ಹೈಟೆನ್ಷನ್ ವೈರ್‌ನಡಿ ಮಸೀದಿ ನಿರ್ಮಾಣ ಆರೋಪ- ತೆರವಿಗೆ ಹಿಂದೂ ಸಂಘಟನೆಗಳ ಪಟ್ಟು

Public TV
2 Min Read
MOSQUE 6

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಧರ್ಮ ದಂಗಲ್ ಕಿಡಿ ನಿಧಾನಕ್ಕೆ ಕಾವೇರುತ್ತಿದೆ. ಹೈಟೆನ್ಷನ್ ವೈರ್ ಅಡಿ ಆಕ್ರಮವಾಗಿ ಮಸೀದಿ (Mosque) ನಿರ್ಮಾಣ ಆಗ್ತಿರೋ ಬಗ್ಗೆ ಹಿಂದೂ ಸಂಘಟನೆಗಳು ಆರೋಪಿಸಿದ್ದು, ತೆರವು ಮಾಡುವಂತೆ ಪಾಲಿಕೆಗೆ ದೂರು ನೀಡಿವೆ.

MOSQUE

ಪಾಲಿಕೆ ಒಂದಾದ ಬಳಿಕ ಮತ್ತೊಂದು ವಿವಾದಗಳನ್ನು ಥಳಕು ಹಾಕಿಕೊಳ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಆಕ್ರಮವಾಗಿ ಮಸೀದಿ ನಿರ್ಮಾಣವಾಗ್ತಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಿಂದೂ ಸಂಘಟನೆಗಳು ಪಾಲಿಕೆ ವಿರುದ್ಧ ಸಿಡಿದೆದ್ದಿದ್ದು, ಮಸೀದಿ ತೆರವಿಗೆ ಪಟ್ಟು ಹಿಡಿದಿವೆ.

MOSQUE 4

ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರದಲ್ಲಿ ಕೆಪಿಟಿಸಿಎಲ್ (KPTCL) ಹೈಟೆನ್ಷನ್ ವೈರ್ ಕೆಳಗಡೆ ಮಸೀದಿ ನಿರ್ಮಾಣ ಆಗುತ್ತಿದೆ. ಈ ಬಗ್ಗೆ ಪಾಲಿಕೆ, ಕೆಪಿಟಿಸಿಎಲ್ ಗಮನ ಹರಿಸಿಲ್ಲ. ಆಕ್ರಮ ಆರೋಪದ ಹಿನ್ನೆಲೆ ಬಿಬಿಎಂಪಿ ಹಲವೆಡೆ ನೂರಾರು ದೇವಸ್ಥಾನಗಳನ್ನ ತೆರವು ಮಾಡಿದೆ. ಆದರೆ ಮಸೀದಿ ವಿಚಾರಕ್ಕೆ ಬಂದಾಗ ಬಿಬಿಎಂಪಿ (BBMP) ಈ ರೀತಿ ಸೈಲೆಂಟ್ ಆಗ್ತಿರೋದ್ಯಾಕೆ? ಹಿಂದೂ ಸಂಘಟನೆಗಳು ಬಿಬಿಎಂಪಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುಮಲತಾ ಜೊತೆ ನಮ್ಮ ಕಾರ್ಯಕರ್ತರು ಗುರುತಿಸಿಕೊಳ್ಳಬೇಡಿ: ಮಂಡ್ಯ ಕಾಂಗ್ರೆಸ್

MOSQUE 2

ಈ ವಿಷಯ ತಿಳಿಯುತ್ತಿದಂತೆ ಬಿಬಿಎಂಪಿ ವಿರುದ್ಧ ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ಹೈಟೆನ್ಷನ್ ಲೈನ್ ಕೇಳಗೆ ಮಸೀದಿ ನಿರ್ಮಾಣವಾದ್ರು ಕ್ರಮಕೈಗೊಳ್ಳದೇ ಅಧಿಕಾರಿಗಳು ಸುಮ್ಮನಿದ್ದಾರೆ. ಇದೇ ವಿಚಾರವಾಗಿ ಬಿಬಿಎಂಪಿಗೆ ಮಸೀದಿ ತೆರವು ಮಾಡುವಂತೆ ದೂರು ನೀಡಿದ್ದಾರೆ. ಕೆಪಿಟಿಸಿಎಲ್ ಹೈಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ. ಹೈಟೆನ್ಷನ್ ಲೈನ್ ಕೆಳಗೆ ಯಾವುದೇ ಕಾಮಗಾರಿ ನಡೆಸುವುದು ಸುರಕ್ಷತಾ ದೃಷ್ಟಿಯಿಂದ ಸರಿಯಲ್ಲ. ಆದರೂ ಸಿಂಗಸಂದ್ರದಲ್ಲಿ 3-4 ಅಂತಸ್ತಿನ ಅಕ್ರಮ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ. ಒಂದೊಮ್ಮೆ ಮನವಿಗೆ ಸ್ಪಂದಿಸಿ ಮಸೀದಿ ತೆರವು ಮಾಡದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

MOSQUE 5

ಹಿಂದೂ ಸಂಘಟನೆಗಳ ಮನವಿ ಬೆನ್ನಲ್ಲೆ ಬಿಬಿಎಂಪಿ ಕೂಡ ಅಲರ್ಟ್ ಆಗಿದ್ದು, ಈ ಬಗ್ಗೆ ಬಿಬಿಎಂಪಿ ಕಮಿಷನರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಟಿಸಿಎಲ್ ಲೈನ್ ಕೆಳಗೆ ತಮ್ಮ ಭೂಮಿ ಇದ್ದರೂ ನಿರ್ಮಾಣಕ್ಕೆ ನಿರ್ಬಂಧ ಇದೆ. ಇದನ್ನ ವೈಯಲನ್ಸ್ ಮಾಡಿ ನಿರ್ಮಾಣ ಮಾಡಿದ್ರೆ ಕ್ರಿಮಿನಲ್ ಕೇಸ್ ಹಾಕಬಹುದು. ಈಗ ನಿರ್ಮಾಣ ಆಗುತ್ತಿರೋ ಕಟ್ಟಡಕ್ಕೆ ನಾವು ಪರ್ಮಿಷನ್ ಕೊಟ್ಟಿಲ್ಲ. ನಮ್ಮಲ್ಲಿ ನಿರ್ಮಾಣ ಮಾಡದಂತೆ ರೂಲ್ಸ್ ಇದೆ. ಈ ರೀತಿ ಆದರೆ ಓನರ್ ಗೆ ಹೇಳಿ ಡೆಮಾಲಿಷನ್‍ಗೆ ತಿಳಿಸುತ್ತೇವೆ. ಸದ್ಯ ಇದನ್ನ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

MOSQUE 3

ಒಟ್ಟಾರೆ ವಿವಾದ ತಣ್ಣಗಿರುವಾಗಲೇ ಬಿಬಿಎಂಪಿ ಸಮಸ್ಯೆ ಬಗೆಹರಿಸಬೇಕಿದೆ. ಇಲ್ಲಂದ್ರೆ ಮತ್ತೆ ವಿವಾದ ಕಾಡ್ಗಿಚ್ಚಾದ್ರು ಆಶ್ಚರ್ಯ ಪಡಬೇಕಿಲ್ಲ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *