ಶೆಟ್ಟರ್ ಕುಟುಂಬಕ್ಕೆ ಕಾರಜೋಳ ಸಾಂತ್ವನ

Public TV
1 Min Read
HBL 1 1

ಹುಬ್ಬಳ್ಳಿ: ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮನೆಗೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಭೇಟಿ ನೀಡಿದ್ದಾರೆ.

ಇದೇ ಶೆಟ್ಟರ್ ಕುಡುಂಬಕ್ಕೆ ಡಿಸಿಎಂ ಅವರು ಸಾಂತ್ವನ ಹೇಳಿದ್ದಾರೆ. ಶೆಟ್ಟರ್ ಅವರ ತಾಯಿ ಬಸವಣ್ಣೆವ್ವ ಶೆಟ್ಟರ್ ಜ.10ರಂದು ನಿಧನರಾಗಿದ್ದರು.

HBL 5

ಮೃತರ ಆತ್ಮಕ್ಕೆ ಪರಮಾತ್ಮನು ಶಾಂತಿಯನ್ನು ನೀಡಲಿ. ಜಗದೀಶ್ ಶೆಟ್ಟರ್, ಅವರ ಕುಟುಂಬದ ಪರಿವಾರದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಭರಿಸಲಿ ಎಂದು ಅವರು ತಿಳಿಸಿದರು.

ಬಸವಣೆವ್ವ ಶಿವಪ್ಪ ಶೆಟ್ಟರ್‍ಗೆ ಮಾಜಿ ಸಿಎಂ ಹಾಲಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಎಂಎಲ್‍ಸಿ ಪ್ರದೀಪ್ ಶೆಟ್ಟರ್ ಇಬ್ಬರು ಪುತ್ರರಿದ್ದು, ಅಪಾರ ಕುಟುಂಬಸ್ಥನ್ನು ಅಗಲಿರುವ ಬಸವಣೆವ್ವ ಶೆಟ್ಟರ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *