Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ನಮ್ಮ ಸಂಸದರಿಗೆ ಈಗ ಎಷ್ಟು ಸಂಬಳ? ಭತ್ಯೆ ಎಷ್ಟು ಸಿಗುತ್ತೆ?

Public TV
Last updated: April 12, 2017 6:55 pm
Public TV
Share
3 Min Read
mp salary
SHARE

ಕಂಪೆನಿಗಳಲ್ಲಿ ಹೇಗೆ ಸಿಬ್ಬಂದಿಗೆ ಸಂಬಳವನ್ನು ಹೆಚ್ಚಳ ಮಾಡಲಾಗುತ್ತದೋ ಅದೇ ರೀತಿಯಾಗಿ ಸಂಸದರ ವೇತನವೂ ಕೂಡ ಕಾಲ ಕಾಲಕ್ಕೆ ಪರಿಷ್ಕರಣೆ ಆಗುತ್ತದೆ. ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರ ಇರುವ ಜಂಟಿ ಸಮಿತಿ ಅಧ್ಯಯನ ನಡೆಸಿ ಸಂಸದರ ಸಂಬಳವನ್ನು ಪರಿಷ್ಕರಿಸುತ್ತದೆ. ಹೀಗಾಗಿ ಇಲ್ಲಿ 2010ರಲ್ಲಿ ವೇತನ ಪರಿಷ್ಕರಣೆಯಂತೆ ಪ್ರಸ್ತುತ ಲೋಕಸಭಾ ಸದಸ್ಯರು ಪಡೆಯುತ್ತಿರುವ ಸಂಬಳ ಮತ್ತು ಭತ್ಯೆಯ ವಿವರಗಳನ್ನು ನೀಡಲಾಗಿದೆ.

ಸಂಬಳ ಮತ್ತು ಭತ್ಯೆ
#ತಿಂಗಳ ಸಂಬಳ: ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಪ್ರಸ್ತುತ ಒಂದು ತಿಂಗಳಿಗೆ 50 ಸಾವಿರ ರೂ. ಸಂಬಳ ಸಿಗುತ್ತದೆ. ದಿನ ಭತ್ಯೆ ಯಾಗಿ 2 ಸಾವಿರ ರೂ. ಸಿಕ್ಕಿದರೆ, ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 45 ಸಾವಿರ ರೂ. ಸಿಗುತ್ತದೆ.

#ಕಚೇರಿ ಭತ್ಯೆ: ಪ್ರತಿ ತಿಂಗಳು 45 ಸಾವಿರ ರೂ. ಸಿಗುತ್ತದೆ. ಇದರಲ್ಲಿ 15 ಸಾವಿರ ರೂ. ಸಭೆ, ಪೋಸ್ಟ್ ಖರ್ಚುಗಳನ್ನು ಮಾಡಬಹುದು.

ಪ್ರವಾಸ ಭತ್ಯೆ:
ಕ್ಷೇತ್ರ ಮತ್ತು ಸಂಸತ್ ಕಲಾಪದಲ್ಲಿ ಭಾಗವಹಿಸಲು ಮನೆಯಿಂದ ಪ್ರಯಾಣಿಸಿದರೆ ಅವರಿಗೆ ರೈಲ್ವೇ ಮತ್ತು ವಿಮಾನದಲ್ಲಿ ರಿಯಾಯಿಯಿತಿ ಇದೆ.

#ರೈಲು: ಸಂಸದರಿಗೆ ರೈಲು ಪ್ರಯಾಣಕ್ಕೆ ಉಚಿತ ಪಾಸ್ ನೀಡಲಾಗುತ್ತದೆ. ಈ ಪಾಸನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಹವಾನಿಯಂತ್ರಿತ ಬೋಗಿ ಅಥವಾ ಎಕ್ಸ್‍ಕ್ಯುಟಿವ್ ದರ್ಜೆಯಲ್ಲಿ ಉಚಿತವಾಗಿ ಯಾವ ಸಮಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣಿಸಬಹುದು. ಸಂಸದರ ಜೊತೆ ಅವರ ಪತಿ/ಪತ್ನಿಯರಿಗೂ ಉಚಿತ ಪ್ರಯಾಣಿಸಲು ಪಾಸ್ ನೀಡಲಾಗುತ್ತದೆ.

