಠ ಉತ್ತರಾಧಿಕಾರವಾಗಿ ಇಂದು ಕೂಡ ಸತ್ಯ ದರ್ಶನವಾಗಲಿಲ್ಲ. ಸತ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.

ಮೂರು ಸಾವಿರ ಮಠದಲ್ಲಿ ಇಂದು ದತ್ತದರ್ಶನಕ್ಕೆ ಆಹ್ವಾನ ನೀಡಿದ್ದರು. ಆದರೆ ಅವರಿಗೆ ಮಠ ಪ್ರವೇಶಿಸಿದಂತೆ ಬ್ಯಾರಿಕೇಡ್ ಹಾಕಲಾಗಿತ್ತು. ಹೀಗಾಗಿ ಮೂರು ಸಾವಿರ ಮಠದ ಹೊರಭಾಗದಲ್ಲಿಯೇ ಭಕ್ತರನ್ನು ಉದ್ದೇಶಿಸಿ ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿದರು.

hbl 3 savira matt 3 1

ಬಳಿಕ ಮಠ ಪ್ರವೇಶಿಸಿದ ಅವರು, ಜಗದ್ಗುರು ಗುರುಸಿದ್ದೇಶ್ವರ ಮಹಾಶಿವಯೋಗಿಗಳ ಗದ್ದುಗೆ ದರ್ಶನ ಪಡೆದುಕೊಂಡರು. ಬಳಿಕ ಮಾತನಾಡಿದ ಅವರು, ನಾವು ಯಾವುದೇ ಗಲಾಟೆ ಮಾಡಲು ಬಂದಿಲ್ಲ. ಮಠದ ಮೇಲೆ ಅಭಿಮಾನ ಉಳ್ಳವರು. ಮುಂದಿನ 45 ದಿನಗಳಲ್ಲಿ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯವರೆಗೆ ಬಾಯಿ ಮೆಚ್ಚಿಕೊಂಡು ಕೂರುತ್ತೇನೆ. ಜಗದ್ಗುರುಗಳು, ಮಠದ ಶ್ರೀಗಳು ಇತ್ಯರ್ಥ ಪಡಿಸಬೇಕು ಎಂಬ ಗಡುವು ನೀಡಿದರು.

ಶನಿವಾರ ರಾತ್ರಿ ಕೆಲವರು ನಮ್ಮ ಬಳಿ ಬಂದಿದ್ದರು. ಸತ್ಯ ದರ್ಶನ ನಿಲ್ಲಿಸಲು ಒತ್ತಡ ಹೇರಿದ್ದರು. ನಮ್ಮ ಗುರುಗಳನ್ನು ಕಟ್ಟಿಹಾಕುವ ಯತ್ನ ನಡೆದಿದೆ. ಇದರಲ್ಲಿ ಕೆಲ ಕಾವಿಧಾರಿಗಳ ಕುತಂತ್ರವಿದೆ. ಈ ಭಾರೀ ಸತ್ಯ ದರ್ಶನ ಆಗಿಲ್ಲ. ಕೋರ್ಟಿನಲ್ಲಿ ಇತ್ಯರ್ಥ ಬೇಡ ಎಂದರು.

