ನವದೆಹಲಿ: ಸಿಬಿಐ ನಿರ್ದೇಶಕರಂತಹ ಕಾರ್ಯನಿರ್ವಾಹಕ ನೇಮಕಾತಿಗಳಲ್ಲಿ (Executive Appointments) ಭಾರತದ ಮುಖ್ಯ ನ್ಯಾಯಮೂರ್ತಿ ಯಾಕೆ ಭಾಗಿಯಾಗಬೇಕು ಎಂದು ಅಚ್ಚರಿ ವ್ಯಕ್ತಪಡಿಸಿರುವ ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar), ಅಂತಹ ನಿಯಮಗಳನ್ನು ಮರುಪರಿಶೀಲಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಭೋಪಾಲ್ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯಲ್ಲಿ ಮಾತನಾಡಿದ ಅವರು, ತಮ್ಮ ಅಭಿಪ್ರಾಯದಲ್ಲಿ, ‘ಮೂಲ ರಚನೆಯ ಸಿದ್ಧಾಂತ’ವು ಬಹಳ “ಚರ್ಚಾಸ್ಪದ ನ್ಯಾಯಶಾಸ್ತ್ರದ ಆಧಾರ”ವನ್ನು ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಬೌರ್ಬನ್ ವಿಸ್ಕಿಯ ಆಮದು ಸುಂಕ ಭಾರೀ ಇಳಿಕೆ – ಈ ವಿಸ್ಕಿಯ ವಿಶೇಷತೆ ಏನು?
ನಮ್ಮಂತಹ ದೇಶದಲ್ಲಿ ಅಥವಾ ಯಾವುದೇ ಪ್ರಜಾಪ್ರಭುತ್ವದಲ್ಲಿ, ಶಾಸನಬದ್ಧ ಕಾನೂನಿನ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿಗಳು ಸಿಬಿಐ ನಿರ್ದೇಶಕರ ಆಯ್ಕೆಯಲ್ಲಿ ಯಾಕೆ ಭಾಗವಹಿಸಬೇಕು? ಇದಕ್ಕೆ ಯಾವುದಾದರೂ ಕಾನೂನು ತಾರ್ಕಿಕತೆ ಇದೆಯೇ? ಅಂದಿನ ಕಾರ್ಯನಿರ್ವಾಹಕರು ನ್ಯಾಯಾಂಗ ತೀರ್ಪಿಗೆ ಮಣಿದ ಕಾರಣ ಶಾಸನಬದ್ಧ ಕಾನೂನು ರೂಪುಗೊಂಡಿದೆ ಎಂದು ನಾನು ಪ್ರಶಂಸಿಸಬಲ್ಲೆ. ಆದರೀಗ ಇದನ್ನು ಮರುಪರಿಶೀಲಿಸುವ ಸಮಯ ಬಂದಿದೆ. ಏಕೆಂದರೆ ಇದು ಪ್ರಜಾಪ್ರಭುತ್ವವಲ್ಲ, ಯಾವುದೇ ಕಾರ್ಯನಿರ್ವಾಹಕ ನೇಮಕಾತಿಯಲ್ಲಿ ನಾವು ಸಿಜೆಐ ಅನ್ನು ಹೇಗೆ ಒಳಗೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಂಗ ತೀರ್ಪಿನ ಮೂಲಕ ಕಾರ್ಯಾಂಗ ಆಡಳಿತ ನಡೆಸುವುದು ಈ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಇನ್ನು ಮುಂದೆ ಭರಿಸಲಾಗದ ಸಾಂವಿಧಾನಿಕ ವಿರೋಧಾಭಾಸವಾಗಿದೆ ಎಂದು ಅವರು ಹೇಳಿದ್ದಾರೆ. ಎಲ್ಲಾ ಸಂಸ್ಥೆಗಳು ತಮ್ಮ ಸಾಂವಿಧಾನಿಕ ಮಿತಿಯೊಳಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ. ಶಾಸಕಾಂಗ ಅಥವಾ ನ್ಯಾಯಾಂಗದಿಂದ ಆಡಳಿತದಲ್ಲಿನ ಯಾವುದೇ ಹಸ್ತಕ್ಷೇಪವು ಸಾಂವಿಧಾನಿಕತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಯುಪಿ ಆಯ್ತು.. ಲವ್ ಜಿಹಾದ್, ಬಲವಂತದ ಮತಾಂತರದ ವಿರುದ್ಧ ಸಮರ ಸಾರಿದ ಮಹಾರಾಷ್ಟ್ರ
ಅಲ್ಲದೇ ನ್ಯಾಯಾಂಗ ಪರಿಶೀಲನೆಯ ಶಕ್ತಿಯ ಕುರಿತು ಮಾತನಾಡಿರುವ ಅವರು, ಕಾನೂನುಗಳು ಸಂವಿಧಾನಕ್ಕೆ ಅನುಗುಣವಾಗಿ ಖಚಿತಪಡಿಸಿಕೊಳ್ಳುವುದು ಒಳ್ಳೆಯ ವಿಷಯ. ಆದರೆ ಸಂವಿಧಾನ ತಿದ್ದುಪಡಿ ವಿಷಯಕ್ಕೆ ಬಂದಾಗ, ಅಂತಿಮ ಅಧಿಕಾರ ಸಂಸತ್ತಿಗೆ ಇರುತ್ತದೆ ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