Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಮನುಷ್ಯನ ಮೆದುಳಿನಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ಅದು ಹೇಗೆ ಹೊರಹಾಕುತ್ತದೆ? 

Public TV
Last updated: October 16, 2024 2:54 pm
Public TV
Share
4 Min Read
How does the brain cleans out waste The study takes a peek inside
SHARE

ಬೆಳಕಿಗಿಂತ ವೇಗವಾಗಿ ಕಾರ್ಯನಿರ್ವಹಿಸುವುದು ಮೆದುಳು..! ಇಷ್ಟೆಲ್ಲ ವೇಗವಾಗಿ ಕಾರ್ಯ ನಿರ್ವಹಿಸಲು ಮೆದುಳು ಅಪಾರವಾದ ಪ್ರೋಟಿನ್‌ನ್ನು ಬಳಸಿಕೊಳ್ಳುತ್ತದೆ. ಹೌದು! ಹಾಗೇ ಬಳಕೆ ಮಾಡಿದ ಪ್ರೋಟಿನ್‌ನ್ನು ತ್ಯಾಜ್ಯವಾದ ಬಳಿಕ ಮೆದುಳು ತನ್ನದೇ ಆದ ವಿಶೇಷ ವ್ಯವಸ್ಥೆಯ ಮೂಲಕ ಮೆದುಳಿನಿಂದ ಹೊರಹಾಕುತ್ತದೆ ಎಂಬುದನ್ನು ವಿಜ್ಞಾನಿಗಳು ಸಂಶೋಧನೆ ಮೂಲಕ ಪತ್ತೆ ಹಚ್ಚಿದ್ದಾರೆ.  

ಮೆದುಳಿನ ಜೀವಕೋಶಗಳು ಬಹಳಷ್ಟು ಪೋಷಕಾಂಶಗಳನ್ನು ಬಳಸುತ್ತವೆ. ಹಾಗೇ ಅವು ಬಹಳಷ್ಟು ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತವೆ. ಸೆಲ್ಯುಲಾರ್ ಕಸವನ್ನು ಹೊರಹಾಕಲು ಮೆದುಳು ವಿಶೇಷ ಕೊಳಾಯಿಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ದೀರ್ಘಕಾಲದ ಅಧ್ಯಯನದ ಬಳಿಕ ಕಂಡುಕೊಂಡಿದ್ದಾರೆ. ಮೆದುಳು ಸಣ್ಣ ತ್ಯಾಜ್ಯ-ತೆರವು ಚಾನಲ್‌ಗಳ ಜಾಲವನ್ನು ಹೊಂದಿದೆ. ಈ ಚಾನಲ್‌ಗಳ ಮೂಲಕ ಮೆದುಳು ತ್ಯಾಜ್ಯವನ್ನು ಹೊರಹಾಕುತ್ತದೆ.  

ಇಲಿಗಳ ಮೆದುಳಿನಲ್ಲಿ ಈ ತ್ಯಾಜ್ಯ ಹೊರಹಾಕುವ ಜಾಲವನ್ನು ವಿಜ್ಞಾನಿಗಳು ಮೊದಲು ಪತ್ತೆ ಮಾಡಿದ್ದರು. ಇಲಿಗಳಲ್ಲಿ ಈ ಕ್ರಿಯೆ ಜರುಗುವುದನ್ನು ಬಹಳ ಸುಲಭವಾಗಿ ಪತ್ತೆ ಮಾಡಬಹುದು. ಅಲ್ಲದೇ ಸ್ಕ್ಯಾನಿಂಗ್‌ ಮೂಲಕ ಇದನ್ನು ನೋಡಬಹುದಾಗಿದೆ. ಈಗ ರೋಚೆಸ್ಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಅಂತಿಮವಾಗಿ ಮನುಷ್ಯರ ಜೀವಂತ ಮೆದುಳಿನಲ್ಲಿರುವ ಸಣ್ಣ ತ್ಯಾಜ್ಯ-ತೆರವು ಚಾನಲ್‌ಗಳ ಜಾಲವನ್ನು ಗುರುತಿಸಿದ್ದಾರೆ. ಮನುಷ್ಯರ ಮೆದುಳಿನಲ್ಲಿ ಅಷ್ಟು ಸುಲಭವಾಗಿ ಈ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಈಗಿನ ತಂತ್ರಜ್ಞಾನಗಳು ಸಾಲುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಈ ಬಗ್ಗೆ ಅಧ್ಯಯನ ವರದಿಯು ಜರ್ನಲ್ ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಮ್ಯಾಗಝಿನ್‌ನಲ್ಲಿ ಪ್ರಕಟವಾಗಿದೆ.

