ಉತ್ತರಾಧಿಕಾರಿ ವಿವಾದ – ಮೂರು ಸಾವಿರ ಮಠದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Public TV
1 Min Read
hbl 3 savira matt 3

ಹುಬ್ಬಳ್ಳಿ: ಜಿಲ್ಲೆಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ತಾರಕಕ್ಕೇರಿದ್ದು, ಉತ್ತರಾಧಿಕಾರಿ ದಿಂಗಾಲೇಶ್ವರ ಸ್ವಾಮೀಜಿ ತಮ್ಮನ್ನ ಉತ್ತರಾಧಿಕಾರಿಯಾಗಿ ನೇಮಕ ಮಾಡಿದ್ದು ಸತ್ಯವೋ ಸುಳ್ಳೋ ಅನ್ನೋ ಬಗ್ಗೆ ಇಂದು ಸತ್ಯ ದರ್ಶನಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

hbl 3 savira matt 1

ದಿಂಗಾಲೇಶ್ವರ ಸ್ವಾಮೀಜಿ ಇಂದು ಸತ್ಯ ದರ್ಶನಕ್ಕೆ ಮುಂದಾಗಿದ್ದು. ಬೆಳಗ್ಗೆ 11 ಗಂಟೆಗೆ ನೆಹರು ಮೈದಾನದಿಂದ ಮೆರವಣಿಗೆ ಮೂಲಕ ಆಗಮಿಸಿ ಮಠದ ಆವರಣದಲ್ಲಿ ಸತ್ಯ ದರ್ಶನ ಸಭೆ ನಡೆಸಲಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿ ಕರೆ ನೀಡಿದ ಹಿನ್ನೆಲೆಯಲ್ಲಿ ಮಠಕ್ಕೆ ಇಂದು ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಮಠದ ಆವರಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

hbl 3 savira matt

ದಿಂಗಾಲೇಶ್ವರ ಸ್ವಾಮೀಜಿ ನಡೆಸಲು ಮುಂದಾಗಿರುವ ಸತ್ಯ ದರ್ಶನ ಸಭೆಗೆ ಮಠದ ಆಡಳಿತ ಅನುಮತಿ ನಿರಾಕರಿಸಿದ್ದು, ಮಧ್ಯ ರಾತ್ರಿವರೆಗೂ ನಡೆದ ಸಂಧಾನ ಸಭೆ ವಿಫಲವಾಗಿದೆ. ಈ ಹಿನ್ನೆಲೆ ಮಠದ ಕತೃ ಗದ್ದುಗೆಗೆ ಬರೋ ಭಕ್ತರ ದರ್ಶನಕ್ಕಾಗಿ ವಿಶೇಷ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲದೇ ಮಠದ ಆವರಣದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಸತ್ಯ ದರ್ಶನಕ್ಕೆ ಮುಂದಾಗಿರುವುದರಿಂದ ಇಂದು ಎನಾಗುತ್ತೋ ಎನೋ ಎನ್ನುವ ಆತಂಕ ಮಠದ ಭಕ್ತರದ್ದಾಗಿದೆ.

HBL Dingaleshwar Swamiji

ಮೂರು ಸಾವಿರ ಮಠದ ಜಗದ್ಗುರುಗಳಾದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿಗಳು ಸಹ ಸದ್ಯಕ್ಕೆ ಉತ್ತರಾಧಿಕಾರಿ ಅವಶ್ಯಕತೆಯಿಲ್ಲ. ಮಠವನ್ನು ನೋಡಿಕೊಂಡು ಹೋಗುವ ಸಾಮರ್ಥ್ಯ ತಮಗಿದ್ದು, ಉತ್ತರಾಧಿಕಾರಿ ವಿವಾದ ತಮ್ಮ ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ.

ಈ ಮಧ್ಯೆ ಇಂದು ದಿಂಗಾಲೇಶ್ವರ ಸ್ವಾಮೀಜಿಗಳು ಮಠದಲ್ಲಿ ತಮ್ಮನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದು ಸುಳ್ಳೋ? ಸತ್ಯವೋ? ಅನ್ನೋದು ಬಹಿರಂಗವಾಗಲಿ ಎಂದು ದಾಖಲೆಗಳ ಪ್ರದರ್ಶನಕ್ಕೆ ಮುಂದಾದರೆ, ಇತ್ತ ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಸಹ ಇಂದು ಮಠಕ್ಕೆ ಭೇಟಿ ನೀಡುವುದಾಗಿ ತಿಳಿಸಿದ ಪರಿಣಾಮ ಮಠದ ಆವರಣದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *