Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?

Public TV
Last updated: August 20, 2024 6:03 pm
Public TV
Share
4 Min Read
1 3
SHARE

ಭಾರತದಲ್ಲಿ ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ಲೀನ್ ಪ್ಲಾಂಟ್ ಯೋಜನೆಗೆ (CPP) ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದೆ. ಈ ಯೋಜನೆ ರಾಷ್ಟ್ರದಾದ್ಯಂತ ಹಣ್ಣಿನ ಬೆಳೆಗಳ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಫೆಬ್ರವರಿ 2023 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಮಧ್ಯಂತರ ಬಜೆಟ್ (Interim Budget) ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ಕೃಷಿ ಸಚಿವಾಲಯ (Ministry of Agriculture) 1,765 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಇದರಲ್ಲಿ ಅರ್ಧದಷ್ಟು ಭಾಗವನ್ನು ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ ಆಫ್ ಹಾರ್ಟಿಕಲ್ಚರ್ (MIDH) ನ ಬಜೆಟ್‌ನಿಂದ ಪಡೆಯಲಾಗಿದೆ. ಈ ಯೋಜನೆಗೆ ಬೇಕಾದ ಉಳಿದ ಅರ್ಧ ಹಣವನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ (ADB) ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. 

CPP ಯೋಜನೆ ಎಂದರೇನು? 

ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಕಿಕೊಂಡ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಉತ್ತಮ ಸಸಿಗಳನ್ನು ರೈತರಿಗೆ ಒದಗಿಸಿ ಹಣ್ಣಿನ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. 

3 2

CPP ಯೋಜನೆಯ ಮುಖ್ಯ ಉದ್ದೇಶವೇನು? 

ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ಆರೋಗ್ಯವಂತ ಉತ್ತಮ ಗುಣಮಟ್ಟದ ಸಸ್ಯಗಳನ್ನು ರೈತರಿಗೆ ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. 

ಇದಕ್ಕಾಗಿ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳೇನು? 

 9 ಕ್ಲೀನ್ ಪ್ಲಾಂಟ್ ಸೆಂಟರ್‌ಗಳ (CPCs) ಅಭಿವೃದ್ಧಿ ಮಾಡುವುದು. ಇದು ರೋಗ ಸಸಿಗಳನ್ನು ರೈತರಿಗೆ ಒದಗಿಸಲು ಅನುಕೂಲವಾಗಲಿದೆ. 

 CPC ಯಿಂದ ಪಡೆದ ಮೂಲ ಸಸ್ಯಗಳನ್ನು ನರ್ಸರಿಗಳಲ್ಲಿ ಬೆಳೆಸಿ, ಹೆಚ್ಚಿನ ಸಸ್ಯಗಳ ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಲಾಗುತ್ತದೆ. 

 ಸಸಿಗಳ ಮಾರಾಟದ ಸಂಪೂರ್ಣ ಹೊಣೆಗಾರಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿ ರಚನೆ. 

CPPಯ ಅವಶ್ಯಕತೆ ಏನು?

ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುವ ದೇಶವಾಗಿದೆ. 2013-14 ರಿಂದ 2023-24ರವರೆಗೆ, ತೋಟಗಾರಿಕೆ ಬೆಳೆಗಳ ವ್ಯಾಪ್ತಿಯು 2.4 ಕೋಟಿ ಹೆಕ್ಟೇರ್‌ಗಳಿಂದ 2.86 ಕೋಟಿ ಹೆಕ್ಟೇರ್‌ಗಳಿಗೆ ಏರಿದೆ. ಉತ್ಪಾದನೆಯು 27.74 ಕೋಟಿ ಮೆಟ್ರಿಕ್ ಟನ್‌ಗಳಿಂದ (ಎಂಟಿ) 35.2 ಕೋಟಿ ಮೆಟ್ರಿಕ್‌ ಟನ್‌ಗೆ ಏರಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತವು 1.15 ಶತಕೋಟಿ ಡಾಲರ್‌ ಮೌಲ್ಯದ ತಾಜಾ ಹಣ್ಣುಗಳನ್ನು ರಫ್ತು ಮಾಡಿದೆ. ಉತ್ಪಾದನೆ ಹೆಚ್ಚಿಸುವ ಗುರಿ ಹಾಗೂ ರಫ್ತನ್ನು ಹೆಚ್ಚಿಸುವ ಉದ್ದೇಶದಿಂದ ಸಿಪಿಪಿ ಯೋಜನೆ ಬಹಳ ಪ್ರಾಮುಖ್ಯತೆ ಪಡೆದಿದೆ. 

ವಿದೇಶಗಳಿಂದ ಭಾರತ ಯಾವೆಲ್ಲ ಹಣ್ಣಿನ ಸಸಿಗಳನ್ನು ಆಮದು ಮಾಡಿಕೊಂಡಿದೆ? 

ಮೂಲಗಳ ಪ್ರಕಾರ 2018-20 ರ ನಡುವೆ, EXIM ಸಮಿತಿಯು 2018 ರಲ್ಲಿ 21.44 ಲಕ್ಷ ಸೇಬಿನ ಗಿಡಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿತು, ಇದು 2020 ರಲ್ಲಿ 49.57 ಲಕ್ಷಕ್ಕೆ ಏರಿತು. 2018 ರಲ್ಲಿ ಕೇವಲ 1,000 ಆವಕಾಡೊಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿತ್ತು.  ಇದು 2020 ರಲ್ಲಿ 26,500 ಕ್ಕೆ ಏರಿತು. ಹಾಗೆಯೇ, ಬ್ಲೂಬೆರ್ರಿ ಸಸ್ಯಗಳ ಆಮದು 2020 ರಲ್ಲಿ 4.35 ಲಕ್ಷಕ್ಕೆ ಏರಿಕೆ ಕಂಡಿದೆ. 

ಪ್ರಸ್ತುತ ಸಸ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ತೊಡಕಾಗಿದೆ, ಆಮದು ಮಾಡಿದ ಸಸ್ಯಗಳನ್ನು ಎರಡು ವರ್ಷಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತಿದೆ. CPC ಗಳು ಈ ಅವಧಿಯನ್ನು ಆರು ತಿಂಗಳ ಕಡಿತಗೊಳಿಸುತ್ತವೆ ಮತ್ತು ಭಾರತದಲ್ಲಿ ತೋಟಗಾರಿಕಾ ಬೆಳೆಗಳಿಗೆ ಆರೋಗ್ಯವಂತ ಸಸಿಗಳನ್ನು ಒದಗಿಸಲು ಇದು ಅನುಕೂಲವಾಗಲಿದೆ.

4

ಕ್ಲೀನ್ ಪ್ಲಾಂಟ್ ಪ್ರೋಗ್ರಾಂ (CPP) ನ ಪ್ರಮುಖ ಪ್ರಯೋಜನಗಳೇನು?

ರೈತರು: ಸಿಪಿಪಿ ವೈರಸ್-ಮುಕ್ತ, ಉತ್ತಮ ಗುಣಮಟ್ಟದ ಸಸಿಗಳನ್ನು ಒದಗಿಸುತ್ತದೆ. ಇದು ಹೆಚ್ಚಿನ ಇಳುವರಿ ಮತ್ತು ಆದಾಯಕ್ಕೆ ಕಾರಣವಾಗುತ್ತದೆ. 

ನರ್ಸರಿಗಳು: ಸುವ್ಯವಸ್ಥಿತ ನರ್ಸರಿಗಳನ್ನು ಉತ್ತೇಜಿಸುವ ಮೂಲಕ, ಉತ್ತಮ ಸಸಿಗಳ ಅಭಿವೃದ್ಧಿಗೆ ಸಹಾಯವಾಗಲಿದೆ. 