How does the brain cleans out waste The study takes a peek inside 3

‌ಮೆದುಳು ನಿದ್ರೆಯ ಸಮಯದಲ್ಲಿ ಸಕ್ರಿಯವಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅದು ಮೆದುಳನ್ನು ಆಳವಾಗಿ ಕ್ಲೀನ್ ಮಾಡುವ ಸಮಯವಾಗಿದೆ. ಇದರಿಂದಾಗಿ ಮನುಷ್ಯನಿಗೆ ಒಳ್ಳೆಯ ನಿದ್ರೆ ಅವಶ್ಯಕವಾಗಿರುತ್ತದೆ. ಮನುಷ್ಯನಿಗೆ ನಿದ್ರೆ ಸರಿಯಾಗದೇ, ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗದೆ ತ್ಯಾಜ್ಯವನ್ನು ಹೊರಹಾಕಲು ಸಾಧ್ಯವಾಗದೇ ಇದ್ದರೆ ಬುದ್ಧಿಮಾಂದ್ಯತೆ ಹಾಗೂ ಆಲ್ಝೈಮರ್ನ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. 

ಹಾಗಾದರೆ ಮೆದುಳು ತನ್ನನ್ನು ಹೇಗೆ ಶುದ್ಧೀಕರಿಸುತ್ತದೆ?

ವಿಜ್ಞಾನಿಗಳು ಮೆದುಳಿನಲ್ಲಿ ʻಗ್ಲಿಂಫಾಟಿಕ್ ಸಿಸ್ಟಮ್ʼ ಎಂದು ಕರೆಯಲ್ಪಡುವ ಜಾಲವನ್ನು ಪತ್ತೆ ಮಾಡಿದ್ದಾರೆ. ಈ ಜಾಲವು ಸೆರೆಬ್ರೊಸ್ಪೈನಲ್ ಎಂಬ ದ್ರವವವನ್ನು ಮೆದುಳಿನ ರಕ್ತನಾಳಗಳ ಸುತ್ತಲಿನ ಚಾನಲ್‌ಗಳ ಅಂಗಾಂಶಕ್ಕೆ ಕಳಿಸಲು ಮತ್ತು ಮೆದುಳಿನಿಂದ ನಿರ್ಗಮಿಸುವವರೆಗೆ ತ್ಯಾಜ್ಯವನ್ನು ಚಲಿಸಲು ಬಳಸುತ್ತದೆ. ಈ ಕಾರ್ಯ ಪ್ರಾಣಿಗಳು ಹಾಗೂ ಮನುಷ್ಯರು ಮಲಗಿರುವ ಸಮಯದಲ್ಲಿ ವೇಗವಾಗಿ ನಡೆಯುತ್ತದೆ. 

ಮೆದುಳಿನ ಈ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ. ಯಾಕೆಂದರೆ ಜನರಲ್ಲಿ ಅಂತಹ ವ್ಯವಸ್ಥೆಯನ್ನು ಕಂಡುಹಿಡಿಯುವುದು ಕಷ್ಟ. ನಿಯಮಿತ ಎಂಆರ್‌ಐ ಸ್ಕ್ಯಾನ್‌ಗಳು ಕೆಲವು ದ್ರವ ತುಂಬಿದ ಚಾನಲ್‌ಗಳನ್ನು ಗುರುತಿಸಲಷ್ಟೇ ಶಕ್ತವಾಗಿವೆ. ಅವುಗಳ ಕಾರ್ಯವನ್ನು ಪತ್ತೆ ಮಾಡಲು ಇದರಿಂದ ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. 

How does the brain cleans out waste The study takes a peek inside 2

ಇಲ್ಲಿಯವರೆಗೂ ಅಧ್ಯಯನ ಮಾಡಿರುವ ಮೆದುಳು ಆರೋಗ್ಯವಂತರದ್ದಲ್ಲ. ಮೆದುಳಿನ ಶಸ್ತ್ರಚಿಕಿತ್ಸೆಗೆ ಬಂದವರನ್ನು ಅಧ್ಯಯನ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟೀಕರಣಕ್ಕೆ ಆರೋಗ್ಯವಂತ ಜನರ ಮೆದುಳಿನ ಅಧ್ಯಯನ ಅಗತ್ಯ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮೆದುಳಿನ ಭಾಗಗಳು ಯಾವುವು? 