vlcsnap 2020 02 23 23h02m33s72

ಆಸ್ತಿ, ಅಧಿಕಾರ, ಪಟ್ಟಕ್ಕಾಗಿ ಪಟ್ಟಾಧಿಕಾರ ಬೇಡ:
ನಾನು ಮೂರುಸಾವಿರ ಮಠದ ಆಸ್ತಿಗೆ ಆಸೆ ಪಟ್ಟಿಲ್ಲ. ಆದರೆ ನಾನು ಉತ್ತರಾಧಿಕಾರಿ ಎಂದು ಗೊತ್ತಾದ ಮೇಲೆಯೇ ನನ್ನ ಮೇಲೆ ಕೊಲೆ ಪ್ರಕರಣ ಹೊರಿಸಲಾಗಿತ್ತು. ಅಷ್ಟೇ ಅಲ್ಲದೆ ಕೊಲೆಗೂ ಪ್ರಯತ್ನ ನಡೆದಿವೆ. ನಾನು ದೊಡ್ಡ ಮಠದ ಸ್ವಾಮೀಜಿಯಾಗಬೇಕು ಅಂದುಕೊಂಡಿಲ್ಲ. ದೊಡ್ಡ ಮಟ್ಟದ ಸ್ವಾಮೀಜಿಯಾಗಬೇಕು ಅಂದುಕೊಂಡಿದ್ದೇನೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ನಾನು ಸ್ವಯಂ ಪ್ರೇರಣೆಯಿಂದ ಸನ್ಯಾಸಿಯಾಗಿದ್ದೇನೆ. ನನ್ನನ್ನು ಯಾರೂ ಕೂಡ ಸನ್ಯಾಸಿಯನ್ನಾಗಿ ಮಾಡಿಲ್ಲ. ಬಾಲೇಹೊಸೂರಿನ ಮಠಕ್ಕೆ ನೇಮಕ ಮಾಡಿದಾಗ ಮಠದ ಆರ್ಥಿಕ ಸ್ಥಿತಿ ಸರಿಯಿರಲಿಲ್ಲ. ಆ ಪರಿಸ್ಥಿತಿಯಲ್ಲಿ ನಾನು ಮಠದ ಅಧಿಕಾರ ವಹಿಸಿಕೊಂಡೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ತಿಂಗಳು ಗಂಜಿ ತಿಂದು ಬದುಕಿದ್ದೇನೆ. ಔಷದ ತರಲು ಕೂಡ ಹಣ ವಿರಲಿಲ್ಲ. ಇಂದು ಕರ್ನಾಟಕವೇ ಗಮನ ಹರಿಸುವಂತೆ ಮಠವನ್ನು ಬೆಳೆಸಿದ್ದೇನೆ ಎಂದು ಹೇಳಿದರು.

vlcsnap 2020 02 23 23h03m15s235

2006ರಲ್ಲಿ ಮೂಜಗು ಶ್ರೀಗಳು ದೂರವಾಣಿ ಕರೆ ಮಾಡಿ ಆರ್ಥಿಕ ಹಾಗೂ ಕಾನೂನು ಮುಗಟ್ಟಿನಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದರು. ತಕ್ಷಣವೇ ಮುಂಬೈ ಕಾರ್ಯಕ್ರಮ ಮೊಟಕುಗೊಳಿಸಿ ಮೂರುಸಾವಿರ ಮಠಕ್ಕೆ ಬಂದೆ. ಮೂರು ಸಾವಿರ ಮಠದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದೇನೆ. ಸಿರಗೇರಿ ಜಗದ್ಗುರು ಕರೆದುಕೊಂಡು ಹೋಗಿ ಮೂರು ಸಾವಿರ ಮಠದ ಇತ್ಯರ್ಥಕ್ಕೆ ಅಂಗಲಾಚಿದ್ದೇವೆ. ಮಠದ ನ್ಯಾಯ ನಿರ್ಣಯ ಸುಪ್ರೀಂಕೋರ್ಟ್ ವೆರೆಗೂ ಹೋಯಿತು. ರುದ್ರಮುನಿ ಸ್ವಾಮೀಜಿ ಉತ್ತರಾಧಿಕಾರ ವಿವಾದದಲ್ಲಿ ಒಂದು ಕೋಟಿ ರೂ.ವನ್ನು ನೀಡುವಂತಾಗಿತ್ತು. ಕೂಡಲೇ ಫೋನ್ ಮಾಡಿ ವಿವಿಧ ಪ್ರದೇಶದ ಭಕ್ತರಿಂದ ಹಣ ಪಡೆದೆ. ಅದರಲ್ಲಿ ಹಾವೇರಿ ಬ್ಯಾಡಗಿ 50 ಲಕ್ಷ ರೂ., ಲಕ್ಷ್ಮೇಶ್ವರದ ಭಕ್ತರು 15 ಲಕ್ಷ ರೂ., ಬೆಳಗಾವಿ 5 ಲಕ್ಷ ರೂ., ಹಾವನೂರ 5 ಲಕ್ಷ ರೂ., ಬಾಲೆಹೊಸೂರಿನ 5 ಲಕ್ಷ ರೂ., ಸಿಕ್ಕಿದೆ. ಆ ಹಣವನ್ನು ಪಡೆದು ವ್ಯವಹಾರವನ್ನು ನಿಭಾಯಿಸಿದ್ದೆ ಎಂದು ನೆನೆದರು.