#ವಿಮಾನ ಪ್ರಯಾಣ: ಒಂದು ವರ್ಷದಲ್ಲಿ ಗರಿಷ್ಟ 34 ಬಾರಿ ಸಿಂಗಲ್ ಟಿಕೆಟ್ ಮೂಲಕ ವಿಮಾನ ಪ್ರಯಾಣಿಸಬಹುದು. 8 ಬಾರಿ ಪತಿ/ ಪತ್ನಿ ಜೊತೆಯಾಗಿ ಪ್ರಯಾಣ ಬೆಳೆಸಬಹುದು. ಈ ಗರಿಷ್ಟ ಮಿತಿಯನ್ನು ಬಳಸದೇ ಇದ್ದರೆ ಉಳಿಕೆಯಾಗಿರುವ ಪ್ರಯಾಣದ ಟಿಕೆಟ್ ಮುಂದಿನ ವರ್ಷಕ್ಕೆ ವರ್ಗವಾಗುತ್ತದೆ.

#ರಸ್ತೆ: 1 ಕಿ.ಮಿ.ಗೆ 16 ರೂ. ನೀಡಲಾಗುತ್ತದೆ.

ವಸತಿ:
ಹೊಸದಾಗಿ ಆಯ್ಕೆಯಾಗಿರುವ ಸಂಸದ್ ಸದಸ್ಯರಿಗೆ ಆರಂಭದಲ್ಲಿ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಆಯಾ ರಾಜ್ಯಗಳು ಹೋಟೆಲ್, ಗೆಸ್ಟ್ ಹೌಸ್‍ಗಳನ್ನು ನೀಡಬೇಕಾಗುತ್ತದೆ. ಶಾಶ್ವತವಾಗಿ ನೆಲೆ ಕಲ್ಪಿಸುವವರೆಗೂ ಅವರು ಈ ಜಾಗದಲ್ಲಿ ತಂಗಬಹುದು.

ಅವಧಿ ಪೂರ್ಣ ಆಗುವವರೆಗೂ ಸಂಸತ್ ಸದಸ್ಯರಿಗೆ ಉಚಿತ ಮನೆಯನ್ನು ನೀಡಲಾಗುತ್ತದೆ. ಒಂದು ವೇಳೆ ರಾಜೀನಾಮೆ ನೀಡಿದರೆ ಅಥವಾ ಉಚ್ಚಾಟನೆ ಮಾಡಿದರೆ ಗರಿಷ್ಟ ಒಂದು ತಿಂಗಳವರೆಗೆ ಆ ಮನೆಯಲ್ಲಿ ಉಳಿದುಕೊಳ್ಳಬಹುದು. ಒಂದು ವೇಳೆ ಸಂಸತ್ ಸದಸ್ಯರು ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬ ಸದಸ್ಯರು 6 ತಿಂಗಳ ಕಾಲ ಆ ಮನೆಯಲ್ಲಿ ಉಳಿದುಕೊಳ್ಳಬಹುದು.

ಇತರೆ:ಸೋಫಾ ಕವರ್, ಕರ್ಟನ್ ಗಳನ್ನು ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಅದಕ್ಕೆ ತಗಲುವ ವೆಚ್ಚ, ವರ್ಷಕ್ಕೆ 60 ಸಾವಿರ ರೂ. ಮೌಲ್ಯದ ಪೀಠೋಪಕರಣ ಖರೀದಿ ಮಾಡಬಹುದು.

