ಬಾಗಲಕೋಟೆ: ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡ ಬೆಟ್ಟದಲ್ಲಿ ಇಂದು ನಿಧಿಯಿದೆ ಅಂತಾ ಹೇಳಿ ಬೆಟ್ಟವನ್ನು ಅಗಿಯಲಾಗುತ್ತಿದೆ. ಅಚ್ಚರಿ ಅಂದ್ರೆ ಯಾರೂ ಅಡ್ಡಿ ಮಾಡಬಾರದು ಅಂತಾ ವಾಮಾಚಾರ ಮಾಡಿ ಬೆಟ್ಟ ಅಗೆದು ನಿಧಿ ಹುಡುಕಾಡುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಐತಿಹಾಸಿಕ ಪರಂಪರೆಯ ಗುಳೇದಗುಡ್ಡಕ್ಕೆ ವಾಮಾಚಾರದ ಕಾಟ ಶುರುವಾಗಿದೆ. ಗುಳೇದಗುಡ್ಡ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟ 500 ಅಡಿ ಎತ್ತರವನ್ನು ಹೊಂದಿದೆ. ಚಾಲುಕ್ಯರ ಕುರುಹುಗಳಿರುವ ಈ ಬೆಟ್ಟದಲ್ಲಿ ಅಪಾರ ಐಶ್ವರ್ಯ ಸಂಪತ್ತಿದೆ ಎಂದು ಬೆಟ್ಟವನ್ನು ದುಷ್ಕರ್ಮಿಗಳು ಅಗೆಯಲಾರಂಭಿಸಿದ್ದಾರೆ. ಹೀಗಾಗಿ ಇತಿಹಾಸದ ಕುರುಹುಗಳು ನಾಶವಾಗ್ತಿರೋದ್ರ ಜೊತೆ ಸನಾತನ ಧರ್ಮದ ದೇವರ ಮೂರ್ತಿಗಳೂ ಹಾಳಾಗುತ್ತಿವೆ.
ಕಳ್ಳರು ನಿಧಿ ಆಸೆಗೆ ಬೆಟ್ಟ ಅಗೆಯುತ್ತಿದ್ರೂ ಸಂಬಂಧ ಪಟ್ಟ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಮಾತ್ರ ಕ್ರಮವನ್ನು ಕೈಗೊಂಡಿಲ್ಲ. ಒಟ್ಟಿನಲ್ಲಿ ನಿಧಿಗಳ್ಳರ ದುರಾಸೆಗೆ ಐತಿಹಾಸಿಕ ಬೆಟ್ಟ ಕರಗುತ್ತಿದೆ.