Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಭಾರತ ವಿಕಾಸದ ದಿಕ್ಕಲ್ಲಿ ಓಡುತ್ತಿದೆ, ಹಿಂದೂ-ಮುಸಲ್ಮಾನರು ಒಗ್ಗೂಡಿ ದೇಶ ಕಟ್ಟೋಣ: ಸೂಲಿಬೆಲೆ

Public TV
Last updated: November 9, 2019 3:00 pm
Public TV
Share
5 Min Read
chakravarti sulibele
SHARE

ಬೆಂಗಳೂರು: ಶತಮಾನಗಳ ಅಯೋಧ್ಯೆ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ದೇಶ ವಿಕಾಸದತ್ತ ಓಡುತ್ತಿದೆ. ಹಿಂದೂ ಮುಸಲ್ಮಾನರು ಒಗ್ಗೂಡಿ ಭಾರತವನ್ನು ಕಟ್ಟೋಣ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಅಯೋಧ್ಯೆ ತೀರ್ಪಿನ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ನಾನು ಏನಾದರೂ ಹೇಳಿದರೆ ಕಡಿಮೆಯಾಗಬಹುದು. ಇವತ್ತು ನನ್ನ ಜೀವನದ ಅತ್ಯಂತ ಸಂಭ್ರಮದ ದಿನಗಳಲ್ಲಿ ಒಂದು. ಕಳೆದ 2-3 ದಶಕದಿಂದ ಅಯೋಧ್ಯೆ ತೀರ್ಪು ಹೀಗೆ ಬರಬಹುದು, ಹಾಗೆ ಬರಬಹುದು ಎಂದು ಕನಸು ಕಂಡಿದ್ದೆವು. ಅದು ಇಂದು ನನಸಾಗಿರೋದು ನಮಗೆ ಆಕಾಶದಲ್ಲಿ ತೇಲಾಡುತ್ತಿರುವ ಅನುಭವ ನೀಡಿದೆ. ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೆ ಭಾವನಾತ್ಮಕ ಪ್ರಸಂಗ ಅನಿಸುತ್ತಿತ್ತು. ನಮ್ಮೆಲ್ಲರಿಗೂ ಮನಸ್ಸಿಗೆ ಮುದಾ ಕೊಡುವಂತಹ ತೀರ್ಪನ್ನು ಸುಪ್ರೀಂ ಕೋರ್ಟ್ ಕೊಟ್ಟಿದೆ. ಆದ್ದರಿಂದ ಸುಪ್ರೀಂ ಕೋರ್ಟಿಗೆ ಅತ್ಯಂತ ಪ್ರೀತಿಪೂರ್ವಕವಾದ ಧನ್ಯವಾಗಳನ್ನು ಸರ್ಮಪಿಸಲು ಇಚ್ಛಿಸುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು. ಇದನ್ನೂ ಓದಿ:ಅಯೋಧ್ಯೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು – ಸುಪ್ರೀಂ ಐತಿಹಾಸಿಕ ತೀರ್ಪು