ಅಲ್ಲದೇ ಕೋಲ್ಕತ್ತಾಗೆ ಹೋಗಲು ಬಾಲೆಹೊಸೂರಿನ ಸ್ವಂತ ಹಣವನ್ನು 25 ಲಕ್ಷ ನೀಡಿದ್ದೇವೆ. 2006ರಿಂದ ಮೂಜಗು ಶ್ರೀಗಳು, ಈ ಮಠಕ್ಕೆ ನೀವೇ ಕುಳಿತು ಕೊಳ್ಳಿ ಎಂದಿದ್ದರು. ಆ ಸಂದರ್ಭದಲ್ಲಿ ನಾನು ಒಪ್ಪಲಿಲ್ಲ. ಆದರೂ ಒಪ್ಪಿಸಲು ಮುಂದಾದರೂ ಎಂದರು.

ದಾಖಲೆಗಳ ಸಮೇತವಾಗಿ ಮಾತನಾಡಲು ವಕೀಲರನ್ನು ಕರೆದುಕೊಂಡು ಬಂದಿದ್ದೇನೆ. ನನ್ನನ್ನು ಮಠಾಧಿಪತಿ ಮಾಡಬಾರದು ಎಂದು ಕುತಂತ್ರ ಮಾಡಿದ್ದಾರೆ. ಅಲ್ಲದೇ ಸುಮಾರು ಬಾರಿ ನಾನು ಹುಬ್ಬಳ್ಳಿಗೆ ಬಂದಾಗ ಎಲ್ಲಿಯೂ ನನ್ನನ್ನು ಮಠಾಧಿಪತಿ ಮಾಡಲು ಹೇಳಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ನೆಹರು ಓಲೇಕಾರ, ಜಿ.ಎಸ್.ಗಡ್ಡದೇವರಮಠ, ಪ್ರಕಾಶ ಬೆಂಡಿಗೇರಿ, ಮಾಂತೇಶ ಗಿರಿಮಠ, ಸಿದ್ದಣ್ಣ ಶೆಟ್ಟರ್, ಡಿ.ಟಿ.ಪಾಟೀಲ, ಶಿವಾನಂದ ಮುತ್ತಣ್ಣವರ ಸೇರಿದಂತೆ ಇತರರು ಇದ್ದರು.

ಸ್ವಚ್ಛತಾ ಕಾರ್ಯ:
ದಿಂಗಾಲೇಶ್ವರ ಸ್ವಾಮೀಜಿಗಳು ನೇತೃತ್ವದಲ್ಲಿ ಇಂದು ಮೂರು ಸಾವಿರ ಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಯದರ್ಶನ ಸಭೆಗೆ ಆಗಮಿಸಿದ್ದ ಭಕ್ತರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಭೆಯ ನಂತರದಲ್ಲಿ ದಿಂಗಾಲೇಶ್ವರ ಸ್ವಾಮೀಜಿಯವರು ಕಸ ಗೂಡಿಸುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡರು.

vlcsnap 2020 02 23 23h01m33s230

ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತಾಧಿಗಳಿಗೆ ಹಾಗೂ ದಿಂಗಾಲೇಶ್ವರ ಸ್ವಾಮೀಜಿಗಳಿಗೆ ಬೆಂಬಲಿಗರಿಗೆ ಮಠದ ಹೊರಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಪ್ರಸಾದ ವ್ಯವಸ್ಥೆ ನಂತರದಲ್ಲಿ ಬಿದ್ದಿರುವ ಕಸವನ್ನು ದಿಂಗಾಲೇಶ್ವರ ಸ್ವಾಮೀಜಿ ಅವರು ಗೂಡಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.