ದೂರವಾಣಿ:
ಮೂರು ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತದೆ. ಒಂದು ದೂರವಾಣಿ ಸಂಖ್ಯೆ ಸಂಸದರ ನಿವಾಸ ಅಥವಾ ದೆಹಲಿಯಲ್ಲಿರುವ ಕಚೇರಿಯಲ್ಲಿ ಇನ್‍ಸ್ಟಾಲ್ ಮಾಡಬೇಕು. ಎರಡನೇಯದು ತನ್ನ ಕ್ಷೇತ್ರ ಅಥವಾ ರಾಜ್ಯದಲ್ಲಿರುವ ನಿವಾಸದಲ್ಲಿ ಇರಬೇಕು, ಮೂರನೇ ಸಂಖ್ಯೆಯನ್ನು ಎಲ್ಲಿ ಹಾಕಬೇಕು ಎನ್ನುವುದನ್ನು ಸಂಸದರ ವಿವೇಚನೆಗೆ ಬಿಡಲಾಗಿದೆ.

# 50 ಸಾವಿರ ಸ್ಥಳೀಯ ಕರೆಗಳು ವರ್ಷದಲ್ಲಿ ಉಚಿತವಾಗಿ ಸಿಗಲಿದೆ. ಮೂರು ದೂರವಾಣಿಗಳಿಂದ ವರ್ಷಕ್ಕೆ 1.50 ಲಕ್ಷ ಸ್ಥಳೀಯ ಕರೆಗಳು ಮಾಡಬಹುದಾಗಿದೆ.

#ಪ್ರತಿಯೊಬ್ಬ ಸಂಸದನಿಗೆ ಎಂಟಿಎನ್‍ಎಲ್ ಮೊಬೈಲ್ ಸಂಪರ್ಕ ನೀಡಲಾಗುತ್ತದೆ. ಇದರ ಜೊತೆ ಬಿಎಸ್‍ಎನ್‍ಎಲ್ ಅಥವಾ ಖಾಸಗಿ ಟೆಲಿಕಾಂ ಕಂಪೆನಿಗಳ ಮೊಬೈಲ್ ಸಂಪರ್ಕ ಸಿಗುತ್ತದೆ. ಈ ಮೊಬೈಲ್ ಮತ್ತು ಮೂರು ದೂರವಾಣಿಗಳ ಮೂಲಕ ವರ್ಷಕ್ಕೆ 1.50 ಲಕ್ಷ ಕರೆಗಳನ್ನು ಮಾಡಬಹುದು.

ವಿದ್ಯುತ್: 50 ಸಾವಿರ ಯೂನಿಟ್ ವಿದ್ಯುತ್ ವಾರ್ಷಿಕವಾಗಿ ಬಳಸಬಹುದು.

ವೈದ್ಯಕೀಯ: ಪ್ರಸ್ತುತ ನಾಗರಿಕ ಸೇವೆಯಲ್ಲಿರುವ ಕ್ಲಾಸ್ -1 ಅಧಿಕಾರಿಗಳಿಗೆ ಸಿಗುವ ಎಲ್ಲ ವೈದ್ಯಕೀಯ ಭತ್ಯೆಗಳು ಸಂಸದರಿಗೆ ಸಿಗುತ್ತದೆ.

ಆದಾಯ ತೆರಿಗೆ: ಪ್ರಸ್ತುತ ಸರ್ಕಾರ ನೀಡುವ ಸಂಬಳ, ದಿನ ಭತ್ಯೆ, ಕ್ಷೇತ್ರ ಭತ್ಯೆಗಳಿಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.

ಇತರೆ ಲಾಭ: ಸಂಬಳ ಮತ್ತು ಭತ್ಯೆ ಹೊರತು ಪಡಿಸಿ ಸದಸ್ಯನಿಗೆ ಕಂಪ್ಯೂರ್ ಖರೀದಿಗೆ ಹಣ ಸಿಗುತ್ತದೆ. ಗರಿಷ್ಟ 1.50 ಲಕ್ಷ ರೂ. ಒಳಗಿನ ಡೆಸ್ಕ್ ಟಾಪ್, ಲ್ಯಾಪ್‍ಟಾಪ್, ಪ್ರಿಂಟರ್, ಸ್ಕ್ಯಾನರ್ ಖರೀದಿ ಮಾಡಬಹುದು.