images

ಇದು ಭಾರತ ಸಾರ್ವಭೌಮ ರಾಷ್ಟ್ರ ಎನ್ನುವುದನ್ನು ನಿರೂಪಿಸಿದೆ. 370ನೇ ವಿಧಿ ರದ್ಧತಿ ಆದಾಗಲೇ ಭಾರತ ತೋರಿದ ಏಕತೆ ಹಿಂದೂ-ಮುಸಲ್ಮಾನರಲ್ಲಿ ದೇಶ ಗಟ್ಟಿಯಾಯಿತು ಎಂಬ ಭಾವನೆ ಮೂಡಿಸಿತು. ಇವತ್ತು ಬಂದ ತೀರ್ಪು ಭಾರತ ಬಲಾಢ್ಯವಾಗಿರುತ್ತೆ ಎನ್ನುವುದನ್ನ ಮತ್ತೊಮ್ಮೆ ಸಾಭೀತುಗೊಳಿಸಿದೆ. ಭಾರತ ಮತ್ತೆ ತನ್ನ ಪರಂಪರೆಯ ಬೇರಿಗೆ ಮರಳುತ್ತಿದೆ. ದೇಶದ ಘನತೆಯನ್ನ ಜಗತ್ತಿಗೆ ತೋರಿಸುವ ಸಂದರ್ಭ ಬಂದಿದೆ. ಈಗ ಅಯೋಧ್ಯೆ ಜಗಳ ಸರಿಹೋಗದಿದ್ದಿದ್ದರೆ ಇನ್ನೂ 100 ವರ್ಷ ಕಳೆದರೂ ಇದೇ ಜಗಳ ಮುಂದುವರಿಯುತಿತ್ತು. ಎಲ್ಲೋ ಒಂದು ಕಡೆ ಇದಕ್ಕೆ ಪೂರ್ಣವಿರಾಮ ಬೀಳಬೇಕಿತ್ತು. ಅದು ಇವತ್ತು ನಡೆದಿದೆ. ಇನ್ನು ನಾವು ಈ ಮಂದಿರ-ಮಸೀದಿಯ ಜಗಳದಿಂದ ಮೇಲಕ್ಕೆ ಬರುತ್ತಾ ಭಾರತದ ವಿಕಾಸದತ್ತ ಓಡುತ್ತಿದೆ. ಅದರ ದಿಕ್ಕಲ್ಲಿ ನಾವೂ ನಡೆಯೋದು ಒಳಿತೆಂದು ನನಗೆ ಅನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Ayodhya Judge 1

ಮೊದಲೇ ಮುಸ್ಲಿಮರು ಸಂಧಾನಕ್ಕೆ ಒಪ್ಪಿದ್ದರೆ ಇನ್ನೂ ಸುಂದರವಾಗಿರುತ್ತಿತ್ತು. ಹಿಂದೂಗಳು ಕೂಡ ಅವರು ಪ್ರತ್ಯೇಕ ಜಾಗ ನೀಡಲು ಸಿದ್ಧರಾಗಿದ್ದರು. ಅದಕ್ಕೆ ಒಪ್ಪಿದ್ದರೆ ಮುಸಲ್ಮಾನರು ಪ್ರೀತಿಯಿಂದ ಜಾಗ ಬಿಟ್ಟುಕೊಟ್ಟರು ಎನ್ನುವ ಸೌಹಾರ್ದತೆ ಇರುತ್ತಿತ್ತು. ಇವತ್ತು ಹಾಗಿಲ್ಲ, ಇದು ಕೋರ್ಟಿನಿಂದ ಆಗಿದೆ. ಎಲ್ಲರೂ ಕೋರ್ಟಿಗೆ ತಲೆ ಬಾಗಬೇಕು ಎನ್ನುವ ರೀತಿ ಆಗಿದೆ.

ದೇಶದ ಬಹುತೇಕ ಮುಸಲ್ಮಾನರು ಸುಪ್ರೀಂ ತೀರ್ಪನ್ನು ಒಪ್ಪಿದ್ದಾರೆ. ಇದು ಬಹಳ ಸಂತೋಷದ ವಿಚಾರವಾಗಿದೆ. ತೀರ್ಪು ಒಪ್ಪಿದ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ದುರಾದೃಷ್ಟಕರ ಸಂಗತಿಯೆಂದರೆ ಅಲ್ಲಿನ ಸುನ್ನಿ ಬೋರ್ಡ್ ತೀರ್ಪು ಒಪ್ಪದೆ ಮುಂದಕ್ಕೆ ತೆಗದುಕೊಂಡು ಹೋಗುತ್ತೇವೆ ಎಂದಿದ್ದಾರೆ. ಪ್ರಕರಣವನ್ನು ಜೀವಂತವಾಗಿರಿಸಲು ಪ್ರಯತ್ನಿಸುತ್ತಿದೆ. ಆದರೆ ನನ್ನ ಪ್ರಕಾರ ಈ ಪ್ರಕರಣ ಅಂತ್ಯವಾಗಿದೆ. ಮುಖ್ಯನ್ಯಾಯಾಧೀಶರು ಸಂಪೂರ್ಣ ಆಧಾರ ಪರಿಗಣಿಸಿ ಪ್ರಕರಣಕ್ಕೆ ತೆರೆಗಾಣಿಸಿದ್ದಾರೆ. ಹೀಗಾಗಿ ಎಲ್ಲಾ ಮುಸಲ್ಮಾನರಲ್ಲೂ ನಾನು ಕೋರಿಕೊಳ್ಳುತ್ತೇನೆ, ನಾವು ಮತ್ತು ನೀವು ರಾಷ್ಟ್ರವನ್ನ ಕಟ್ಟುವುದಲ್ಲಿ ಜೊತೆಯಾಗಿ ದೀರ್ಘಕಾಲ ನಡೆಯಬೇಕಾದ ಅವಕಾಶವಿದೆ, ಅಗತ್ಯವಿದೆ. ಇಬ್ಬರೂ ಜೊತೆಯಾಗಿ ಸಾಗೋಣ. ಇನ್ನು ಈ ಗಲಾಟೆಯನ್ನು ಮುಂದುವರಿಸುವುದು ಬೇಡ. ಗಲಾಟೆಯನ್ನು ಮುಗಿಸುವುದಕ್ಕೆ ಈ ಹಂತದಲ್ಲಿ ಪ್ರಯತ್ನಿಸೋಣ ಎಂದು ಮನವಿ ಮಾಡಿಕೊಂಡರು.