ಗ್ರಾಹಕರು: ಹಣ್ಣುಗಳ ರುಚಿ, ಆಕಾರ ಮತ್ತು ಪೌಷ್ಟಿಕಾಂಶ ಹೆಚ್ಚಾಗುವುದರಿಂದ ಗ್ರಾಹಕರನ್ನು ಸೆಳೆಯಲಿದೆ. 

ರಫ್ತು: ಉತ್ತಮ ಗುಣಮಟ್ಟದ ಹಣ್ಣುಗಳ ಉತ್ಪಾದನೆ ಭಾರತವು ಪ್ರಮುಖ ಜಾಗತಿಕ ರಫ್ತುದಾರನಾಗಿ ಬೆಳೆಯಲು ಸಹಾಯಕವಾಗಲಿದೆ. ಅಂತರರಾಷ್ಟ್ರೀಯ ಹಣ್ಣಿನ ವ್ಯಾಪಾರದಲ್ಲಿ ತನ್ನ ಪಾಲನ್ನು ಈ ಯೋಜನೆ ಹೆಚ್ಚಿಸಲಿದೆ.

ಇಷ್ಟೇ ಅಲ್ಲದೇ, ಸಣ್ಣ ಹಿಡುವಳಿದಾರರನ್ನು, ರೈತ ಮಹಿಳೆಯರನ್ನು ಈ ಯೋಜನೆ ತಲುಪುವಂತೆ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ರೈತರಿಗೆ ಸೂಕ್ತ ತರಬೇತಿ ಹಾಗೂ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಅಗತ್ಯ ಕ್ರಮಕೈಗೊಳ್ಳಲಿದೆ.  

CPP ಯ ಪ್ರಮುಖ ಅಂಶಗಳು

ಕ್ಲೀನ್ ಪ್ಲಾಂಟ್ ಸೆಂಟರ್‌ಗಳು (CPC ಗಳು): ಸುಧಾರಿತ ರೋಗನಿರ್ಣಯದ ಚಿಕಿತ್ಸಕಗಳು ಮತ್ತು ಅಂಗಾಂಶ ಕೃಷಿ ಪ್ರಯೋಗಾಲಯಗಳೊಂದಿಗೆ ಸುಸಜ್ಜಿತವಾದ ಒಂಬತ್ತು ವಿಶ್ವದರ್ಜೆಯ ಅತ್ಯಾಧುನಿಕ CPC ಗಳನ್ನು ಭಾರತದಾದ್ಯಂತ ಸ್ಥಾಪಿಸಲಾಗುತ್ತದೆ. 

2 2

ಇವುಗಳಲ್ಲಿ ದ್ರಾಕ್ಷಿ (NRC, ಪುಣೆ), ಸಮಶೀತೋಷ್ಣ ಹಣ್ಣುಗಳು – ಸೇಬು, ಬಾದಾಮಿ, ವಾಲ್‌ನಟ್ಸ್ ಇತ್ಯಾದಿ (CITH, ಶ್ರೀನಗರ & ಮುಕ್ತೇಶ್ವರ), ಸಿಟ್ರಸ್ ಹಣ್ಣುಗಳು (CCRI, ನಾಗ್ಪುರ್ & CIAH, ಬಿಕಾನೇರ್), ಮಾವು / ಪೇರಲೆ / ಆವಕಾಡೊ (IIHR, ಬೆಂಗಳೂರು); ಮಾವು / ಪೇರಲೆ / ಲಿಚಿ (CISH, ಲಕ್ನೋ), ದಾಳಿಂಬೆ (NRC, ಶೋಲಾಪುರ), ಮತ್ತು ಪೂರ್ವ ಭಾರತದಲ್ಲಿ ಉಷ್ಣವಲಯದ/ಉಪ ಉಷ್ಣವಲಯದ ಹಣ್ಣಿನ ಸಸಿಗಳನ್ನು ಈ ಕೇಂದ್ರಗಳಲ್ಲಿ ಬೆಳೆಸಲಾಗುತ್ತದೆ.  

ಪ್ರಮಾಣೀಕರಣ ಮತ್ತು ಕಾನೂನು ಚೌಕಟ್ಟು: ಬೀಜಗಳ ಕಾಯಿದೆ 1966 ರ ಅಡಿಯಲ್ಲಿ ದೃಢವಾದ ಪ್ರಮಾಣೀಕರಣ ವ್ಯವಸ್ಥೆಯನ್ನು ಅಳವಡಿಸುವುದು. 

ಮೂಲಸೌಕರ್ಯಗಳ ಅಭಿವೃದ್ಧಿ: ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ನರ್ಸರಿಗಳಿಗೆ ಬೆಂಬಲವನ್ನು ಒದಗಿಸುವುದು. ಈ ಮೂಲಕ ಉತ್ತಮ ಸಸಿಗಳ ಸಂಖ್ಯೆಯನ್ನು ಹೆಚ್ಚಿಸುವುದು. 

ಈ ಕಾರ್ಯಕ್ರಮವು ಭಾರತವನ್ನು ಪ್ರಮುಖ ಜಾಗತಿಕ ಹಣ್ಣುಗಳ ರಫ್ತುದಾರನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಸಹಯೋಗದೊಂದಿಗೆ ಕಾರ್ಯಗತಗೊಳಿಸುತ್ತದೆ. CPC ಗಳು ಅಮೆರಿಕ, ಇಸ್ರೇಲ್ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳಲ್ಲಿನ ಯಶಸ್ವಿ ಯೋಜನೆಯಾಗಿದೆ. 

TAGGED:agriculturefruitsInterim BudgetMinistry of AgricultureNirmala Sitharamanunion cabinet
Share This Article
Facebook Whatsapp Whatsapp Telegram

Cinema Updates

Kamal Haasan
ಕಮಲ್ `ಕನ್ನಡ’ ವಿವಾದ – ಜೂ.20ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
1 hour ago
Kangana Ranaut to bengaluru
ಬೆಂಗಳೂರಿನ ಶಿವೋಹಂ ಶಿವ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ ರಣಾವತ್‌
2 hours ago
Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
5 hours ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
15 hours ago

You Might Also Like

Hardhik Vibhuthi 2
Latest

ವಿಮಾನ ದುರಂತ – ನಿಶ್ಚಿತಾರ್ಥ ಮುಗಿಸಿ ಹೊರಟ ಜೋಡಿಯ ದಾರುಣ ಅಂತ್ಯ

Public TV
By Public TV
22 minutes ago
Basavasagar dam
Districts

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ

Public TV
By Public TV
40 minutes ago
bike taxi
Bengaluru City

ಜೂ.16ರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬಂದ್

Public TV
By Public TV
1 hour ago
Prateek Joshi
Belgaum

ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಡಾ.ಪ್ರತೀಕ್ ಜೋಶಿ ಬೆಳಗಾವಿಯ ವಿದ್ಯಾರ್ಥಿ – ಕಣ್ಣೀರಿಟ್ಟ ಸಹಪಾಠಿಗಳು

Public TV
By Public TV
2 hours ago
Air India Ahmedabad Plane Crash Black box found on hostel rooftop
Latest

ಏರ್‌ ಇಂಡಿಯಾ ವಿಮಾನ ಪತನ: ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಬೆಂಕಿ ಬಿದ್ದರೂ ಸುಟ್ಟು ಹೋಗಿಲ್ಲ ಯಾಕೆ?

Public TV
By Public TV
2 hours ago
CAR
Districts

ಕೊಡಗು | ತೆಂಗಿನ ಮರ ಉರುಳಿಸಿ ಕಾರು ಜಖಂಗೊಳಿಸಿದ ಪುಂಡಾನೆ!

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?