ಯೋಗಿ ಶಿಫಾರಸ್ಸಿನಲ್ಲಿ ಏನಿತ್ತು?
ಪ್ರಸ್ತುತ ಉತ್ತರಪ್ರದೇಶದ ಸಿಎಂ ಆಗಿರುವ, ಬಿಜೆಪಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ ನೇತೃತ್ವದ ಸಂಸದರ ವೇತನ ಮತ್ತು ಭತ್ಯೆಗಳ ಜಂಟಿ ಸಮಿತಿ ಈಗ ತಿಂಗಳಿಗೆ 50 ಸಾವಿರ ರೂ. ಇರುವ ಮೂಲ ವೇತನವನ್ನು 1 ಲಕ್ಷಕ್ಕೆ ರೂ.ಗಳಿಗೆ ಏರಿಸಬೇಕೆಂದು 2016ರಲ್ಲಿ ಶಿಫಾರಸು ಮಾಡಿತ್ತು.

ಸಂಸದರ ಕ್ಷೇತ್ರ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗೆ. ಸಹಾಯಕರು ಮತ್ತು ಕಚೇರಿ ಭತ್ಯೆಯು 45 ಸಾವಿರ ರೂ.ನಿಂದ 90 ಸಾವಿರ ರೂ.ಗಳಿಗೆ ಹೆಚ್ಚಳ ಮಾಡುಬೇಕು. ಮಾಜಿ ಸಂಸದರ ಮಾಸಿಕ ಪಿಂಚಣಿ 20 ಸಾವಿರ ರೂ. ನಿಂದ 35 ಸಾವಿರ ರೂ.ಗಳಿಗೆ ಏರಿಸುವಂತೆ ಸಮಿತಿ ಶಿಫಾರಸು ಮಾಡಿತ್ತು.

 

TAGGED:bjpcongresslok sabhaparliamentrajya sabhasalaryಭತ್ಯೆಮೋದಿಯೋಗಿ ಆದಿತ್ಯನಾಥ್ರಾಜ್ಯಸಭೆಲೋಕಸಭೆಸಂಬಳಸಂಸದರ ಸಂಬಳ
Share This Article
Facebook Whatsapp Whatsapp Telegram

Cinema Updates

Sydney Sweeney
ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!
12 hours ago
Darshan
ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್
14 hours ago
sanjana anand
ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನತ್ತ ಸಂಜನಾ ಆನಂದ್
15 hours ago
dhruva sarja sudeep
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸುದೀಪ್?
15 hours ago

You Might Also Like

kabini dam
Districts

ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

Public TV
By Public TV
35 minutes ago
Nelamangala KKRTC Car Accident
Bengaluru City

Nelamangala | ಕೆಕೆಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಓರ್ವ ಸಾವು

Public TV
By Public TV
37 minutes ago
Mangaluru 3
Dakshina Kannada

ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

Public TV
By Public TV
40 minutes ago
Nikhil kumaraswamy dk shivakumar
Bengaluru City

ಸಿಎಂಗೆ ಮುಡಾ ಟ್ರ್ಯಾಪ್‌, ಪರಮೇಶ್ವರ್‌ಗೆ ಚಿನ್ನದ‌ ಟ್ರ್ಯಾಪ್‌, ನಿಮ್ಮ ಹಿಟ್‌ಲಿಸ್ಟ್‌ನಲ್ಲಿ ಇನ್ಯಾರಿದ್ದಾರೆ: ಡಿಕೆಶಿಗೆ ನಿಖಿಲ್‌ ಪ್ರಶ್ನೆ

Public TV
By Public TV
48 minutes ago
Bengaluru Amruthahalli Spa Attack Kavya And Nisha
Bengaluru City

ಅಮೃತಹಳ್ಳಿ ಸ್ಪಾದಲ್ಲಿ ಲೇಡಿ ಗ್ಯಾಂಗ್‌ನಿಂದ ಅಟ್ಯಾಕ್ – ಬಂಧಿತ ಆರೋಪಿ ಕಾವ್ಯಳಿಗಿದೆ ರೌಡಿಸಂ ಲಿಂಕ್

Public TV
By Public TV
1 hour ago
Submarines
Latest

ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?