ayodhya final

ಯಾರು ಈ ಪ್ರಕರಣದ ಪ್ರೊಸಿಡಿಂಗ್ಸ್ ಬಗ್ಗೆ ಕೇಳಿದ್ದರೋ, ನೋಡಿದ್ದರೋ ಅವರಿಗೆ ಅಯೋಧ್ಯೆಯ ಜಾಗ ಹಿಂದೂಗಳಿಗೆ ಸೇರುತ್ತೆ ಎಂದು ಗೊತ್ತಿತ್ತು. ಇದು ಬಹಳ ಸ್ಪಷ್ಟವಾದ ಸಂಗತಿಯಾಗಿತ್ತು. ಯಾಕೆಂದರೆ ಇಡೀ ವಾದದಲ್ಲಿ ಭಾರತದ ಪುರಾತತ್ವ ಸಮೀಕ್ಷೆ ಮಾತ್ರ ವೈಜ್ಞಾನಿಕ ಸಾಕ್ಷ್ಯಗಳನ್ನು ಕೋರ್ಟಿಗೆ ಸಲ್ಲಿಸಿತ್ತು. ಅದನ್ನು ಬಿಟ್ಟು ಬೇರೆ ಸಾಕ್ಷ್ಯಗಳಲ್ಲಿ ಬ್ರಿಟಿಷ್ ಅಧಿಕಾರಿಗಳ ಹೇಳಿಕೆ, ಮುಸ್ಲಿಂ ರಾಜರುಗಳ ಹೇಳಿಕೆ ಮಾತ್ರವಿತ್ತು. ಯಾವುದೇ ಆಯಾಮದಲ್ಲಿ ನೋಡಿದರೂ ಕೂಡ ಪುರಾತತ್ವ ಸಮೀಕ್ಷೆಯ ಸಾಕ್ಷ್ಯಗಳು ಈ ಭೂಮಿಯ ಮೇಲೆ ಮಂದಿರ ಇತ್ತು ಎನ್ನುವುದನ್ನು ಸ್ಪಷ್ಟಪಡಿಸಿದೆ.

vlcsnap 2019 11 09 14h26m41s414

ಮುಸ್ಲಿಮರು ಕೂಡ ಸ್ಪಷ್ಟವಾಗಿ ಇದು ರಾಮನ ಜನ್ಮಭೂಮಿ ಎಂದು ಒಪ್ಪಿಕೊಂಡಿದ್ದರು. ಹಿಂದೂಗಳೂ ಅದನ್ನೇ ಹೇಳುತ್ತಿದ್ದರು. ಹೀಗಾಗಿ ಅದು ವಿವಾದವಿಲ್ಲದ ಜಾಗವಾಗಿತ್ತು. ಆದರೆ ರಾಜಕೀಯ ಕಾರಣಗಳಿಂದ ಹಾಗೂ ಬಂದ ಸರ್ಕಾರಗಳು ಅಯೋಧ್ಯೆ ತೀರ್ಪು ಬಂದರೆ ಮುಸ್ಲಿಮರು ಧಂಗೆ ಏಳುತ್ತಾರೆ ಎನ್ನುವ ಭಯ ಹುಟ್ಟಿಸಿತ್ತು. ಆದ್ದರಿಂದ ಈ ಪ್ರಕರಣದ ತೀರ್ಪು ಬಂದಿರಲಿಲ್ಲ ಅಷ್ಟೇ. ಅದನ್ನು ಬಿಟ್ಟರೆ ಈ ಪ್ರಕರಣ ಹಿಂದೂಗಳ ಪರವಾಗಿಯೇ ಬರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಅಯೋಧ್ಯೆ ಪ್ರಕರಣವನ್ನು ಕೈಗೆತ್ತಿಕೊಂಡು ಆದಷ್ಟು ಬೇಗ ಇದಕ್ಕೆ ಇತಿಶ್ರೀ ಹಾಡಲು ಮುಂದಾದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಮೂರ್ತಿ ರಂಜನ್ ಗೊಗೊಯ್ ಅವರಿಗೆ ಹೃದಯಪೂರ್ವಕ ಅಭಿನಂದನೆಯನ್ನು ಸೂಲಿಬೆಲೆ ಅವರು ತಿಳಿಸಿದರು.

ಕೇಂದ್ರ ಸರ್ಕಾರ 370ನೇ ವಿಧಿಯನ್ನು ರದ್ದು ಮಾಡಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಂಡಿತ್ತು. ಇದು ಅಯೋಧ್ಯೆ ತೀರ್ಪನ್ನು ಹೊರಡಿಸಲು ಸಹಾಯವಾಯ್ತು. ಕೇಂದ್ರದಲ್ಲಿ ಸಾರ್ವಭೌಮ ಸರ್ಕಾರವಿದೆ, ಇದು ಪರಿಸ್ಥಿತಿಯನ್ನು ನಿಯಂತ್ರಿಸುತ್ತೆ ಎಂದು ಗೊತ್ತಿತ್ತು. ಹೀಗಾಗಿ ನ್ಯಾಯಾಧೀಶರು ನಾವು ಮಾಡಬೇಕಾದ ಕೆಲಸ ಮಾಡೋಣ ಎಂದು ಅಯೋಧ್ಯೆ ತೀರ್ಪನ್ನು ಹೊರಡಿಸಿದ್ದಾರೆ.

ಶುಕ್ರವಾರದಂದು ನಾಳೆ ಅಯೋಧ್ಯೆ ತೀರ್ಪು ಹೊರಬೀಳುತ್ತೆ ಎಂದು ತಿಳಿದಾಗಲೇ ಅದು ಹಿಂದೂಗಳ ಪರವಾಗಿಯೇ ಬರುತ್ತೆ ಎಂಬ ನಂಬಿಕೆ ಇತ್ತು. ಆದರೂ ಎಲ್ಲೋ ಒಂದು ಕಡೆ ಸ್ವಲ್ಪ ಆತಂಕ ಕೂಡ ಇತ್ತು. ಅದನ್ನು ಬಿಟ್ಟರೆ ಅಯೋಧ್ಯೆ ತೀರ್ಪು ರಾಮನ ಪರವಾಗಿಯೇ ಬರುತ್ತೆ ಎಂದು ಗೊತ್ತಿತ್ತು ಎಂದು ಹೇಳಿದರು.