TAGGED:Dingaleshwara SwamijihubliMoorusavir MathPublic TVspeechದಿಂಗಾಲೇಶ್ವರ ಸ್ವಾಮೀಜಿಪಬ್ಲಿಕ್ ಟಿವಿಬಾಲೇಹೊಸೂರುಮೂರು ಸಾವಿರ ಮಠಹುಬ್ಬಳ್ಳಿ
Share This Article
Facebook Whatsapp Whatsapp Telegram

Cinema news

Mahesh Babus AMB Cinemas
ಯುಗಾದಿಗೆ ಬಂಪರ್ ಆಫರ್ ಕೊಟ್ಟ ಮಹೇಶ್ ಬಾಬು ‘ಎಎಂಬಿ ಸಿನಿಮಾಸ್’
Cinema Latest South cinema Top Stories
Ranveer Singh in Dhurandhar 2
ಜಾಗಿಂಗ್‌ ಮಾಡುತ್ತಾ ‘ಧುರಂಧರ್’‌ ಸಿನಿಮಾ ಬಗ್ಗೆ ಮಾತನಾಡಿದ ಕೆನಡಾ ಪ್ರಧಾನಿ, ಫಿನ್‌ಲ್ಯಾಂಡ್‌ ಅಧ್ಯಕ್ಷ
Bollywood Cinema Latest Main Post World
I Want Nayanthara AIADMK MPs Dig At MK Stalins Initiative Sparks Row
ನನಗೆ ನಯನತಾರ ಬೇಕು, ಕನಸು ಈಡೇರಿಸುವಿರಾ – ಎಐಎಡಿಎಂಕೆ ಸಂಸದನ ಪ್ರಶ್ನೆ
Cinema Latest National South cinema Top Stories
darshan 1
ದರ್ಶನ್ ಒಳಸಂದರ್ಶನಕ್ಕೆ ಕೋರ್ಟ್ ಅಸ್ತು – ಅಂತಿಮ ನಿರ್ಧಾರ ಜೈಲು ಅಧೀಕ್ಷಕರಿಗೆ ಬಿಟ್ಟದ್ದು ಎಂದ ನ್ಯಾಯಾಲಯ
Bengaluru City Cinema Court Districts Karnataka Latest Top Stories

You Might Also Like

LPG Commercial Cylinder
Bengaluru City

ರಾಜ್ಯದಲ್ಲಿ ಗ್ಯಾಸ್ ವಿತರಣೆಗೆ ಗೈಡ್‌ಲೈನ್ಸ್ ಬಿಡುಗಡೆ – ಹೋಟೆಲ್‌ಗಳಿಗೆ ಕೇವಲ 10%

Public TV
By Public TV
29 minutes ago
Haveri Tractor Driver Death
Crime

ಇಟ್ಟಿಗೆ ತುಂಬಿದ ಟ್ರ‍್ಯಾಕ್ಟರ್ -‌ ಟ್ರೇಲರ್ ಮಧ್ಯೆ ಸಿಲುಕಿ ಚಾಲಕ ದುರ್ಮರಣ

Public TV
By Public TV
2 hours ago
Kolar Head Constable Heart Arttack
Districts

ಹೃದಯಾಘಾತದಿಂದ ಹೆಡ್‌ ಕಾನ್ಸ್‌ಟೇಬಲ್ ಸಾವು

Public TV
By Public TV
2 hours ago
PRAJWAL REVANNA 1
Bengaluru City

ಪ್ರಜ್ವಲ್ ರೇವಣ್ಣ ಕೇಸ್ – ಪೆನ್‌ಡ್ರೈವ್ ಹಂಚಿಕೆ ಪ್ರಕರಣದಲ್ಲಿ 13,712 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

Public TV
By Public TV
3 hours ago
Delhi Palam Residential Building Fire
Latest

Delhi | ಪಾಲಂನ ವಸತಿ ಕಟ್ಟಡದಲ್ಲಿ ಅಗ್ನಿ ಅವಘಡ – 8 ಮಂದಿ ಸಾವು

Public TV
By Public TV
3 hours ago
KIM JONG UN
Latest

ಉ.ಕೊರಿಯಾ ಚುನಾವಣೆ: 99.93% ಮತ ಪಡೆದು ಮತ್ತೆ ಭರ್ಜರಿ ಗೆಲುವು ಸಾಧಿಸಿದ ಕಿಮ್‌ ಜಾಂಗ್‌ ಉನ್‌

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?