ದರ್ಗಾ ಜಾತ್ರೆಗಾಗಿ ರಸ್ತೆ ನಿರ್ಮಾಣ ಮಾಡಿ ಐಕ್ಯತೆ ಮೆರೆದ ಗ್ರಾಮಸ್ಥರು

Public TV
1 Min Read
PUBLIC HERO 5

ಕಲಬುರುಗಿ: ಚುನಾವಣೆ ಹತ್ತಿರ ಬರುತ್ತಿದ್ದಂತೆ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡುವುದು ಸಾಮಾನ್ಯ, ಆದರೆ ಜಿಲ್ಲೆಯ ತರಕಸಪೇಟ ಗ್ರಾಮದ ದರ್ಗಾ ಜಾತ್ರೆಗಾಗಿ ಹಿಂದು-ಮುಸ್ಲಿಮರು ಐಕ್ಯತೆ ಮೆರೆದಿದ್ದು, ತಾವೇ ರಸ್ತೆ ನಿರ್ಮಿಸಿಕೊಂಡು, ಜನಪ್ರತಿನಿಧಿಗಳಿಗೆ ಪಾಠ ಕಲಿಸಿದ್ದಾರೆ.

PUBLIC HERO 2

ಜಿಲ್ಲೆ ಚಿತ್ತಾಪುರ ತಾಲೂಕಿನ ತರಕಸಪೇಟದ ಈ ಗ್ರಾಮದ ಹೊರವಲಯದ ಶಾಪೀರ್ ವಲಿ-ಗೈಪೀರ್ ವಲಿ ದರ್ಗಾದ ಬೃಹತ್ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಹಿಂದು-ಮುಸ್ಲಿಮರು ಒಟ್ಟಿಗೆ ಸೇರುತ್ತಾರೆ. ಆದರೆ ಗ್ರಾಮದಿಂದ ಒಂದೂವರೆ ಕಿ.ಮೀ. ದೂರದ ದರ್ಗಾಕ್ಕೆ ರಸ್ತೆ ನಿರ್ಮಾಣವಾಗಿಲ್ಲ. ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ರೋಸಿಹೋದ ತರಕಸಪೇಟದ ಗ್ರಾಮಸ್ಥರು ತಮ್ಮಲ್ಲೇ ಹಣ ಸಂಗ್ರಹಿಸಿ ಕಚ್ಚಾ ರಸ್ತೆ ನಿರ್ಮಿಸಿಕೊಂಡಿದ್ದಾರೆ.

ಗ್ರಾಮದ ಜನ ನಿರ್ಮಿಸಿರುವ ರಸ್ತೆ ಚಿಕ್ಕದಾದರೂ ಇವರ ಭಾವೈಕತೆಯ ಮನಸ್ಸು ಮಾತ್ರ ದೊಡ್ಡದು. ಈ ಕಚ್ಚಾ ರಸ್ತೆಗೆ ಮುಂಬರುವ ದಿನಗಳಲ್ಲಿ ಡಾಂಬರೀಕರಣ ಮಾಡಲು ಸಹ ಗ್ರಾಮಸ್ಥರೇ ಸಿದ್ಧತೆ ಕೈಗೊಂಡಿದ್ದಾರೆ.

PUBLIC HERO 1

Share This Article
Leave a Comment

Leave a Reply

Your email address will not be published. Required fields are marked *