ಹುಬ್ಬಳ್ಳಿ: ಹಳೇಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯ ಒಟ್ಟು 8 ಮಂದಿಗೆ ಜಾಮೀನು ನೀಡಿದೆ.
ಹುಬ್ಬಳ್ಳಿಯ 4ನೇ ಹುಚ್ಚುವರಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿದ್ಯಾರ್ಥಿಗಳೆಂಬ ಕಾರಣಕ್ಕೆ ಕೋರ್ಟ್ ಬೇಲ್ ಕೊಟ್ಟಿದೆ.
ಸಮೀರ್ ಪಂತೋಜಿ, ಮೊಹಮ್ಮದ್ ಶಾದಿಕ್ ಕಾಂಚಗಾರ, ಅನ್ವರ್ ಮೊಗರೇ, ಮಲಿಕ್ ರಿಹಾನ ಖಾನ್ ಸೂರ್, ಮೊಹಮ್ಮದ್ ಮುದಸಿರ್ ಅಲಿಯಾಸ್ ಬಬಲು, ನಜಿರ್ ಅಹಮ್ಮದ್, ಹೊನ್ನಯಲ್ ಇಮ್ಮತಿಯಾಜ್ ಹಾಗೂ ಅಹಮ್ಮದ್ ಗದಗವಾಲೆಗೆ ಜೈಲಿನಿಂದ ಮುಕ್ತರಾಗಿದ್ದಾರೆ. ಇದನ್ನೂ ಓದಿ: ಪ್ರಾಣಹಾನಿಯ ವಿಷಯದಲ್ಲಿ ರಾಜಕೀಯ ಮಾಡುವ ಇಚ್ಛೆಯಿಲ್ಲ: ಡಿಕೆಶಿ
ಓರ್ವನಿಗೆ ವೈದ್ಯಕೀಯ ಗ್ರೌಂಡ್ ಮೇಲೆ ಬೇಲ್ ಕೊಟ್ಟರೆ, ಇನ್ನೊಬ್ಬನಿಗೆ ಚಾರ್ಜ್ ರ್ಶೀಟ್ ಆಗದ ಹಿನ್ನೆಲೆಯಲ್ಲಿ ಬೇಲ್ ನೀಡಲಾಗಿದೆ. ಒಟ್ಟಿನಲ್ಲಿ ವಿಜಯಪುರ ಮತ್ತು ಬೀದರ್ ಜೈಲಿನಲ್ಲಿದ್ದ ಒಟ್ಟು 8 ಮಂದಿ ಪುಂಡರು ಜೈಲಿನಿಂದ ಹೊರಬಂದರು.