ಮೆದುಳು ಪ್ರಮುಖವಾಗಿ ಮೇಲ್ಮೆದುಳು, ಕಿರುಮೆದುಳು ಮತ್ತು ಮೆದುಳಿನ ಕಾಂಡವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಭಾಗವನ್ನು ಮೇಲ್ಮೆದುಳು ಆಕ್ರಮಿಸಿರುತ್ತದೆ. ಇದು ನಿಯಂತ್ರಣದ ಕೇಂದ್ರ ಬಿಂದುವಾಗಿದೆ ಇದು ಎರಡು ಗೋಳಾರ್ಧವಾಗಿದ್ದು, ಆಳವಾದ ಸಂದಿನಿಂದ ಬೇರ್ಪಟ್ಟಿರುತ್ತದೆ. ಎರಡೂ ಅರ್ಧಭಾಗಗಳು ಕಾರ್ಪಸ್ ಕೊಲೊಸಮ್ ಎಂಬ ಬಿಳಿ ನಾರಿನಂತಹ ವಸ್ತುವಿನಿಂದ ಸಂಪರ್ಕ ಹೊಂದಿರುತ್ತವೆ. ಮೃದು ರಚನೆಗಳನ್ನು ಹೊಂದಿರುವ ಈ ಎರಡೂ ಅರ್ಧಭಾಗಗಳು ಒಂದೇ ಗಾತ್ರ ಮತ್ತು ಆಕಾರವನ್ನು ಹೊಂದಿರುತ್ತವೆ. ಈ ಗೋಳಾರ್ಧಗಳು ಅನೇಕ ಸಂಕೀರ್ಣ ಮಡಿಕೆಗಳು ಮತ್ತು ಆಳವಾದ ಕೊರಕಲುಗಳನ್ನು ಹೊಂದಿವೆ.

ಮೆದುಳು ದೇಹದಲ್ಲಿ ಅತ್ಯಂತ ಜಟಿಲ ರಚನೆ!

ಮಾನವನ ಮೆದುಳು ದೇಹದಲ್ಲಿ ಅತ್ಯಂತ ಜಟಿಲ ರಚನೆಯಾಗಿದ್ದು, ಅದರ ಸಂಕೀರ್ಣ ಬೆಳವಣಿಗೆಯು ಮನುಷ್ಯನನ್ನು ವಿಶ್ವದ ಅತ್ಯುನ್ನತ ಸ್ಥಾನಕ್ಕೆ ಏರಲು ಅನುವು ಮಾಡಿಕೊಟ್ಟಿದೆ. ಇದು ಅಸಂಖ್ಯಾತ ನರ ಕೋಶಗಳು ಮತ್ತು ನರಜಾಲಗಳನ್ನು ಒಳಗೊಂಡಿದೆ. ಇದು ಸುಮಾರು 1300 ಗ್ರಾಂ ತೂಕವಿದ್ದು, ವ್ಯಕ್ತಿಯ ಮಾನಸಿಕ ಸಾಮರ್ಥ್ಯಕ್ಕೂ ಅದರ ತೂಕಕ್ಕೂ ಯಾವುದೇ ಸಂಬಂಧವಿರುವುದಿಲ್ಲ.

