ಮಡಿಕೇರಿ: ಪ್ರಕೃತಿಯ ವಿಕೋಪಕ್ಕೆ ಕೊಡಗು ಬಲಿಯಾಗಿದೆ. ಜಿಲ್ಲೆಯ ಜನ ನೋವಿನಲಿದ್ದಾರೆ. ರಾಜ್ಯ ಸರ್ಕಾರ ಕೊಡಗಿನ ಪರ ಇದ್ದು, ಮನೆ ರಿಪೇರಿಗೆ ಅನುದಾನವನ್ನು ಶೀಘ್ರದಲ್ಲೇ ನೀಡುತ್ತೇವೆ ಎಂದು ವಸತಿ ಸಚಿವ ಯು.ಟಿ ಖಾದರ್ ಭರವಸೆ ನೀಡಿದ್ದಾರೆ.
ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಉಂಟಾದ ಪರಿಣಾಮ ಕೊಡಗಿನ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಸರ್ಕಾರ ಜಿಲ್ಲಾಡಳಿತ ಮೂಲಕ ಸಮರ್ಪಕ ಅನುದಾನ ನೀಡುತ್ತದೆ. ಮನೆ ರಿಪೇರಿಗೆ ಅನುದಾನ ಹಾಗೂ ಸಂಪೂರ್ಣ ಕುಸಿದ ಮನೆಗೆ ಹೆಚ್ಚಿನ ಅನುದಾನ ನೀಡುತ್ತೇವೆ ಅಂತ ಹೇಳಿದ್ರು.
ಅವೈಜ್ಞಾನಿಕ ಮನೆ ನಿರ್ಮಿಸಬೇಡಿ:
ಜಾಗ ಕಳೆದುಕೊಂಡವರಿಗೆ ಜಾಗ ಒದಗಿಸುವ ಯೋಜನೆ ಇದೆ. 7 ಕಡೆ ಜಾಗ ಗುರುತು ಮಾಡಲಾಗಿದೆ. ಹೌಸಿಂಗ್ ಕಾರ್ಪೋರೇಶನ್ ತಾತ್ಕಾಲಿಕವಾಗಿ ಜಿಲ್ಲೆಗೆ ಬರಲಿದೆ. ನೂತನ ತಂತ್ರಜ್ಞಾನದ ಮೂಲಕ ಮನೆ ಕಟ್ಟಲಾಗುವುದು. ಕುಶಾಲನಗರ ಭಾಗದಲ್ಲಿ ಜಾಗ ಗುರುತು ಮಾಡಲಾಗಿದೆ. ಮನೆ ಕಳೆದುಕೊಂಡವರ ಸಮೀಕ್ಷೆ ನಡೆಸಲಾಗುವುದು. ಕುಶಾಲನಗರದಲ್ಲಿ ಮನೆ ಕಳೆದುಕೊಂಡವರ 836 ಅರ್ಜಿಗಳು ಬಂದಿವೆ. ನಿಯಮಗಳನ್ನು ಕೂಡ ಜನ ಪಾಲಿಸಬೇಕು. ಜನ ಮನೆ ಕಟ್ಟುವ ಮುನ್ನ ಯೋಚನೆ ಮಾಡಬೇಕು. ಅವೈಜ್ಞಾನಿಕ ಮನೆ ನಿರ್ಮಾಣ ಮಾಡಬಾರದು ಅಂದ್ರು.
ಕೊಡಗಿನ ಮರುನಿರ್ಮಾಣ:
ಕಷ್ಟಕಾಲದಲ್ಲಿ ಮಾನವೀಯತೆಯನ್ನು ಮನುಕುಲ ಪ್ರದರ್ಶಿಸಿದೆ. ಕೊಡಗಿಗೆ ಜನಸಾಮಾನ್ಯರು ಸಹಾಯ ಮಾಡಿದ್ದಾರೆ. ಸಮಸ್ಯೆಯನ್ನು ವೈಜ್ಞಾನಿಕ ಪರಿಹಾರಿಸುತ್ತೇವೆ. ನಿರೀಕ್ಷೆಗಿಂತ ಉತ್ತಮವಾಗಿ ಕೊಡಗನ್ನು ಮರು ನಿರ್ಮಾಣ ಮಾಡ್ತೇವೆ ಅಂತ ಖಾದರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=KYPt_BTDW7s