Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಮೈಸೂರು ರಾಜ್ಯ ʻಕರ್ನಾಟಕʼವಾಗಿದ್ದು ಹೇಗೆ? – ನಾಮಕರಣದ ಕಥೆ ನಿಮಗೆ ಗೊತ್ತೇ?

Public TV
Last updated: November 1, 2024 7:35 am
Public TV
Share
2 Min Read
kannada rajyotsava 02
SHARE

ಪ್ರತಿ ವರ್ಷ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದರಂತೆ ಕರ್ನಾಟಕದ ಇತಿಹಾಸ ತಿಳಿಯುವುದೂ ಅಷ್ಟೇ ಮುಖ್ಯವಾಗಿದೆ.

Kannada Flag 7

ರಾಜ್ಯ ಉದಯಿಸಿ 17 ವರ್ಷಗಳವರೆಗೂ ʻಮೈಸೂರುʼ ಎಂಬ ಹೆಸರೇ ಇತ್ತು. ಬಳಿಕ ಮೈಸೂರು ರಾಜ್ಯಕ್ಕೆ 1973ರ ನವೆಂಬರ್ 1ರಂದು ʻಕರ್ನಾಟಕ’ ಎಂದು ನಾಮಕರಣ ಮಾಡಲಾಯಿತು. ʻಮೈಸೂರು’ ‘ಬದಲಾಗಿ ʻಕರ್ನಾಟಕʼ ಎಂದು ಮರುನಾಮಕರಣ ಮಾಡಿದ್ದೇಕೆ? ರಾಜ್ಯದ ಮೂಲ ಹೆಸರು ಬದಲಿಸುವ ಪ್ರಯತ್ನಗಳು ಏಕೆ ನಡೆದವು? ಇದೊಂದು ಚೆಂದದ ಕುತೂಹಲ. ಇದರ ಸಂಕ್ಷಿಪ್ತ ಹಿನ್ನೆಲೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ….

belagavi Suvarna Soudha 1

ಚಳವಳಿಗಾರರೂ ಆಗಿದ್ದ ಅಂದಾನಪ್ಪ ದೊಡ್ಡಮೇಟಿ ಅವರು ವಿಧಾನಸಭಾ ಸದಸ್ಯರೆಲ್ಲರೂ ʻಕರ್ನಾಟಕ’ ಎಂಬ ಹೆಸರು ಕುರಿತು ಚರ್ಚಿಸಲೆಂದೇ ಕೃತಿಯೊಂದನ್ನು ರಚಿಸಿ ಹಂಚಿದರು. 1957ರ ಸೆ.30ರಂದು ಈ ಕುರಿತು ಸದನದಲ್ಲಿ ಚರ್ಚೆಯಾಯಿತು. ಪ್ರತಿಪಕ್ಷದ ಉಪನಾಯಕರಾಗಿದ್ದ ಎಂ. ರಾಮಪ್ಪನವರು ʻಕರ್ನಾಟಕ’ ನಾಮಕರಣಗೊಳ್ಳಬೇಕೆಂದು ಎರಡು ಬಾರಿ ಗೊತ್ತುವಳಿ ಮಂಡಿಸಿದ್ದರೂ ಅನಿರ್ದಿಷ್ಟಕಾಲ ಮುಂದೂಡಲ್ಪಟ್ಟಿತು. ಶಾಸಕರಾದ ಬಸವನಗೌಡ ಮತ್ತು ಆ‌ರ್.ಎಸ್ ಪಾಟೀಲ್ ಅವರೂ ಸದನದಲ್ಲಿ ಪ್ರಸ್ತಾಪಿಸಿದ್ದರು. ಅಂದಾನಪ್ಪನವರು, ʻಕರ್ನಾಟಕʼ ನಾಮಕರಣಗೊಳ್ಳದೇ ತಾವು ವಿರಮಿಸುವುದಿಲ್ಲ, ಎನ್ನುವ ಮಟ್ಟಿಗೆ ಮತ್ತೆಮತ್ತೆ ನಾಮಕರಣದ ವಿಚಾರವನ್ನು ಸದನದಲ್ಲಿ ಮುನ್ನೆಲೆಗೆ ತಂದರು. ಇದನ್ನೂ ಓದಿ: ಕರ್ನಾಟಕ ಏಕೀಕರಣದ ಏಕೈಕ ಹುತಾತ್ಮ ಯಾರೆಂದು ಗೊತ್ತೆ?