ಮೆದುಳಿನ ತೂಕ ನಮ್ಮ ದೇಹದ ಒಟ್ಟು ತೂಕದ ಕೇವಲ 1/50 ರಷ್ಟಿದ್ದರೂ ಸಹ ಪ್ರತಿ ಬಡಿತದಲ್ಲಿ ಹೃದಯದಿಂದ ಪಂಪ್ ಮಾಡಲಾದ ರಕ್ತದ 1/5 ರಷ್ಟು ರಕ್ತವು ಇದಕ್ಕೆ ಅತ್ಯವಶ್ಯಕ. ಆಮ್ಲಜನಕ ಮತ್ತು ಗ್ಲೂಕೋಸ್ ಅವಶ್ಯಕತೆ ತುಂಬಾ ಹೆಚ್ಚಾಗಿ ಬೇಕಾಗಿದ್ದು, ಈ ಪ್ರಮುಖ ವಸ್ತುಗಳ ನಿರಂತರ ಪೂರೈಕೆ ಮೆದುಳಿನ ಚಟುವಟಿಕೆಗೆ ಇರಲೇ ಬೇಕು. ಇವುಗಳ ಯಾವುದೇ ಕೊರತೆಯು ಜೀವಕೋಶಗಳ ಸಾವಿಗೆ ಕಾರಣವಾಗುತ್ತದೆ. ಇಷ್ಟೇ ಅಲ್ಲದೇ ಪ್ರಜ್ಞಾಹೀನತೆ ಮತ್ತು ದೇಹದ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಮೆದುಳಿಗೆ ನಿರಂತರ ರಕ್ತ ಪೂರೈಕೆಯನ್ನು ಕಾಪಾಡಿಕೊಳ್ಳಲು ಪ್ರಕೃತಿಯೇ ಸಾಕಷ್ಟು ಸುವ್ಯವಸ್ಥೆಯನ್ನು ಮಾಡಿದೆ.

How does the brain cleans out waste The study takes a peek inside 1 

ಕಣ್ಣುಗಳು, ಕಿವಿಗಳು, ನಾಲಿಗೆ, ಮೂಗು ಮತ್ತು ಚರ್ಮದಿಂದ ವಿವಿಧ ಮಾಹಿತಿಗಳು ಮೆದುಳನ್ನು ತಲುಪುತ್ತವೆ ಮತ್ತು ಮೆದುಳು ಅವುಗಳನ್ನು ಅರ್ಥೈಸುತ್ತದೆ. ನಂತರ ದೃಷ್ಟಿ, ಶಬ್ದ, ರುಚಿ, ವಾಸನೆ ಅಥವಾ ಸ್ಪರ್ಶ, ನೋವು ಅಥವಾ ತಾಪಮಾನದ ಸಂವೇದನೆ ಎಂದು ಪ್ರತ್ಯೇಕವಾಗಿ ನಮ್ಮ ಅನುಭವಕ್ಕೆ ಬರುತ್ತದೆ.

ಮೆದುಳಿನ ಆರೋಗ್ಯಕ್ಕೆ ಸಮಸ್ಯೆ ಕೊಡುವ ಅಭ್ಯಾಸಗಳು ಯಾವುವು? 

​ಸಾಕಷ್ಟು ನಿದ್ರೆ ಮಾಡದಿರುವುದು​

ನಮ್ಮ ಒತ್ತಡದ ಜೀವನದಲ್ಲಿ ನಿದ್ರೆಯನ್ನು ಕಡೆಗಣಿಸುತ್ತೇವೆ. ನಿದ್ರೆಯ ಅಭಾವವು ಅರಿವಿನ ಸಾಮರ್ಥ್ಯಗಳನ್ನು ದುರ್ಬಲಗೊಳಿಸುತ್ತದೆ. ನೆನಪು, ತಾರ್ಕಿಕತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳ ಮೇಲೆ ಪರಿಣಾಮ ಬೀರುತ್ತದೆ.

ಒಂದು ಗಂಟೆ ಮುಂಚಿತವಾಗಿ ಮಲಗುವುದು, ಮಲಗುವ ಒಂದು ಗಂಟೆ ಮೊದಲು ಆಲ್ಕೋಹಾಲ್ ಮತ್ತು ಕೆಫೀನ್‌ನಿಂದ ದೂರವಿರುವುದು ಮತ್ತು ಮೊಬೈಲ್‌, ಕಂಪ್ಯೂಟರ್‌ ಬೆಳಕನ್ನು ಒಡ್ಡಿಕೊಳ್ಳುವುದನ್ನು ಕಡಿಮೆ ಮಾಡುವುದು ಇವೆಲ್ಲವೂ ಮೆದುಳಿನ ರಕ್ಷಣಾತ್ಮಕ ತಡೆಗೋಡೆಗಳಾಗಿ ಕಾರ್ಯನಿರ್ವಹಿಸುತ್ತವೆ. 

ದೀರ್ಘಕಾಲ ಕುಳಿತುಕೊಳ್ಳುವುದು​

UCLA ಹೆಲ್ತ್ ಅಧ್ಯಯನದ ಪ್ರಕಾರ ದೀರ್ಘಕಾಲ ಕುಳಿತುಕೊಳ್ಳುವುದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಕನಿಷ್ಠ 150 ನಿಮಿಷಗಳ ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವ ವ್ಯಾಯಾಮವನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು.

