ಚಿಕ್ಕಮಗಳೂರು: ಬಾಯ್ಲರ್ ರಿಪೇರಿ ಮಾಡುವಾಗ ಹೊರಬಂದ ಭಾರೀ ಪ್ರಮಾಣದ ಬಿಸಿ ಗಾಳಿಗೆ ಯುವಕನೊಬ್ಬ ಸಾವಿಗೀಡಾದ ಘಟನೆ ಹರಿಹರದಹಳ್ಳಿ ಸಮೀಪದ ಕಾಫಿ ಕ್ಯೂರಿಂಗ್ನಲ್ಲಿ (Coffee curing) ನಡೆದಿದೆ.
ಮೃತನನ್ನ ಕೊಡಗಿನ (Kodagu) ಕುಶಾಲನಗರ ಮೂಲದ ಉದಯ್ (28) ಎಂದು ಗುರುತಿಸಲಾಗಿದೆ. ರಿಪೇರಿ ವೇಳೆ ಬಾಯ್ಲರ್ನಿಂದ ಸುಮಾರು 340 ಡಿಗ್ರಿ ಸೆಲ್ಸಿಯಸ್ ಬಿಸಿ ಗಾಳಿಗೆ ಯುವಕ ಹಾರಿ ಬಿದ್ದಿದ್ದಾನೆ. ಬಿಸಿಯ ತೀವ್ರತೆಗೆ ಆತನ ದೇಹ ಸುಟ್ಟು ಕರಕಲಾಗಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: ಅಪ್ರಾಪ್ತನಿಂದ ಟ್ರ್ಯಾಕ್ಟರ್ ಅಪಘಾತ – ಬಾಲಕನ ತಂದೆ, ತಾಯಿ ವಿರುದ್ಧ ಎಫ್ಐಆರ್
ಯುವಕನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಕೇಸ್ – ಆರೋಪಿಗಳು 6 ದಿನ ಪೊಲೀಸ್ ಕಸ್ಟಡಿಗೆ