ranjan gogoi

10.30ಕ್ಕೆ ಸುಪ್ರೀಂ ತೀರ್ಪು ಆರಂಭವಾದಾಗಿನಿಂದಲೂ ನಾನು ಸಾಮಾಜಿಕ ಜಾಲತಾಣ ಹಾಗೂ ಎಲ್ಲರೂ ಮಾಡುತ್ತಿದ ಟ್ವೀಟ್‍ಗಳನ್ನು ಗಮನಿಸುತ್ತಿದ್ದೆ. ಮೊದಲು ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ನಿಜ ಎಂದು ಒಪ್ಪಿಕೊಳ್ಳಬೇಕಾಗುತ್ತೆ ಎಂದಾಗ ಹಿಂದೂಗಳ ಪರವಾಗಿಯೇ ತೀರ್ಪು ಬರತ್ತೆ ಎಂದು ಖುಷಿಯಾಯ್ತು. ಬಳಿಕ ಪುರಾತತ್ವ ಇಲಾಖೆ ನಿಖರವಾಗಿ ತಿಳಿಸಿಲ್ಲ ಎಂದಾಗ ಆತಂಕವಾಯ್ತು. ಕೊನೆಗೆ ಶಿಯಾ ಇದು ತಮ್ಮದೇ ಜಾಗವೆಂದು ಸುಪ್ರೀಂ ಕೋರ್ಟಿನಲ್ಲಿ ಸಾಬೀತುಪಡಿಸಲು ಸಾಧ್ಯವಾಗದ ಹಿನ್ನೆಲೆ ಇದನ್ನ ಹಿಂದೂಗಳಿಗೆ ಕೊಡಬೇಕು. ಮುಸಲ್ಮಾನರಿಗೆ ಪ್ರತ್ಯೇಕ ಜಾಗ ಕೊಡಬೇಕು ಎಂದು ತೀರ್ಪು ನೀಡಿತು. ಇದನ್ನು ನೋಡುತ್ತಿದ್ದಾಗ 20-20 ಕ್ರಿಕೆಟ್ ಮ್ಯಾಚ್ ನೋಡಿದ ಹಾಗೆ ಆಗುತಿತ್ತು ಎಂದರು.

Prime Minister Narendra Modi tweets on #AyodhyaJudgment pic.twitter.com/TOKhgi33Jy

— ANI (@ANI) November 9, 2019

ರಾಮ ಮಂದಿರ ಹೇಗಿರಬೇಕು ಎನ್ನುವುದರ ಪ್ಲಾನ್ ದಶಕಗಳ ಹಿಂದೆಯೇ ಮಾಡಲಾಗಿದೆ. ಮಂದಿರ ನಿರ್ಮಾಣಕ್ಕೆ ಸಿದ್ಧತೆಗಳು ಕೂಡ ಮಾಡಿಕೊಂಡಾಗಿದೆ. ಕೆಲವೇ ತಿಂಗಳುಗಳಲ್ಲಿ ರಾಮ ಮಂದಿರವನ್ನು ಕಟ್ಟಿ ಮುಗಿಸಬಹುದು. ಆದರೆ ದೇಶದ ದೃಷ್ಟಿಯಲ್ಲಿ ಮಂದಿರವೆಂದರೆ ಅದು ವಿದ್ಯಾ ಕೇಂದ್ರವೂ ಆಗಿರಬೇಕು, ಆರೋಗ್ಯ ಕೇಂದ್ರವೂ ಆಗಿರಬೇಕು, ಜ್ಞಾನ ಪ್ರಸಾದ ಕೇಂದ್ರವೂ ಆಗಿರಬೇಕು ಹಾಗೂ ರಾಮನ ಚಿಂತನೆಗಳನ್ನ, ಮೌಲ್ಯಗಳನ್ನ ಜಗತ್ತಿಗೇ ಸಾರುವ ಕೇಂದ್ರ ಆಗಿರಬೇಕು. ಮತ್ತೊಮ್ಮೆ ಅಯೋಧ್ಯೆ ಭೂಪಟದಲ್ಲಿ ಇಡೀ ಜಗತ್ತೆ ನೋಡುವಂತಹ ಸ್ಥಳವಾಗಬೇಕು ಎಂದು ಹೇಳಿದರು.

#WATCH "It is a historic and landmark judgement," says Defence Minister Rajnath Singh on #AyodhyaJudgment pic.twitter.com/0hKNBV79Co

— ANI (@ANI) November 9, 2019

ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿನ 2.77 ಎಕ್ರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕೆ 5 ಎಕ್ರೆ ಪ್ರತ್ಯೇಕ ಜಾಗ ನೀಡಬೇಕೆಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ.