kannada rajyotsava 01

ನಂತರದಲ್ಲಿ ಜನರಿಂದ ಒತ್ತಡ ತೀವ್ರಗೊಂಡಾಗ ದೇವರಾಜ ಅರಸು ಅವರು ಜುಲೈ 27, 1972ರಂದು ʻಕರ್ನಾಟಕ’ ನಾಮಕರಣದ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ, ಅಂದೇ ಒಪ್ಪಿಗೆ ಪಡೆದರು. ಅದೇ ತಿಂಗಳ 31ರಂದು ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ದೊರೆಯಿತು. ವಿಧೇಯಕವು 1973ರ ಜುಲೈ 30ರಂದು ಲೋಕಸಭೆಯಲ್ಲಿ, ಆಗಸ್ಟ್ 8ರಂದು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡು, ಅ.8ರಂದು ರಾಷ್ಟ್ರಪತಿ ವಿ.ವಿ.ಗಿರಿ ಅಂಕಿತದೊಂದಿಗೆ ಮೈಸೂರು ರಾಜ್ಯ ʻಕರ್ನಾಟಕ’ ವಾಯಿತು. ನವೆಂಬರ್ 1, 1973ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 17ನೇ ರಾಜ್ಯೋತ್ಸವವೇ ಕರ್ನಾಟಕ ನಾಮಕರಣೋತ್ಸವ. ಅರಸು ಅವರು ಕಾರ್ಯಕ್ರಮ ಉದ್ಘಾಟಿಸಿ, ʻಇದು ನಾಡಿನ ಜನತೆಯ ಆಸೆ, ಆಕಾಂಕ್ಷೆಗಳ ಪ್ರತೀಕ. ಕನ್ನಡ ಭಾವಬಂಧನದ ಸಂಕೇತʼ ಎಂದು ನುಡಿದಿದ್ದರು.

Kannada Flag 5

ರಾಜ್ಯನಿರ್ಮಾಣ ದಿನಾಚರಣೆ ನಡೆದಿದ್ದೆಲ್ಲಿ?
ಕೆಂಗಲ್‌ ಹನುಮಂತರಾಯರ ಆಶಯದಂತೆ ಏಕೀಕರಣಗೊಂಡ ಕರ್ನಾಟಕವು ವಿಶಾಲ ʻಮೈಸೂರು ರಾಜ್ಯ’ ಎಂಬ ಹೆಸರಿನಿಂದ ನ.1, 1956ರಂದು ಅಸ್ತಿತ್ವಕ್ಕೆ ಬಂತು. ಅಂದು ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಹಂಪಿಯಲ್ಲಿ ಉತ್ತರ ಕರ್ನಾಟಕದ ಜನರು ʻರಾಜ್ಯ ನಿರ್ಮಾಣದ ದಿನ’ವನ್ನಾಗಿ ಆಚರಿಸಿದರು. ʻಕನ್ನಡ ಕುಲಪುರೋಹಿತ’ ಆಲೂರು ವೆಂಕಟರಾಯರು ಈ ಉತ್ಸವದ ಪೌರೋಹಿತ್ಯ ವಹಿಸಿದ್ದು ವಿಶೇಷವಾಗಿತ್ತು.

ಮೊದಲ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ:
ಏಕೀಕರಣದ ರೂವಾರಿಗಳಾದ ಎಸ್‌. ನಿಜಲಿಂಗಪ್ಪನವರು 10 ದಿನಗಳ ಮೊದಲು ವಿಶಾಲ ಮೈಸೂರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಅವಿರೋಧ ನಾಯಕರಾಗಿ ಆಯ್ಕೆಯಾದರು. ಏಕೀಕರಣದ ದಿನದಂದೇ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಗಳಾದರು. ಈವರೆಗೆ ರಾಜ್ಯದಲ್ಲಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಮೂವರು ಮುಖ್ಯಮಂತ್ರಿಗಳಲ್ಲಿ ಇವರು ಮೊದಲಿಗರು.

