ಕಾರವಾರ: ವ್ಯಕ್ತಿಯೊಬ್ಬರು ದಾರಿಯಲ್ಲಿ ಬಿದ್ದಿದ್ದ ಮೂವತ್ತು ಸಾವಿರ ರೂ. ಮೌಲ್ಯದ ಬಂಗಾರ ಹಾಗೂ ಮೂರು ಸಾವಿರ ರೂ. ಹಣವನ್ನ ಕಳೆದುಕೊಂಡವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ನಗರದ ಕೋನೆವಾಡಾದ ಬೆಲ್ಟ್ ವ್ಯಾಪಾರಿ ಅಯುಬ್ ಮೊಹ್ಮದ್ ಶೇಖ್ ಎನ್ನುವವರೇ ಕಳೆದುಕೊಂಡವರಿಗೆ ವಸ್ತುಗಳನ್ನ ಮರಳಿಸಿದ ವ್ಯಕ್ತಿ. 45 ಗ್ರಾಂನ ಮಾಂಗಲ್ಯ, 20 ಗ್ರಾಂನ ಚಿನ್ನದ ಸರ, ಕರಿಮಣಿ ಸರ ಹಾಗೂ ಮೂರು ಸಾವಿರ ರೂಪಾಯಿಗಳಿದ್ದ ಪರ್ಸ್ ಹಿಂದಿರುಗಿಸಿ ಅಯುಬ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಎರಡು ದಿನಗಳ ಹಿಂದೆ ಸದಾಶಿವಗಡ ಮೂಲದ ಉದಯ ನಾಯ್ಕ ಎನ್ನುವವರು ಬಂಗಾರದ ಸರವಿದ್ದ ಪರ್ಸ್ ಕಳೆದುಕೊಂಡಿದ್ರು. ಈ ವಿಷಯ ತಿಳಿದು ಅಯುಬ್ ತಾವೇ ಸ್ವತಃ ಪೊಲೀಸರ ಸಮಕ್ಷಮದಲ್ಲಿ ಕಳೆದುಕೊಂಡವರಿಗೆ ಪರ್ಸ್ ಮರಳಿ ನೀಡಿದ್ದಾರೆ.