ರಂಜನ್ ಗೊಗೋಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧನಿಕಾ ಪೀಠ ಸರ್ವ ಸಮ್ಮತದ ತೀರ್ಪು ಪ್ರಕಟಿಸಿದೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ ಎಂದು ತಿಳಿಸಿದೆ.

TAGGED:Ayodhya verdictChakravarti SulibelehindumuslimPublic TVRam MandirSupreme Courtಅಯೋಧ್ಯೆ ತೀರ್ಪುಚಕ್ರವರ್ತಿ ಸೂಲಿಬೆಲೆಪಬ್ಲಿಕ್ ಟಿವಿಮುಸ್ಲಿಂರಾಮ ಮಂದಿರಸುಪ್ರೀಂ ಕೋರ್ಟ್ಹಿಂದೂ
Share This Article
Facebook Whatsapp Whatsapp Telegram

Cinema Updates

Kamal Haasan
ಕರ್ನಾಟಕದಲ್ಲಿ ಥಗ್‌ ಲೈಫ್‌ ರಿಲೀಸ್‌ಗಾಗಿ ಸುಪ್ರೀಂಗೆ PIL
3 hours ago
rakshitha prem
ಇಷ್ಟು ಜನ ಸೇರ್ತಾರೆ ಅಂತಾ ಗೊತ್ತಿರ್ಲಿಲ್ಲ ಅನ್ನೋದು ಎಷ್ಟು ಸರಿ? – ಕಾಲ್ತುಳಿತ ದುರಂತಕ್ಕೆ ರಕ್ಷಿತಾ ಬೇಸರ
6 hours ago
Khushi Mukherjee
ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ
7 hours ago
jayam ravi
ವದಂತಿ ಗೆಳತಿ ಜೊತೆ ಹಾರ ಹಾಕಿಸಿಕೊಂಡ ಜಯಂ ರವಿ
7 hours ago

You Might Also Like

ramesh rai
Crime

ಪುತ್ತೂರು ನಗರಸಭಾ ಸದಸ್ಯ ರಮೇಶ್‌ ರೈ ಮೃತದೇಹ ಪತ್ತೆ

Public TV
By Public TV
3 hours ago
B.Dayananda and other 5 police officers suspended
Bengaluru City

ಕಾಲ್ತುಳಿತ ಪ್ರಕರಣ – ಬೆಂಗಳೂರು ಪೊಲೀಸ್‌ ಕಮಿಷನರ್‌ ಸೇರಿ 5 ಪೊಲೀಸ್‌ ಅಧಿಕಾರಿಗಳು ಸಸ್ಪೆಂಡ್‌

Public TV
By Public TV
4 hours ago
seemanth kumar singh
Bengaluru City

ಬೆಂಗಳೂರು ನೂತನ ಪೊಲೀಸ್‌ ಕಮಿಷನರ್‌ ಆಗಿ ಸೀಮಂತ್‌ ಕುಮಾರ್‌ ಸಿಂಗ್‌ ನೇಮಕ

Public TV
By Public TV
3 hours ago
Mahua Moitra Pinaki Misra 1
Latest

ಬಿಜೆಡಿ ಮಾಜಿ ಸಂಸದನ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೋಯಿತ್ರಾ – ಜರ್ಮನಿಯಲ್ಲಿ ಮದುವೆಯಾಗಿರುವ ಫೋಟೋ ವೈರಲ್

Public TV
By Public TV
3 hours ago
rcb bengaluru stampede
Bengaluru City

ಬೆಂಗಳೂರು ಕಾಲ್ತುಳಿತಕ್ಕೆ 11 ಸಾವು ಕೇಸ್‌ – ಆರ್‌ಸಿಬಿ, ಕೆಎಸ್‌ಸಿಎ ಪ್ರತಿನಿಧಿಗಳ ಬಂಧನಕ್ಕೆ ಸಿಎಂ ಸೂಚನೆ

Public TV
By Public TV
4 hours ago
Sindoor Plant 1
Latest

ದೆಹಲಿ ನಿವಾಸದ ಎದುರು ಸಿಂದೂರ ಸಸಿ ನೆಟ್ಟ ಮೋದಿ

Public TV
By Public TV
5 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?