TAGGED:bengaluruKannada RajyotsavaKarnataka Unification Movementkengal hanumanthaiahS Nijalingappaಎಸ್. ನಿಜಲಿಂಗಪ್ಪಕನ್ನಡ ರಾಜ್ಯೋತ್ಸವಕರ್ನಾಟಕ ಏಕೀಕರಣಕರ್ನಾಟಕ ಏಕೀಕರಣ ಚಳುವಳಿಕರ್ನಾಟಕ ನಾಮಕರಣಕೆಂಗಲ್ ಹನುಮಂತಯ್ಯಬೆಂಗಳೂರುಮೈಸೂರು ರಾಜ್ಯ
Share This Article
Facebook Whatsapp Whatsapp Telegram

Cinema Updates

Sydney Sweeney
ಸ್ನಾನ ಮಾಡಿದ ನೀರನ್ನು ಸೋಪ್ ಮಾಡಿ 8 ಡಾಲರ್‌ಗೆ ಮಾರಾಟ ಮಾಡ್ತಿದ್ದಾಳೆ ಸಿಡ್ನಿ ಸ್ವೀನಿ!
12 hours ago
Darshan
ಕೊನೆಗೂ `ದಾಸ’ನಿಗೆ ವಿದೇಶಕ್ಕೆ ತೆರಳಲು ಅನುಮತಿ ಕೊಟ್ಟ ಕೋರ್ಟ್
13 hours ago
sanjana anand
ರಶ್ಮಿಕಾ, ಶ್ರೀಲೀಲಾ ಬಳಿಕ ತೆಲುಗಿನತ್ತ ಸಂಜನಾ ಆನಂದ್
14 hours ago
dhruva sarja sudeep
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸುದೀಪ್?
15 hours ago

You Might Also Like

kabini dam
Districts

ಮೈಸೂರು | ಹತ್ತೇ ದಿನಗಳಲ್ಲಿ ಕಬಿನಿ ಜಲಾಶಯ ಬಹುತೇಕ ಭರ್ತಿ

Public TV
By Public TV
4 minutes ago
Nelamangala KKRTC Car Accident
Bengaluru City

Nelamangala | ಕೆಕೆಆರ್‌ಟಿಸಿ ಬಸ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ – ಓರ್ವ ಸಾವು

Public TV
By Public TV
6 minutes ago
Mangaluru 3
Dakshina Kannada

ಮೊಂಟೆಪದವು ಗುಡ್ಡಕುಸಿತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ – ಪಿಡಿಓ ಇತರ ಅಧಿಕಾರಿಗಳ ವಿರುದ್ಧ ದೂರು

Public TV
By Public TV
10 minutes ago
Nikhil kumaraswamy dk shivakumar
Bengaluru City

ಸಿಎಂಗೆ ಮುಡಾ ಟ್ರ್ಯಾಪ್‌, ಪರಮೇಶ್ವರ್‌ಗೆ ಚಿನ್ನದ‌ ಟ್ರ್ಯಾಪ್‌, ನಿಮ್ಮ ಹಿಟ್‌ಲಿಸ್ಟ್‌ನಲ್ಲಿ ಇನ್ಯಾರಿದ್ದಾರೆ: ಡಿಕೆಶಿಗೆ ನಿಖಿಲ್‌ ಪ್ರಶ್ನೆ

Public TV
By Public TV
17 minutes ago
Bengaluru Amruthahalli Spa Attack Kavya And Nisha
Bengaluru City

ಅಮೃತಹಳ್ಳಿ ಸ್ಪಾದಲ್ಲಿ ಲೇಡಿ ಗ್ಯಾಂಗ್‌ನಿಂದ ಅಟ್ಯಾಕ್ – ಬಂಧಿತ ಆರೋಪಿ ಕಾವ್ಯಳಿಗಿದೆ ರೌಡಿಸಂ ಲಿಂಕ್

Public TV
By Public TV
36 minutes ago
Submarines
Latest

ಯುದ್ಧ ಹಡಗು, ಜಲಾಂತರ್ಗಾಮಿಗಳ ಸೂಕ್ಷ್ಮ ಮಾಹಿತಿಯನ್ನ ಪಾಕ್‌ಗೆ ರವಾನಿಸ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್ ಅರೆಸ್ಟ್‌!

Public TV
By Public TV
42 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?