ಅಸಮರ್ಪಕ ನೀರಿನ ಸೇವನೆ

ನೀರು ಮೆದುಳಿನ ಪ್ರಮುಖ ಅಂಶವಾಗಿದೆ. ಆದರೆ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಇದನ್ನು ಮರೆತುಬಿಡುತ್ತೇವೆ. ನಿರ್ಜಲೀಕರಣವು ಪ್ರತಿಕ್ರಿಯೆಯ ಸಮಯ, ಸ್ಮರಣೆ ಮತ್ತು ಗಮನದ ಮೇಲೆ ಪರಿಣಾಮ ಬೀರಬಹುದು.

ಉಪಹಾರವನ್ನು ಬಿಟ್ಟುಬಿಡುವುದು​

ಬೆಳಗಿನ ಉಪಾಹಾರವು ದಿನದ ಅತ್ಯಂತ ಮಹತ್ವದ ಎಂದು ಪರಿಗಣಿಸಲ್ಪಟ್ಟಿದೆ. ಇದು ಮೆದುಳಿಗೆ ಅಗತ್ಯವಾದ ಪ್ರಮುಖ ಶಕ್ತಿಯನ್ನು ನೀಡುತ್ತದೆ. ಉಪಾಹಾರವನ್ನು ಬಿಟ್ಟುಬಿಡುವುದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

TAGGED:BrainhealthProtinscienceUniversity of Rochesterಆರೋಗ್ಯಮೆದುಳು
Share This Article
Facebook Whatsapp Whatsapp Telegram

Cinema News

madenuru manu actor
ಮಡೆನೂರು ಮನು ಜೊತೆ ಕಾಂಪ್ರಮೈಸ್ – ಕೇಸ್ ಹಿಂಪಡೆದ ಸಂತ್ರಸ್ತೆ
Cinema Latest Main Post
Jothe Neeniralu Serial
ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ
Cinema Latest Top Stories TV Shows
Karavali movie 1
‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ
Cinema Latest Sandalwood Top Stories
Rajath Dharmasthala
ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್
Cinema Dakshina Kannada Latest Main Post South cinema
Dhanush Mrunal Thakur
ಧನುಷ್-ಮೃಣಾಲ್ ವಯಸ್ಸಿನ ಅಂತರವೆಷ್ಟು ಗೊತ್ತಾ?
Cinema Latest Top Stories

You Might Also Like

KR Market
Bengaluru City

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರು

Public TV
By Public TV
15 minutes ago
modi putin
Latest

ಟ್ರಂಪ್‌ ಸುಂಕ ಶಾಕ್‌ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್‌ ಭೇಟಿ

Public TV
By Public TV
29 minutes ago
Uttarakhand disaster
Latest

ಮೇಘಸ್ಫೋಟವಲ್ಲ ಉತ್ತರಾಖಂಡದಲ್ಲಿ ಸಂಭವಿಸಿದ್ದು ಹಿಮಕೊಳ ಸ್ಫೋಟ!

Public TV
By Public TV
39 minutes ago
Dr K Sudhakar
Chikkaballapur

ನನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾರೆಂದು ಗೊತ್ತಿಲ್ಲ: ಡಾ.ಸುಧಾಕರ್ ರಿಯಾಕ್ಷನ್

Public TV
By Public TV
49 minutes ago
Ghana Helicopter Crash
Crime

ಘಾನಾದಲ್ಲಿ ಹೆಲಿಕಾಪ್ಟರ್ ಪತನ – ಇಬ್ಬರು ಸಚಿವರು ಸೇರಿ 8 ಮಂದಿ ಸಾವು

Public TV
By Public TV
57 minutes ago
Uttarkashi Flood survivor
Latest

ಅಪ್ಪಾ.. ನಾವು ಬದುಕುಳಿಯಲ್ಲ, ಇಲ್ಲಿ ನೀರು ತುಂಬಿದೆ: ಉತ್ತರಾಖಂಡ ಪ್ರವಾಹದಲ್ಲಿ ಮಗನ ಕೊನೆ ಮಾತು ನೆನೆದು ತಂದೆ ಕಣ್ಣೀರು

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?